ತಾಲೂಕು ಕಾನೂನು ಸೇವಗಳ ಸಮಿತಿ ಮತ್ತು ವಕೀಲರ ಸಂಘ ದಿಂದ ಸಂವಿಧಾನ ದಿನಾಚರಣೆ

Loading

ಹಗರಿಬೊಮ್ಮನಹಳ್ಳಿ : ದಿನಾಂಕ:26.11.2024ರಂದು ಸ್ಥಳ: ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಗಳ ಸಮಿತಿ,ಹಗರಿಬೊಮ್ಮನಹಳ್ಳಿ ಮತ್ತು ವಕೀಲರ ಸಂಘ ಹಗರಿಬೊಮ್ಮನಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಅಧ್ಯಕ್ಷರು ತಾಲೂಕು ಕಾನೂನು ಸೇವೆಗಳ ಸಮಿತಿ ಹಗರಿಬೊಮ್ಮನಹಳ್ಳಿಯ ಗೌರವಾನ್ವಿತ ಶ್ರೀ ಮಧುಸೂದನ್ ಡಿ.ಕೆ. ರವರು ಸದರಿ ಕಾರ್ಯಕ್ರಮವನ್ನು ಸಸಿಗೆ ನೀರನ್ನು ಹಾಕುವುದರ ಮೂಲಕ ಉದ್ಘಾಟನೆ ಮಾಡಿ, ಉದ್ಘಾಟನೆ ನುಡಿಯಲ್ಲಿ ನವೆಂಬರ್ 26 ಸ್ವತಂತ್ರ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹತ್ವದ ದಿನವಾಗಿದೆ 1949ರ ನವೆಂಬರ್ 26ರಂದು ಸಂವಿಧಾನವನ್ನು ಅಳವಡಿಸಿಕೊಳ್ಳಲಾಯಿತು. ಇದರ ಅಂಗವಾಗಿಯೇ ನಾವು ಇಂದು ಸಂವಿಧಾನದ ದಿನವನ್ನು ಆಚರಣೆ ಮಾಡುತಿದ್ದೇವೆ.


ಭಾರತ ಸಂವಿಧಾನವು ಹಲವು ದೇಶದ ಸಂವಿಧಾನದ ಪ್ರಮುಖ ಅಂಶಗಳನ್ನು ಎರವಲು ಪಡೆದಿದೆ ಎಂದರು ಇದರ ಜೊತೆಗೆ ಸಂವಿಧಾನ ಪೀಠಿಕೆಯನ್ನು ಬೋಧಿಸಿದರು.

