
ಕೊಟ್ಟೂರು : ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, ೧೯೬೬ರ ಕಲಂ ೧೦ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಈ ಕೆಳಕಂಡ ಅಭ್ಯರ್ಥಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವಿಜಯನಗರ ಜಿಲ್ಲೆಯ ಕೊಟ್ಟೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸದಸ್ಯರನ್ನಾಗಿ ನಾಮ ನಿರ್ದೇಶನಗೊಳಿಸಿ ಆದೇಶಿಸಿದ್ದಾರೆ.
ಅಧ್ಯಕ್ಷರಾಗಿ ಎ ನಂಜಪ್ಪ ಹರಾಳು, ಉಪಾಧ್ಯಕ್ಷರಾಗಿ ಎಂ.ಶಿವಣ್ಣ, ಕೊಟ್ಟೂರು ನೇಮಕಗೊಂಡಿದ್ದರೆ, ಇತರ ಸದಸ್ಯರುಗಳಾಗಿ ಚಿರಿಬಿ ಕೊಟ್ರೇಶ್ ಕೇಳಗೇರಿ ಕೊಟ್ಟೂರು , ಬೇವೂರು ದೇವಪ್ಪ, ಕೆ.ಶಿವಕುಮಾರ ಗೌಡ ಕೊಟ್ಟೂರು, ಹ್ಯಾಳ್ಯ ನಾಗರತ್ನಮ್ಮ, ತಿಮ್ಮಲಾಪುರ ತಾಂಡದ ಜ್ಯೋತಿ ಲಕ್ಷ್ಮಿ ನೂರ್ಯ ನಾಯ್ಕ , ಉಜ್ಜಿಯನಿಯ ಬಸಮ್ಮ, ಗಜಾಪುರದ ಎಲ್ ನಾಗರಾಜ್ , ಕೆ ಅಯ್ಯನಹಳ್ಳಿಯ ಎಂ ಓ ಕೊಟ್ರಯ್ಯ, ಹೆಚ್ ಶಂಕ್ರಪ್ಪ ಕೊಟ್ಟೂರು, ತೂಲಹಳ್ಳಿ ಎಂ ವೀರೇಶ್, ಅಂಬಳಿಯ ಕಲ್ಲನಗೌಡ, ರಾಂಪುರದ ಬಿ ಶಿವಲಿಂಗಪ್ಪ, ನಿಂಬಳಗೇರಿಯ ಹೆಚ್ ಕೆ ಕಲ್ಲಪ್ಪ, ತೂಲಹಳ್ಳಿಯ ಎಂ ಶಾಂತನಗೌಡ , ಉಜ್ಜಿಯನಿಯ ಎಸ್ ಕೊಡದಪ್ಪ, ನಾಮ ನಿರ್ದೇಶನಗೊಂಡಿದ್ದಾರೆ .ಮತ್ತು ಬುಧವಾರ ರಂದು ನಾಮ ನಿರ್ದೇಶನಗೊಂಡ ಎಲ್ಲಾ ಸದಸ್ಯರು ಪದಗ್ರಹಣ ಮಾಡಲಾಗುತ್ತದೆ ಎಂದು ಎಪಿಎಂಸಿ ಕಾರ್ಯದರ್ಶಿ ವಿರಣ್ಣ ಪತ್ರಿಕೆ ಗೆ ತಿಳಿಸಿದರು.