ಕುಂಚಿ ಕೊರವರ ಸಂಘಟನೆಗೆ ಹುಲಿಗಿ ಘಟಕದ ಅಧ್ಯಕ್ಷರಾಗಿ ಪನ್ನ ಗಂಗಪ್ಪ ಆಯ್ಕೆ

Loading

ಹುಲಿಗಿ: ಕುಂಚಿ ಕೊರವರ ಸಂಘಟನೆಗೆ ಕೊಪ್ಪಳ ಜಿಲ್ಲಾ ಗಂಗಾವತಿ ತಾಲೂಕಿನ  ಹುಲಿಗಿ ಘಟಕದ ಅಧ್ಯಕ್ಷ ,ಉಪಾಧ್ಯಕ್ಷ ,ಪದಾಧಿಕಾರಿಗಳ ನೇಮಕ ಆಯ್ಕೆ ಪ್ರಕ್ರಿಯೆ ನಡೆಯಿತು.

ಕೊಪ್ಪಳ ,ಬಳ್ಳಾರಿ,ವಿಜಯನಗರ,ಜಿಲ್ಲೆಗಳ ಉಸ್ತುವಾರಿಯ ಕೆ ಕೊಟ್ರೇಶ್ ಕೊಟ್ಟೂರು  ಆದೇಶದಂತೆ ಗಂಗಾವತಿ ವೆಂಕಟೇಶ್ ನೇತೃತ್ವದಲ್ಲಿ ಗಂಗಾವತಿ ತಾಲೂಕಿನ ಹುಲಿಗಿ ಘಟಕ ರಚನೆ ಮಾಡಲಾಯಿತು.

26.09.2024 ಗುರುವಾರ ರಂದು ಹಾವುನೂರು ದ್ಯಾಮವ್ವ ದೇವಸ್ಥಾನದಲ್ಲಿ ಕುಂಚಿ ಕೊರವರ ಹುಲಿಗಿ ಘಟಕದ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.

ಕುಂಚಿ ಕೊರವರ ಸಮುದಾಯದ ಅಭಿವೃದ್ಧಿಗೆ    ಹಾಗೂ ಸರ್ಕಾರದ ಸೌಲಭ್ಯಗಳನ್ನು ನಮ್ಮ ಸಮುದಾಯಕ್ಕೆ ಒದಗಿಸುವ ನಿಟ್ಟಿನಲ್ಲಿ ಶ್ರಮಿಸುವೆ ಎಂದು ಗಂಗಾವತಿ ತಾಲೂಕಿನ ಹುಲಿಗಿ ಘಟಕದ ಅಧ್ಯಕ್ಷ ಪನ್ನ ಗಂಗಪ್ಪ ಮಾತನಾಡಿದರು.

ಗಂಗಾವತಿ ತಾಲೂಕಿನ ಹುಲಿಗಿ ಘಟಕದ ಪದಾಧಿಕಾರಿಗಳ ವಿವರ  : ಗೌರವಾಧ್ಯಕ್ಷ ಯಲ್ಲಪ್ಪ , ಉಪಾಧ್ಯಕ್ಷರನ್ನಾಗಿ ಈರಪ್ಪ, ಪ್ರಧಾನ ಕಾರ್ಯದರ್ಶಿ. ರವಿ, ಸಂಘಟನೆ ಕಾರ್ಯದರ್ಶಿ ಹುಲುಗಪ್ಪ, ಖಜಾಂಚಿ ವೆಂಕಟೇಶ್, ಸದಸ್ಯರು ಸಣ್ಣದ್ಯಾಮ, ಪರಶುರಾಮ್,
ಗಾಳಪ್ಪ, ಶ್ರೀ ನಿವಾಸ,ಗಂಗಪ್ಪ, ದೊಡ್ಡ ದ್ಯಾಮ, ಮಂಜುನಾಥ್, ಸುರೇಶ್,ಅಣ್ಣಪ್ಪ, ದುರುಗಪ್ಪ,ಅಂಜಿನಿ,
ಕೊಂಡಯ್ಯ,ದ್ಯಮಪ್ಪ,ಮುತ್ತಪ್ಪ,ವಿರೇಶ್,ಗಾಳಪ್ಪ,ನಾಗಪ್ಪ, ವೆಂಕಟೇಶ್,ಗೊಂಪಿ ,ಬೆನ್ನಪ್ಪ,ಮಾರಪ್ಪ, ಹುಲುಗಪ್ಪ,ಗಾಳಪ್ಪ, ಪರಶುರಾಮ್ ಸಮಾಜದ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *