ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸುವ ಕುರಿತು ಮನವಿ ಮಾಡಿಕೊಂಡ ಮಾಜಿ  ಜಿ. ಪಂ ಸದಸ್ಯ – ಅಕ್ಕಿ ತೋಟೇಶ್

Loading

ವಿಜಯ ನಗರ (ಹೊಸಪೇಟೆ ):  ಇಂದು ಹೊಸಪೇಟೆ ಗೆ ಭೇಟಿ ನೀಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಅವರಿಗೆ ಹಗರಿಬೊಮ್ಮನಹಳ್ಳಿ  ತಾಲೂಕಿನ ತಂಬ್ರಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ 2022-23ನೇ ಸಾಲಿನ ಆಯವ್ಯಯದಲ್ಲಿ ಮೇಲ್ದರ್ಜೆಗೇರಿಸುವ ಸರಕಾರಕ್ಕೆ ಮತ್ತು ತಮ್ಮ ಇಲಾಖೆಗೆ ತಂಬ್ರಹಳ್ಳಿ ಹಾಗೂ ಸುತ್ತಲಿನ 30 ಗ್ರಾಮಗಳ ಗ್ರಾಮಸ್ಥರ ಪರವಾಗಿ ತಮಗೆ ಅಭಿನಂದನೆಗಳು. ಮತ್ತು

ದಿನಾಂಕ: 05-07-2022ರಂದು ಅಧೀನ ಕಾರ್ಯದರ್ಶಿ, ಹಾಗೂ ಸಹ ನಿರ್ದೇಶಕರು (ಆರೋಗ್ಯ ಮತ್ತು ಯೋಜನೆ), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಂಗಳೂರು ಇವರು ತಂಬ್ರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಿ ಆದೇಶ ಹೊರಡಿಸಿರುತ್ತಾರೆ. ಆದರೆ ಇಂದಿನವರೆಗೂ ತಂಬ್ರಹಳ್ಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಪರಿಣಿತ ವೈದ್ಯರು, ಶುಶೂಷಕರು, ತಾಂತ್ರಿಕ ಸಿಬ್ಬಂದಿ, ಆಡಳಿತ ಸಿಬ್ಬಂದಿಯವರನ್ನು ಒದಗಿಸಲು ಕ್ರಮಕೈಗೊಂಡಿರುವುದಿಲ್ಲ.ಹಾಗೂ

ಹಾಲಿ ಕಟ್ಟಡದಲ್ಲಿ ಸಮುದಾಯ ಆರೋಗ್ಯ ಕೇಂದ್ರವನ್ನು ಪ್ರಾರಂಭಿಸಿ, ಮುಂದಿನ ದಿನಗಳಲ್ಲಿ 30 ಹಾಸಿಗೆಯುಳ್ಳ ಹೊಸ ವಿನ್ಯಾಸದ ಆಸ್ಪತ್ರೆಗೆ ಸಾಕಷ್ಟು ಸ್ಥಳಾವಕಾಶವೂ ಇದ್ದು, ಕಟ್ಟಡವನ್ನು ನಿರ್ಮಿಸಲು ಕ್ರಮಕೈಗೊಂಡು ನಮ್ಮ ಸುತ್ತಲಿನ ಗ್ರಾಮಗಳ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆಯನ್ನು ಕೂಡಲೇ ಒದಗಿಸಬೇಕು.

ಮುಂದಿನ ದಿನಗಳಲ್ಲಿ ತಂಬ್ರಹಳ್ಳಿ ಗ್ರಾಮದ ಮುಖಾಂತರ ಪುಣೆ-ಬೆಂಗಳೂರು ಹೊಸ ರಾಷ್ಟ್ರೀಯ ಹೆದ್ದಾರಿ ಹಾಗೂ ವಿಜಯಪುರ-ಆಲಮಟ್ಟಿ-ಚಿತ್ರದುರ್ಗ ರೈಲ್ವೆ ಮಾರ್ಗಗಳ ಸರ್ವೆ ನಡೆದಿದ್ದು, ಕಾಮಗಾರಿಗಳು ಪ್ರಾರಂಭವಾಗಲಿವೆ.

ಆದುದರಿಂದ ತಂಬ್ರಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ನಾಮಫಲಕದೊಂದಿಗೆ ಅವಶ್ಯಕವಿರುವ ವೈದ್ಯರು, ಸಿಬ್ಬಂದಿಯವರನ್ನು ಕೂಡಲೇ ನಿಯೋಜನೆ ಮಾಡಲು ಕ್ರಮಕೈಗೊಳ್ಳಲು ಈ ಕುರಿತು ಅಕ್ಕಿ  ತೋಟೇಶ್ ಮಾಜಿ ಸದಸ್ಯರು ಜಿ.ಪಂ ಹಾಗೂ ಸಮಾಜದ ಸೇವಕರು  ಅವರು ಪತ್ರದ ಮೂಲಕ ಸಚಿವರಿಗೆ ಮನವಿಮಾಡಿಕೊಂಡರು.

ಹಾಗೂ ಈ ಸಂದರ್ಭದಲ್ಲಿ ರವಿಕುಮಾರ್. ಸುರೇಶ. ನವೀನ್ ಅವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *