ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಎಂಪಿಎಂ ಮಂಜುನಾಥ ಆಯ್ಕೆ

Loading

ಹಗರಿಬೊಮ್ಮನಹಳ್ಳಿ : ಪಟ್ಟ ಣದ ಗುರುಭವನದಲ್ಲಿ ಶನಿವಾರ ನಡೆದ ತಾಲೂಕು ನೌಕರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಯಲ್ಲಿ ಎಂಪಿಎಂ ಮಂಜುನಾಥ್ ಎರ ದನೆಯ ಸಲ ಅಧ್ಯಕ್ಷರಾಗುವ ಮೂಲಕ ಆಯ್ಕೆಯಾದರು.

ತಾಲೂಕು ನೌಕರ ಸಂಘದ ಅಧ್ಯಕ್ಷ ಮತ್ತು, ಖಜಾಂಚಿ, ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ನಡೆಯಿತು. ಒಟ್ಟು 29 ನಿರ್ದೇಶಕರ ಮತಗಳಲ್ಲಿ ತಾಲೂಕು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಂಪಿಎಂ ಮಂಜುನಾಥ್ 19 ಮತ ಪಡೆದು ಗೆಲುವು ಸಾಧಿಸಿ ದರು. ಪ್ರತಿಸ್ಪರ್ಧಿ ರವಿಚಂದ್ರ ನಾಯ್ಕ

10 ವೋಟ್ ಪಡೆದು ಪಾರಾಭವ ಗೊಂಡರು.

ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಸ್.ಆಂಜನೇಯ ೯ ವೋಟ್ ಪಡೆ ದರೆ, ಎನ್. ಗುರುಬಸವರಾಜ್ ೨೦ ಮತಗಳಿಸಿ ಜಯ ಸಾಧಿಸಿದರು. ರಾಜ್ಯ ಪರಿಷತ್‌ಗೆ ಸ್ಪರ್ಧಿಸಿದ್ದ ನಿಜಲಿಂಗಪ್ಪ ೧೦ ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿ ಎಸ್.ಮಂಜುನಾಥ ೧೯

ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರು. ಫಲಿತಾಂಶ ಪ್ರಕಟವಾಗು ತಿದ್ದಂತೆ ಎಂಪಿಎಂ ಮಂಜುನಾಥ ಮತ್ತು ತಂಡದವರು ವಿಜಯೋತ್ಸವ ಆಚರಿಸಿದರು. ಪಟಾಕಿ ಸಿಡಿಸಿ ಸಿಹಿ ಹಂಚಿಕೊಂಡರು.

ಚುನಾವಣೆ ಅಧಿಕಾರಿಯಾಗಿ ನಿವೃತ್ತ ಮುಖ್ಯಶಿಕ್ಷಕ ಎಚ್.ಎಂ.ಕೊಟ್ರುದೇ ವರು, ಸಹಾಯಕರಾಗಿ ಶಿಕ್ಷಕ ಕೆ.ಕೆ. ಕೊಟ್ರೇಶಪ್ಪ ಕಾರ್ಯನಿರ್ವಹಿಸಿದರು.

Leave a Reply

Your email address will not be published. Required fields are marked *