ಮೇದಾರ ನೌಕರರ ಸೇವಾ ಬಳಗ ದಿಂದ ಕನ್ನಡ ರಾಜ್ಯೋತ್ಸವ

Loading

ಹೊಸಪೇಟೆ : ಮೇದಾರ ಸಮಾಜದ ಮಕ್ಕಳ ಶಿಕ್ಷಣ ಹಾಗೂ   ಸರ್ವತೋಮುಖ ಪ್ರಗತಿಯ ಉದ್ದೇಶಕ್ಕಾಗಿ ಸ್ಥಾಪನೆಯಾಗಿರುವ ಹೊಸಪೇಟೆ  ಮೇದಾರ ನೌಕರರ ಸೇವಾ  ಬಳಗವು” ದಿನಾಂಕ 23.11.2024 ರಂದು ಸಂಜೆ ನಡೆದ ಕನ್ನಡ ರಾಜ್ಯೋತ್ಸವ, ಹಾಗೂ ಮಕ್ಕಳ ದಿನಾಚರಣೆಯ, ಸಮಾರೋಪ ಸಮಾರಂಭ ಕಾರ್ಯಕ್ರಮವು ಕುಮಾರಿ “ರಚನ” ಪ್ರಾರ್ಥನೆ ಗೀತೆಯೊಂದಿಗೆ ,ಹಾಗೂ ನಾಡ ದೇವತೆ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಹಾಗೂ ಸಸಿಗೆ ನೀರು ಹಾಕುವುದರ ಮೂಲಕ, ತಾಯಿ ಭುವನೇಶ್ವರಿ ನಾಡಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಖ್ಯ  ಅತಿಥಿಗಳಾದ ಶ್ರೀಯುತ ಡಾ. ಚಂದ್ರಶೇಖರ್ ಶಾಸ್ತ್ರಿ ನಿವೃತ್ತ  ಇತಿಹಾಸದ ಉಪನ್ಯಾಸಕರು ಉದ್ಘಾಟಿಸಿದರು ಹಾಗೂ ಹೊಸಪೇಟೆ ಮೇದಾರ ಸಮಾಜದ ಗುರು -ಹಿರಿಯರು, ಆಗಮಿಸಿ ವೇದಿಕೆ ಅಲಂಕರಿಸಿ ಮಾತನಾಡಿದರು,

ಮಕ್ಕಳ ಬೆಳವಣಿಗೆ,  ಗುರಿ ಸಾಧಿಸುವ ಬಗ್ಗೆ ತಮ್ಮದೇ ಆದ ಶೈಲಿಯಲ್ಲಿ  ಅರ್ಥಗರ್ಭಿತ ಮಾತುಗಳನ್ನು ಆಡಿದರು. ಕನ್ನಡ ಭಾಷೆಯ ಉಳಿಸಿ, ಬೆಳೆಸುವಲ್ಲಿ ಹಾಗೂ ನಮ್ಮ ಕನ್ನಡ ಸಂಸ್ಕೃತಿಯ ಹಿರಿಮೆಯ ಬಗ್ಗೆ  ಹಿಂದಿನ ಈಗಿನ  ಭವಿಷ್ಯದ ಕಾಲದಲ್ಲಿ  ಹೇಗಿರಬಹುದು ಎಂಬುದರ ಬಗ್ಗೆ ಸೂಕ್ಷ್ಮವಾಗಿ  ನೆರೆದ ಕನ್ನಡಿಗರ ಮನ ಸೆಳೆದರು.


        
ಹಾಗೆಯೇ ಶ್ರೀಮತಿ ಸೌಭಾಗ್ಯ ಲಕ್ಷ್ಮಿ ನಿವೃತ್ತ ಉಪನ್ಯಾಸಕರು ಭಾರತ ಜ್ಞಾನ ವಿಜ್ಞಾನ ಸಮಿತಿಯ ಉಪಾಧ್ಯಕ್ಷರು ಕರ್ನಾಟಕ ಇವರು ಮೂಢನಂಬಿಕೆ ಹಾಗೂ ವಿಜ್ಞಾನ ಮಾಹಿತಿ ಜೊತೆಗೆ ಪವಾಡ ಬಯಲು ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ನಡೆಸಿಕೊಡುವ ಮೂಲಕ ಜನರಲ್ಲಿರುವ ಮೂಢನಂಬಿಕೆಯನ್ನು ತೊಲಗಿಸುವ ಪ್ರಯತ್ನ ಮಾಡಿದರು.

