
ಹಗರಿಬೊಮ್ಮನಹಳ್ಳಿ : ತಾಲೂಕಿನ ಕನ್ನಡಪರ ಸಂಘಟನೆಗಳ ಹೋರಾಟಗಾರರ ಮೇಲೆ 2016 ನೇ ಇಸವಿಯಲ್ಲಿ ನವೆಂಬರ್ 1 ರಂದು ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಗಲಾಟೆ ಮಾಡಿ ಸರ್ಕಾರದ ಆಸ್ತಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಅಂದಿನ ತಹಶೀಲ್ದಾರರು.
ಅಂದು ಕನ್ನಡ ಪರ ಸಂಘಟನೆಗಳ 21 ಜನರ ಮೇಲೆ ದೂರು ದಾಖಲಿಸಿದ್ದರು.
ಕನ್ನಡಪರ ಸಂಘಟಕರೆಂದರೆ ಗಲಾಟೆ ಮಾಡುವವರು. ಜನಗಳ ಜೊತೆಗೆ ಅಸಭ್ಯವಾಗಿ ವರ್ತಿಸುವವರು ಎಂದು ಬಿಂಬಿಸಿದ್ದರು. ಈ ಗಲಾಟೆಯ ವಿಚಾರಣೆಯನ್ನು ಮಾಡಿದ ಗೌರವಾನ್ವಿತ ನ್ಯಾಯಾಲಯ ಈ ದಿವಸ 21 ಜನರು ನಿರಪರಾಧಿಗಳು ಎಂದು ಬಿಡುಗಡೆಗೊಳಿಸಿದೆ.ಸತ್ಯಕ್ಕೆ ಜಯ. ಕನ್ನಡ ಪರ ಹೋರಾಟಗಾರರಿಗೆ ನೈಜ ಗೆಲುವು.
ಈ ಮಾಹಿತಿ ಯನ್ನು ಕನ್ನಡ ಪರ ಸಂಘಟನೆಗಳು ಹಂಚಿಕೊಂಡಿದ್ದಾರೆ. ಮತ್ತು ತಾಲೂಕಿನ ಡಾ.ಪುನೀತ್ ರಾಜ್ ಕುಮಾರ್ ಪ್ರತಿಮೆ ಬಳಿ ಸೇರಿ ಸಂಭ್ರಮಿಸಿದರು.