ಹಗರಿಬೊಮ್ಮನಹಳ್ಳಿ: ಜೆಸ್ಕಾಂ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಕಚೇರಿ ಮೇಲೆ ಲೋಕಾಯುಕ್ತ ದಾಳಿ

Loading

ಹಗರಿಬೊಮ್ಮನಹಳ್ಳಿ: ಪಟ್ಟಣದ ಜೇಸ್ಕಾಂ ಇಲಾಖೆಯ ವಿಭಾಗಿಯ ಕಚೇರಿಯ ಮೇಲೆ ಲೋಕಾಯುಕ್ತ ಅಧಿಕಾರಿ ರಾಜೇಶ್ ಲಮಾಣಿ ನೇತೃತ್ವದಲ್ಲಿ ಬುಧವಾರ ಸಂಜೆ ದಾಳಿ ನಡೆದಿದೆ.

ಕೊಪ್ಪಳ ನಗರದ ಶ್ರೀ ಗವಿಸಿದ್ದಯ್ಯ ಹಿರೇಮಠ ಎನ್ನುವವರು ಜೆಸ್ಕಾಂ ಇಲಾಖೆಗೆ ತಮ್ಮ ಫೋರ್ಡ್ ಕಾರನ್ನು ಗುತ್ತಿಗೆ ಆಧಾರದ ಮೇಲೆ ಬಿಟ್ಟಿದ್ದು ಅದನ್ನು ನವೀಕರಣ ಮಾಡಲು ಇಲಾಖೆಯ ಇ ಇ ಹುಸೇನ್ ಸಾಬ್ ಅವರಿಗೆ ತಿಳಿಸಿದ್ದು ಇದಕ್ಕೆ 10 ಸಾವಿರ ಲಂಚದ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಕ್ರಮ ಜರುಗಿಸುವಂತೆ ಕೊಪ್ಪಳದ ಗವಿಸಿದ್ದಯ್ಯ ನವರು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದು ಅದರಂತೆ ಇ ಇ ಹಸೇನ್ ಸಾಬ್ ಅವರು ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.ದಾಳಿ ವೇಳೆ ಹೆಡ್ ಕಾನ್ಸ್ ಸ್ಟೇಬಲ್ ಗಳಾದ ಶುಭಾಶ್, ಸುರೇಶ, ಶ್ರೀನಿವಾಸ, ಕೃಷ್ಣ ಕಾನ್ಸ್ ಸ್ಟೇಬಲ್ ಗಳಾದ ರೇಣುಕಪ್ಪ, ಕುಮಾರನಾಯ್ಕ, ಚನ್ನಬಸಪ್ಪ ಇದ್ದರು.

Leave a Reply

Your email address will not be published. Required fields are marked *