ಮತ್ತು ಮುದ್ದು ಮಕ್ಕಳ ಚಾದ್ಮ ವೇಷ , ಫ್ಯಾನ್ಸಿ ಡ್ರೆಸ್ ನೆರೆದವರ ಗಮನ ಸೆಳೆಯಿತು.ಮುಖ್ಯ ವೇದಿಕೆಯಲ್ಲಿ ಹೊಸಪೇಟೆ ಮೇದಾರ ಸಮಾಜದ ಅಧ್ಯಕ್ಷರು, ಯಜಮಾನರು, ಗುರು ಹಿರಿಯರು, ಹಾಗೂ ಮುಂಬೈ ಕನ್ನಡಿಗರಾದ ಶ್ರೀಯುತ ನೀಲಕಂಠ ಆಗಮಿಸಿದ್ದರು.

ಸಮಾಜದ ಮುಖಂಡರು ಆದಂತಹ ಶ್ರೀಯುತ ಎಂ, ತಿಮ್ಮಪ್ಪ, ಹಾಗೂ ಶ್ರೀಯುತ ಎಂ, ಲಕ್ಷ್ಮಣ ಮಾತನಾಡಿ ಸಮುದಾಯದ ಅಭಿವೃದ್ಧಿಗೆ ಶಿಕ್ಷಣದ ಮಹತ್ವ ಕುರಿತು ಮಾತನಾಡಿದರು,

ಸೇವಾ ಬಳಗದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ 15,ವಿದ್ಯಾರ್ಥಿಗಳಿಗೆ ಎಸ್,ಎಸ್, ಎಲ್, ಸಿ ವಿದ್ಯಾರ್ಥಿಗಳಿಗೆ ಆರು ವಿಷಯಗಳ ಉಚಿತ ಪಾಸಿಂಗ್ ಪ್ಯಾಕೇಜ್ ವಿತರಣೆಯನ್ನು ಮಾಡಲಾಯಿತು.

ಕಾರ್ಯಕ್ರಮದ ಮುಂಚಿನ ದಿನಗಳಲ್ಲಿ ಹೊಸಪೇಟೆ,ಮೇದಾರ ಸಮಾಜದ ಮಕ್ಕಳಿಗೋಸ್ಕರ ವಿವಿಧ ಬಗೆಯ ಕ್ರೀಡೆಗಳು, ರಸಪ್ರಶ್ನೆ ಚಿತ್ರಕಲೆ ಪ್ರಬಂಧ ಗಾಯನ ಸ್ಪರ್ಧೆ ಮುಂತಾದವುಗಳಲ್ಲಿ ಭಾಗವಹಿಸಿ ಗೆದ್ದಂತಹ ಮಕ್ಕಳಿಗೆ ನೆನಪಿನ ಕಾಣಿಕೆ ಹಾಗೂ ಪ್ರಮಾಣ ಪತ್ರವನ್ನು ವಿತರಿಸಿ ಗೌರವಿಸಲಾಯಿತು.ಮತ್ತು ಗಣ್ಯರಿಗೆ ಸನ್ಮಾನ ಮಾಡಲಾಯಿತು.

ವಿದ್ಯಾರ್ಥಿಗಳು, ಕನ್ನಡ ರಾಜ್ಯೋತ್ಸವದ ಗಾಯನ, ಸಮೂಹ ನೃತ್ಯ, ಮನೋರಂಜನೆ ಏರ್ಪಡಿಸಲಾಗಿತ್ತು ಕಾರ್ಯಕ್ರಮ ವನ್ನು ಯಶಸ್ವಿಗೊಳಿಸಲಾಯಿತು.

ಈ ಸಂದರ್ಭದಲ್ಲಿ ಸೇವಾ ಬಳಗದ ಗೌರವ ಅಧ್ಯಕ್ಷರು,ಆದ ಶ್ರೀಯುತ ಭರಮಪ್ಪ, ಅಧ್ಯಕ್ಷರು ಶ್ರೀಯುತ ಚಂದ್ರಶೇಖರ, ಹಾಗೂ ಎಲ್ಲಾ ಪದಾಧಿಕಾರಿಗಳು, ಅವಿರತ ಪ್ರಯತ್ನ ಕಾರಣವಾಗಿತ್ತು.ಸಭೆಯಲ್ಲಿ ಶ್ರೀಮತಿ ಭಾಗ್ಯ ಜ್ಯೋತಿ, ಹಾಗೂ ಶ್ರೀಮತಿ ಗಂಗಾ ಕೃಷ್ಣ ,ನಿರೂಪಣೆ ಮಾಡಿದರು
ಕೆ, ಶಾಂತರಾಜು,ಹಾಗೂ ಚಂದ್ರಶೇಖರ,ವಂದನಾರ್ಪಣೆ ಮಾಡಿದರು.
      

Leave a Reply

Your email address will not be published. Required fields are marked *