
ಹಗರಿಬೊಮ್ಮನಹಳ್ಳಿ, : ಓದುವ ಮಕ್ಕಳಿಗೆ ಉತ್ತೇಜನ ನೀಡುವ ಹಿನ್ನೆಲೆ ಹಾಗೂ ಅವರಲ್ಲಿ ಶಿಸ್ತನ್ನು ಬೆಳೆಸುವ ಸಲುವಾಗಿ ಸರ್ಕಾರ ಉಚಿತ ಶೂ ಹಾಗೂ ಸಾಕ್ಸ್ ವಿತರಿಸುತ್ತಿದೆ ಎಂದು ಪುರಸಭೆ ಅಧ್ಯಕ್ಷ ಎಂ.ಮರಿರಾಮಪ್ಪ ಹೇಳಿದರು.
ಪಟ್ಟಣದ 21ನೇ ವಾರ್ಡ್ನ ರಾಮನಗರದ ಸರ್ಕಾರಿ ಶಾಲೆಯಲ್ಲಿ ಶೂ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅದೇ ರೀತಿ ಸರ್ಕಾರಿ ಶಾಲಾ ಮಕ್ಕಳಿಗೂ ಸಹ ಶೂ ಹಾಗೂ ಸಮವಸ್ತ್ರಗಳನ್ನು ಉಚಿತವಾಗಿ ಸರ್ಕಾರ ನೀಡುತ್ತಿದೆ. ಯಾವುದೇ ಖಾಸಗಿ ಶಾಲೆಗಿಂತ ಮಕ್ಕಳಿಗಿಂತ ನಮ್ಮ ಸರ್ಕಾರಿ ಶಾಲೆಯ ಮಕ್ಕಳು ಕಡಿಮೆಏನಿಲ್ಲ.
ವಿದ್ಯಾಭ್ಯಾಸದಲ್ಲೂ ಸಹ ಸ್ಪರ್ಧಾತ್ಮಕವಾಗಿ ಮುಂಚೂ ಣೆಯಲ್ಲಿದ್ದಾರೆ. ಯಾರೂ ಕದಿಯಲಾರದ ವಸ್ತು ವಿದ್ಯೆಯಾಗಿರುವುದರಿಂದ ಇದನ್ನು ಚನ್ನಾಗಿ ಕಲಿತು ಮುಂದಿನ ಜೀವನದಲ್ಲಿ ಸಮಾಜಕ್ಕೆ ವಿದ್ಯಾರ್ಥಿಗಳು ಮಾದರಿಯಾಗಲಿ ಎಂದರು.
ಈ ಸಂದರ್ಭದಲ್ಲಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಕೆ.ಶಾಬುದ್ದೀನ್, ಸೆರೆಗಾರ್ ಹುಚ್ಚಪ್ಪ ಸೇ- ರಿದಂತೆ ಶಾಲಾ ಶಿಕ್ಷಕ ಮುರುಘಾರಾಜ್, ಶಿಕ್ಷಕಿಯ ರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.