
ಹಗರಿಬೊಮ್ಮನಹಳ್ಳಿ, :ತಾಲೂಕಿನ -ಸಾರ್ವಜನಿಕರಿಗೆ ಅನೂಕೂಲಕರವಾಗುವಂತೆ ಗೇಟ್ ಸಂಖ್ಯೆ 37 ಪ್ರೈಒವರ್ ಹಾಗೂ 38 ಕ್ಕೇ ಅಂಡರ್ ಪಾಸ್ ಆಗಬೇಕು, ವಿಜಯಪುರ ಯಶವಂತಪುರ ರೈಲಿಗೆ ಸಾಮಾನ್ಯ ದರ ನಿಗದಿ ಸೇರಿದಂತೆ ಹರಿಹರ ದಾವಣಗೆರೆ ರೈಲ್ಗೆ ಹೆಚ್ಚುವರಿ ಬೋಗಿ ಹಾಕುವ ಕಾರ್ಯ ಶೀಘ್ರವಾಗಬೇಕು ಎಂದು ನಂದೀಪುರದ ಡಾ॥ ಮಹೇಶ್ವರ ಸ್ವಾಮಿಜೀ ಹೇಳಿದರು.

ಪಟ್ಟಣದ ರೈಲ್ವೇ ನಿಲ್ದಾಣದಲ್ಲಿ ರೈಲ್ವೇ ಹೋರಾಟ ಸಮಿತಿಯಿಂದ ಆಯೋಜಿಸಿದ್ದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿ ಈ ಭಾಗದಲ್ಲಿ ರೈಲು ಒಡಾಟ ಸಂತಸ ತಂದಿದ್ದರೂ ಹಲವಾರು ಸವಲತ್ತುಗಳು ಶೀಘ್ರವಾಗದಿರುವುದು ಬೇಸರ ಮೂಡಿಸಿದೆ. ಡೆಮೋ ರೈಲಿಗೆ ಹೆಚ್ಚುವರಿ ಭೋಗಿ, ರೈಲ್ವೇ ಪ್ರಯಾಣಿಕರಿಗೆ ಹೊರೆಯಾಗದಂತೆ ಸ್ಪೆಷಲ್ ರೈಲಿನ ದರವನ್ನು ಇಳಿಕೆ ಮಾಡಬೇಕು, ಶೈಕ್ಷಣಿಕವಾಗಿ ಗುಲ್ಬರ್ಗ ಜಿಲ್ಲೆಗೆ ಹೋಗುವಂತೆ ಅನುವು ಮಾಡಿಕೊಡಬೇಕು, ಈ ವಿಷಯವಾಗಿ
ನಮ್ಮ ಜಿಲ್ಲೆಯ ಎಂ ಪಿ ಸೇರಿದಂತೆ ಶಾಸಕರ ಹಾಗೂ ರೈಲ್ವೇ ಇಲಾಖೆಯ ಹುಬ್ಬಳ್ಳಿಯಲ್ಲಿ ಜಿಎಂ ಅವರನ್ನು ಭೇಟಿ ಮಾಡಿ ಇ ಬಗ್ಗೆ ಚರ್ಚಿಸಲಾಗುವುದು, ಇದೇ ತಿಂಗಳ 28ರಂದು ಆಟೋ ಚಾಲಕರ ಸಂಘದಿಂದ ಹಗರಿಬೊಮ್ಮನಹಳ್ಳಿ ಬಂದ್ ಮಾಡಿಸುವುದಾಗಿ ಸಂಘ ನಿರ್ಧರಿಸಿದೆ. ನಮ್ಮ ಬೇಡಿಕೆಗಳಿಗೆ ಸ್ಪಂದಿಸಿದ್ದರೆ ಮುಂದಿನ ದಿನಗಳಲ್ಲಿ ರೈಲ್ ರೋ- ಕೋ ಚಳುವಳಿಯನ್ನು ಮಾಡುವ ಎಚ್ಚರಿಕೆಯನ್ನು ನಿಡಿದರು ಇದಕ್ಕೆಲ್ಲ ಆಸ್ಪದ ನೀಡದಂತೆ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.
ಮುಖಂಡರಾದ ವಕೀಲ ಕೊಟ್ರೇಶ ಶೆಟ್ಟರ್, ಡಿಶ ಮಂಜುನಾಥ್, ಆಟೋ ಚಾಲಕರ ಸಂಘದ ತಾಲೂಕು ಅಧ್ಯಕ್ಷ ವೆಂಕಟೇಶ ಮಾತನಾಡಿದರು. ಈ ಸಂಧರ್ಭದಲ್ಲಿ ಸಂಚಿ ಶಿವಕುಮಾರ, ಫೋ- ಟೋ ರಾಮಣ್ಣ, ರಾಜ, ಗೆದ್ದಿಕೇರಿ ನಾಗಭೂಷಣ, ಬನ್ನಿಗೋಳ ವೆಂಕಣ್ಣ, ಪ್ರಿಂಟಿಂಗ್ ಪ್ರೆಸ್ ಮಂಜುನಾಥ ಸೇರಿದಂತೆ ಸಂಘ ಸಂಸ್ಥೆಯ ಪದಾಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.