
ಇದು ಇರುವುದು ಕೊಪ್ಪಳ ಜಿಲ್ಲೆ, ಗಂಗಾವತಿ ತಾಲೂಕಿನ ಆನೆಗುಂದಿನಲ್ಲಿ ಕಂಡುಬರುವ ಅತ್ಯಂತ ಸುಂದರವಾದ ಗಗನ ಮಹಲ್ ಆಕಾಶದ ಎತ್ತರ ಮೊನಚಾಗಿ ಕಂಡುಬರುವ ಈ ಕಟ್ಟಡ ಅತ್ಯಂತ ಸುಂದರವಾಗಿದೆ ಆನೆಗೊಂದಿ ಎಲ್ಲಿನ ರಂಗನಾಥ ಸ್ವಾಮಿ ದೇಗುಲದ ಎದುರಿಗೆ ಕಂಡು ಬರುವ ಈ ಕಟ್ಟಡವು ಹಿಂದೆ ರಾಜ ಮಹಾರಾಜರುಗಳು ನಡೆಸುತ್ತಿದ್ದ ಮನರಂಜನೆ ಹಾಗೂ ಸಾಹಸಮಯ ಸ್ಪರ್ಧೆಗಳನ್ನು ರಾಣಿಯರು ವೀಕ್ಷಿಸುತ್ತಿದ್ದ ಸ್ಥಳವಾಗಿತ್ತು ಎಂದು ಜನ ನಂಬಿದ್ದಾರೆ ಇಲ್ಲಿ ಕೋಳಿ ಕಾಳಗ ಟಗರು ಕಾಳಗ ಗೂಳಿ ಕಾಳಗ ಮಲ್ಲಯುದ್ಧ ದೃಷ್ಟಿ ಯುದ್ಧ ಹಾಗೂ ದೊಂಬರಾಟದ ಸಾಹಸಗಳು ನಡೆಯುತ್ತಿದ್ದವೆಂದು ಅದನ್ನು ಆನೆಗೊಂದಿ ಸಂಸ್ಥಾನದ ರಾಣಿಯರು ಹಾಗೂ ಪಟ್ಟಣದ ಹೆಂಗಸರು ಸಹ ಆಸಕ್ತಿಯಿಂದ ನೋಡುತ್ತಿದ್ದರು ಎಂದು ಹೇಳಲಾಗುತ್ತದೆ ಅಂದು ನಡೆಯುತ್ತಿದ್ದ ಪಂದ್ಯಗಳಲ್ಲಿ ವಿಜಯಗಳಿಸಿದವರನ್ನು ಮದುವೆ ಮಾಡಿಕೊಳ್ಳುವಂತಹ ಅವಕಾಶಗಳನ್ನು ರಾಜರು ಒದಗಿಸಿ ಕೊಡುತ್ತಿದ್ದರು ಎಂದು ಹೇಳಲಾಗುತ್ತದೆ ಹೀಗೆ ಕಥೆಗಳು ಹಬ್ಬಿಕೊಂಡಿವೆ ಇದು ವಿಜಯನಗರದ ಮೊದಲ ರಾಜಧಾನಿ ಎಂದು ಕರೆಯಲಾಗುತ್ತದೆ ಇದೇ ರೀತಿ ಚಂದ್ರಗಿರಿ ಹಾಗೂ ಪೆನುಕೊಂಡ ಕೊಂಡದಲ್ಲಿ ಈ ಶೈಲಿಯನ್ನು ಕಾಣಬಹುದು ಇದೊಂದು ಇಂಡೋ ಸಾರ್ಕ್ನಿಕ್ ಶೈಲಿಯಲ್ಲಿ ಕಟ್ಟಲ್ಪಟ್ಟಿದೆ.
ಈ ಒಂದು ಗಗನ ಮಹಲ್ ಅರವಿದು ವಂಶಸ್ಥರಿಂದ ಕಟ್ಟಲ್ಪಟ್ಟ ಮಹಲ್ ಇಲ್ಲಿ ಸುರಂಗದಿಂದ ಆಗಮಿಸಿದ ರಾಜ ಕುಟುಂಬದವರು ಜಾಲರಿ ಕಿಂಡಿಗಳಿಂದ ದಸರಾ ಉತ್ಸವ ಹಬ್ಬ ಹರಿ ದಿನಗಳಲ್ಲಿ ವೀಕ್ಷಣೆ ಮಾಡಲು ಅವಕಾಶವಿರುತ್ತೆ ಈ ಶೈಲಿ ಲೋಟಸ್ ಮಹಾಲ್ ಒಂದಿದೆ ಆದರೆ ಇದು ವೃತ್ತಾಕಾರದಲ್ಲಿ ಇದೆ ಗ್ರಹಣವಾಗಿ ಆಯತಾಕಾರದಲ್ಲಿ ನಾವು ಕಾಣಲು ಸಿಗುತ್ತದೆ ಅರವೀಡು ವಂಶದ ಅಳಿಯ ರಾಮರಾಯನ ಆಳ್ವಿಕೆಗೆ ಒಳಪಟ್ಟಿತ್ತು 1967 ರಲ್ಲಿ ರಾಜಮಾತೆ ಕುಪ್ಪಮ್ಮ ರಾಣಿ ಕಟ್ಟಿಸಿದ್ದಾಳೆ ಎಂದು ತಿಳಿಯಬಹುದಾಗಿದೆ.
ಗಗನ ಮಹಲ್ ಒಳಗಡೆ ದಸರಾ ಉತ್ಸವದ ಆನೆ ಆನೆ ಮೇಲೆ ಮಾವುತ ಕುಳಿತಿರುವ ಚಿತ್ರ ನೋಡಲು ಸಿಗುತ್ತದೆ ಇದೊಂದು ಅಪರೂಪವಾಗಿರುವ ಅಂತ ಸ್ಮಾರಕವಾಗಿದೆ ಇಲ್ಲಿ 1967 ರಲ್ಲಿ ಗ್ರಾಮ ಪಂಚಾಯಿತಿ ಕಾರ್ಯಾಲಯ ನಡೆಯುತ್ತಿತ್ತು ತದನಂತರ ಅದು ಸಂರಕ್ಷಿತ ಸ್ಮಾರಕ ವಾಗಿ ಮಾರ್ಪಡಿಸಲಾಗಿದೆ.

ಲೇಖನ : ಶ್ರೀ ವೆಂಕಟೇಶ್ ಬಡಿಗೇರ್ ಕನ್ನಡ ಉಪನ್ಯಾಸಕರು ಜಿಲ್ಲಾಧ್ಯಕ್ಷರು ಮಕ್ಕಳ ಸಾಹಿತ್ಯ ಪರಿಷತ್ ವಿಜಯನಗರ ಜಿಲ್ಲಾ ಘಟಕ