ಖಾಯಂ ಆಡಳಿತ ಸಿಬಂದಿಗಳಿಗೆ ಮುಂಬಡ್ತಿ ಆಗ್ರಹಿಸಿ ಹೋರಾಟ

Loading

ಹೊಸಪೇಟೆ: ನಿಯಮಾನುಸಾರ ಆಡಳಿತ ಸಿಬ್ಬಂದಿಗೆ ಮುಂಬಡ್ತಿ ನೀಡಲು ಒತ್ತಾಯಿಸಿ ಕನ್ನಡ ವಿಶ್ವವಿದ್ಯಾಲಯದ ನೌಕರರು ಮಂಗಳವಾರ ಧರಣಿ ನಡೆಸಿದರು. ಈ ವೇಳೆ ಕನ್ನಡ ವಿವಿ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಅವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಹೋರಾಟ ಹಿಂಪಡೆಯಲಾಯಿತು.

ಕನ್ನಡ ವಿಶ್ವವಿದ್ಯಾಲಯದಲ್ಲಿ ಆಡಳಿತಾಂಗದ ವಿವಿಧ ವೃಂದಗಳಲ್ಲಿ ಕಾಯಂ ಆಗಿ ಕಾರ್ಯನಿರ್ವಹಿಸುತ್ತಿರುವ ಆಡಳಿತ ಸಿಬ್ಬಂದಿಗೆ ಮುಂಬಡ್ತಿ ನೀಡಬೇಕು. ನಿಯಮಾವಳಿ ಪ್ರಕಾರ ಮುಂಬಡ್ತಿ ನೀಡದೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡ ವಿಶ್ವವಿದ್ಯಾಲಯದ ಕುಲಪತಿಯವರು ಹತ್ತು ದಿನಗಳೊಳಗಾಗಿ ಆಡಳಿತ ಸಿಬ್ಬಂದಿಯವರಿಗೆ ಮುಂಬಡ್ತಿಯನ್ನು ನೀಡುವುದಾಗಿ ಭರವಸೆ ನೀಡಿದರು. ಜೊತೆಗೆ ಕುಲಸಚಿವರು ಹತ್ತು ದಿನಗಳೊಳಗಾಗಿ ಇಲಾಖಾ ಮುಂಬಡ್ತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದಾಗಿ ಹಿಂಬರಹದ ನೀಡಿದ್ದಾರೆ. ಕುಲಪತಿಯವರು ಮತ್ತು ಕುಲಸಚಿವರ ಭರಸೆಗಳ ಹಿನ್ನೆಲೆಯಲ್ಲಿ ಹೋರಾಟವನ್ನುಮುಂದೂಡಿದರು.

ಕನ್ನಡ ವಿಶ್ವವಿದ್ಯಾಲಯದ ಆಡಳಿತ ಸಿಬ್ಬಂದಿ ಮುಂಬಡ್ತಿ ಆಗ್ರಹಿಸಿ ಹಮ್ಮಿಕೊಂಡಿದ್ದ ಹೋರಾಟದಲ್ಲಿ ವಿವಿ ನೌಕರರಾದ ಜಿ.ಶಿವಕುಮಾರ್, ಗ್ಯಾನಪ್ಪ ಬಡಿಗೇರ, ಎಲ್.ನಾರಾಯಣ, ಎಚ್.ಶ್ರೀನಿವಾಸ್, ಗಂಡಿ ಬೋರಯ್ಯ, ಕಾಳಪ್ಪ ಬಡಿಗೇರ, ಸಿ.ಬಸವರಾಜ, ಹನುಮೇಶ ಪತ್ತಾರ, ಸಿ.ವಾಗೀಶ, ಬಿ.ಉಮಾಪತಿ, ಆರ್.ವಿ.ದೇಶಪಾಂಡೆ, ರಾಜ್ಯ ಸರ್ಕಾರಿ ಎಸ್ಸಿ,ಎಸ್ಟಿ ನೌಕರರ ಸಮನ್ವಯ ಸಮಿತಿಯ ಪದಾಧಿಕಾರಿಗಳಾದ ಗುಜ್ಜಲ ಶಿವಕುಮಾರ್, ಕಟಗಿ ಬಾಬು, ಡಿ.ಶ್ರೀಧರ್, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ)ಯ ಜಿಲ್ಲಾ ಸಂಚಾಲಕ ಹನುಮಂತ, ಕನ್ನಡ ರಕ್ಷಣಾ ವೇದಿಕೆಯ ಕಮಲಾಪುರ ಅಧ್ಯಕ್ಷರ ಬಾಷಾ, ಕೆಂಚಪ್ಪ ಮತ್ತಿತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *