ಜಗತ್ತು ಕಂಡ ಮೊಟ್ಟ ಮೊದಲ ಕವಿ ವಾಲ್ಮೀಕಿ ಅವರ ಕಾವ್ಯ ಆದಿ ಕಾವ್ಯ ಶ್ರೀ ರಾಮಾಯಣ

Loading

ವಿಜಯ ನಗರ ಜಿಲ್ಲೆ ಕೂಡ್ಲಿಗಿ : ಪಟ್ಟಣದ ಸಂಡೂರು ರಸ್ತೆಯಲ್ಲಿ ಬರುವ ವೈಎಸ್ಎಸ್ ಸಮೂಹ ಸಂಸ್ಥೆ ಮತ್ತು ಜ್ಞಾನ ಮಂದಿರ ಸಂಸ್ಥೆಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಆಚರಣೆ ಮಾಡಲಾಯಿತು.


ಈ ಸಂದರ್ಭದಲ್ಲಿ ಅಧ್ಯಕ್ಷತೆ ಜಿ.ಆರ್.ರಾಜು ಆಡಳಿತವಹಿಸಿಕೊಂಡು ಶ್ರೀ ವಾಲ್ಮೀಕಿ ಜಯಂತಿ ಅಂಗವಾಗಿ ಮಾತನಾಡಿತ್ತ ಮನುಷ್ಯ ನಲ್ಲಿ ಸಂಸ್ಕಾರ ಮತ್ತು ಸಾತ್ವಿಕತೆ ಇರಬೇಕು ಇವು ಇಲ್ಲವರೇ ಮನುಷ್ಯ ಭೂಮಿಮೇಲೆ ಉಳಿಯಕ್ಕೆ ಸಾಧ್ಯವಿಲ್ಲ ರಾಮಾಯಣ ಎಂಬ ಕಾವ್ಯ ಲೋಕ ಕಲ್ಯಾಣಕ್ಕೆ ನಾಂದಿ ಹಾಗಿದೆ ಪ್ರತಿಯೊಂಬ್ಬ ಮನುಷ್ಯ ಅಹಂಕಾರ ಹುಂಬತನ ಹಂಬಲಾವನ್ನು ಬಿಟ್ಟು ಸಮಾಜದಲ್ಲಿ ಒಳ್ಳೆಯ ತನದಿಂದ ಸಾಗಬೇಕು ಎಂದು ತಿಳಿಸಿದರು.


ಹಾಗೆ ವೇದಿಕೆಯಲ್ಲಿ ಅಧಿಕಾರಿ ಬಿಇಡಿ ಕಾಲೇಜಿನ ಪ್ರಾಚಾರ್ಯರಾದ ಎಚ್. ಎಂ.ವಿಜಯಕುಮಾರ್, ರವರು ವಾಲ್ಮೀಕಿ ಮಹರ್ಷಿ ಜಯಂತಿ ಕುರಿತು ಮಾತನಾಡುತ್ತ ಜಗತ್ತು ಕಂಡ ಮೊಟ್ಟ ಮೊದಲ ಕವಿ ವಾಲ್ಮೀಕಿ ಮಹರ್ಷಿ ಅವರ ಕಾವ್ಯ ಆದಿ ಕಾವ್ಯ ಅದುವೇ ಶ್ರೀ ರಾಮಾಯಣ ಎಂದು ತಿಳಿಸಿದರು.


ಹಾಗೆ ಈ ಸಂದರ್ಭದಲ್ಲಿ ಬಿ ಫಾರ್ಮಸಿ ಪ್ರಾಚಾರ್ಯ ಜಯಚಂದ್ರ ಇಂಗ್ಲಿಷ್ ಮಾಧ್ಯಮ ಮುಖೋಪಾಧ್ಯಾಯ ಮಲೈಕಾ, ಜ್ಞಾನಭಾರತಿ ಕನ್ನಡ ಮಾಧ್ಯಮ ಮುಖ್ಯೋಪಾಧ್ಯಾಯ ಮಂಜುನಾಥ್, ಬಿಇಡಿ ಕಾಲೇಜಿನ ಉಪನ್ಯಾಸಕರದ ಎನ್ ಬಸವರಾಜ್, ಕೆ ನಾಗರಾಜ್, ಪ್ರದೀಪ್, ಅರ್ಚನ ಮತ್ತು ಸಂಸ್ಥೆಯ ಎಲ್ಲಾ ಶಿಕ್ಷಕರು, ಮಕ್ಕಳು ಮತ್ತು ಪ್ರಾಶಿಕ್ಷಣಾರ್ಥಿಗಳು ಹಾಜರಿದ್ದರು.
ನಿರೂಪಣೆ ಕಾವ್ಯಬಣಕರ್, ಸ್ವಾಗತ ನಿಂಗಪ್ಪ, ವಂದನಾರ್ಪಣೆ ಮಹೇಶ್, ಪ್ರಾರ್ಥನೆ ಕಾವ್ಯಕ್ಕೆ ಸೌಂದರ್ಯ ನೆರವೇರಿಸಿದ್ದರು.

ವರದಿ ರಾಘವೇಂದ್ರ ಸಾಲುಮನೆ ಕೂಡ್ಲಿಗಿ

Leave a Reply

Your email address will not be published. Required fields are marked *