ಸದರಿ ಕಾರ್ಯಕ್ರಮದಲ್ಲಿ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿಗಳು ತಾಲೂಕು ಕಾನೂನು ಸೇವೆಗಳ ಸಮಿತಿ ಹಗರಿಬೊಮ್ಮನಹಳ್ಳಿ ಗೌರವಾನ್ವಿತ ಶ್ರೀ ಸೈಯ್ಯದ್ ಮೊಹಿದ್ದೀನ್ ರವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ, ಹಿರಿಯ ವಕೀಲರು ಶ್ರೀ ಬಿ.ವಿ.ಶಿವಯೋಗಿ ರವರು ಸಂವಿಧಾನ ಲಿಖಿತ ಸಂವಿಧಾನ, ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ಸಂವಿಧಾನವನ್ನು ಬರೆದಿದ್ದಾರೆ ನಮ್ಮ ಸಂವಿಧಾನವು ಹುಟ್ಟಿನಿಂದ ಮರಣದ ನಂತರವೂ ಮನುಷ್ಯನ ಜೀವನದಲ್ಲಿ ಕಾನೂನಾತ್ಮಕವಾಗಿ ದಾರಿದೀಪವಾಗಿದ್ದು, ವಿವಿಧತೆಯಲ್ಲಿ ಏಕತೆ ನೀಡುವಂಥದ್ದಾಗಿದೆ, ಸಂವಿಧಾನವನ್ನು ಉಳಿಸುವಂಥದ್ದು ಮತ್ತು ಪಾಲನೆ ಮಾಡುವಂಥದ್ದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿಕೊಂಡಂತಹ ವಕೀಲರ ಸಂಘದ ಅಧ್ಯಕ್ಷರು ಪಿ. ರಮೇಶ, ಸಂವಿಧಾನವು ಬ್ರಿಟನ್, ಐರ್ಲೆಂಡ್, ಜಪಾನ್, ಯುಎಸ್ಎ, ದಕ್ಷಿಣ ಆಫ್ರಿಕಾ, ಜರ್ಮನ್, ಆಸ್ಟ್ರೇಲಿಯಾ ಮತ್ತು ಕೆನಡಾ ದೇಶಗಳ ಸಂವಿಧಾನದ ಕೆಲವು ಅಂಶಗಳನ್ನು ಎರವಲು ಪಡೆದಿದೆ ಹಾಗೇನೆ ಸಂವಿಧಾನವು ಎರಡು ವರ್ಷ 11 ತಿಂಗಳು 17 ದಿನಗಳ ಅವಧಿಯಲ್ಲಿ ರಚಿಸಿದ ಸಂವಿಧಾನವಾಗಿದೆ. ಭಾರತ ಸಂವಿಧಾನ ಅತಿ ದೊಡ್ಡ ಕೈ ಬರವಣಿಗೆಯ ಡಾಕ್ಯುಮೆಂಟ್ ಹೊಂದಿರುವ ಸಂವಿಧಾನವಾಗಿದ್ದು. ಇಂಗ್ಲಿಷ್ನಲ್ಲಿ ಒಟ್ಟು 1,17,369 ಪದಗಳನ್ನು ಹೊಂದಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಸಹಾಯಕ ಸರ್ಕಾರಿ ಅಭಿಯೋಜಕರು ಶ್ರೀ ರಾಘವೇಂದ್ರ ತಳವಾರ್, ತಾಲೂಕ ವಕೀಲರ ಸಂಘದ ಜಂಟಿ ಕಾರ್ಯದರ್ಶಿ ಶ್ರೀ ಏನ್ ಗುರು ಬಸವರಾಜ್, ವಕೀಲರ ಸಂಘದ ಖಜಂಚಿಯಾದ ಶ್ರೀಮತಿ ಶಿವಗಂಗಮ್ಮ ರವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜೊತೆಗೆ ಉಭಯ ನ್ಯಾಯಾಲಯದ ಶಿರಾಸ್ತದಾರರು ಹಾಗೂ ಸಿಬ್ಬಂದಿಗಳು ವಕೀಲರ ಸಂಘದ ಸದಸ್ಯರುಗಳು, ಹಾಗೂ ಕಕ್ಷಿದಾರರು ಸದರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ನಮ್ಮ ಸಂವಿಧಾನವು ಹಲವು ದೇಶಗಳ ಸಂವಿಧಾನಗಳ ಉತ್ತಮ ಅಂಶಗಳಿಂದ ರೂಪಿತವಾಗಿದೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬಹುದು. ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವದ ಪರಿಕಲ್ಪನೆಗಳನ್ನು ಫ್ರಾನ್ಸ್‌ ಸಂವಿಧಾನದಿಂದ ಪಡೆಯಲಾಗಿದೆ. ಪಂಚ ವಾರ್ಷಿಕ ಯೋಜನೆಯ ಕಲ್ಪನೆಯನ್ನು ಸೋವಿಯತ್‌ ಒಕ್ಕೂಟದಿಂದ , ರಾಜ್ಯ ನಿರ್ದೇಶನ ತತ್ತ್ವಗಳನ್ನು ಐರ್ಲೆಂಡ್‌ ಸಂವಿಧಾನದಿಂದ, ಸುಪ್ರೀಂಕೋರ್ಟ್‌ ಕಾರ್ಯನಿರ್ವಹಣೆಯ ಕಾನೂನನ್ನು ಜಪಾನ್‌ನಿಂದ ಎರವಲು ಪಡೆಯಲಾಗಿದೆ. ಹೀಗೆ, ಹಲವು ದೇಶಗಳ ಸಂವಿಧಾನಗಳನ್ನು ಅಳವಡಿಸಿಕೊಂಡು ಉತ್ತಮವಾದ, ಉದ್ದವಾದ ಸಂವಿಧಾನವಾಗಿದೆ ಎಂದರು. ಈ ಸದರಿ ಕಾರ್ಯಕ್ರಮದಲ್ಲಿ ನಿರೂಪಣೆಯನ್ನು ಕೆ ಪ್ರಲಾದ್, ಪ್ಯಾನಲ್ ವಕೀಲರು ನಿರ್ವಹಿಸಿರುತ್ತಾರೆ.

Leave a Reply

Your email address will not be published. Required fields are marked *