” ರಾಷ್ಟ್ರೀಯ ಲೋಕ್ ಅದಾಲತ್‌ ಯಶಸ್ವಿ “

Loading

ಹಗರಿಬೊಮ್ಮನಹಳ್ಳಿ : ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ, ಹಗರಿಬೊಮ್ಮನಹಳ್ಳಿ ರವರ ವತಿಯಿಂದ ದಿನಾಂಕ:14.09.2024ರಂದು ರಾಷ್ಟ್ರೀಯ ಲೋಕ್ ಅದಾಲತ್‌ನ ನಿಮಿತ್ಯ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳನ್ನು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಸಂಧಾನಕ್ಕಾಗಿ ತೆಗೆದುಕೊಳ್ಳಲಾಗಿತ್ತು, ಸದರಿ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಚೆಕ್ ಬೌನ್ಸ್ ಪ್ರಕರಣಗಳು (138 NI Act) ಮತ್ತು ಪಾಲು ವಿಭಾಗ (Partition suits) ಪ್ರಕರಣಗಳು ಹಾಗೂ ಇತ್ಯಾದಿ ಪ್ರಕರಣಗಳಲ್ಲಿ ಕಕ್ಷಿದಾರರು ಹಾಗೂ ವಕೀಲರು ರಾಜೀ ಸಂಧಾನ ಮಾಡಿಕೊಳ್ಳುವ ಮೂಲಕ ಸದರಿ ಅದಾಲತ್‌ಗೆ ಸಹಕರಿಸಿರುತ್ತಾರೆ. ಮಾನ್ಯ ಹಿರಿಯ ಸಿವಿಲ್‌ ನ್ಯಾಯಾಧೀಶರು ಶ್ರೀ ಮಧುಸೂದನ್.ಡಿ.ಕೆ, ರವರ ನ್ಯಾಯಾಲಯಾದಲ್ಲಿ 786 ಪ್ರಕರಣಗಳ ಪೈಕಿ 241 ಪ್ರಕರಣಗಳನ್ನು ಇತ್ಯರ್ಥ ಮಾಡಿ ಒಟ್ಟು ರೂ.1,56,88,406ಗಳ ಪರಿಹಾರವಾಗಿರುತ್ತದೆ.

ಹಾಗೆಯೇ ಮಾನ್ಯ ಸಿವಿಲ್‌ ನ್ಯಾಯಾಧೀಶರು ಶ್ರೀ ಸೈಯ್ಯದ್‌ ಮೋಹಿದ್ದಿನರವರ ಸಿವಿಲ್‌ ರವರ ನ್ಯಾಯಾಲಯದಲ್ಲಿ 1294ಪ್ರಕರಣಗಳನ್ನು ಅದಾಲತ್‌ಗೆ ಗುರುತಿಸಿ ಅದರಲ್ಲಿ 472ಪ್ರಕರಣಗಳನ್ನು ಇತ್ಯರ್ಥ ಮಾಡಿ ಒಟ್ಟು ರೂ.19,96,746ಗಳ ಪರಿಹಾರವಾಗಿರುತ್ತದೆ. ಜೊತೆಗೆ 256 ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ 8 ಪ್ರಕರಣಗಳನ್ನು ಇತ್ಯರ್ಥ ಮಾಡಿ ಒಟ್ಟು 7,41,720ರೂ.ಗಳ ಪರಿಹಾರವಾಗಿರುತ್ತದೆ. ಗೌರವಾನ್ವಿತ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ರವರ ನಿರ್ದೇಶನದಂತೆ ವ್ಯಾಜ್ಯ ಮುಕ್ತ ಗ್ರಾಮಗಳನ್ನಾಗಿ ಹರೇಗೊಂಡನಹಳ್ಳಿ ಹಾಗೂ ಕೋಂಡೆನಹಳ್ಳಿಯನ್ನು ಗುರುತಿಸಲಾಗಿದ್ದು, ಸದರಿ ಗ್ರಾಮಗಳ ಪೈಕಿ 53 ಪ್ರಕರಣಗಳು ಸಮಿತಿಗೆ ನೀಡಲಾಗಿತ್ತು ಅದರಲ್ಲಿ 8 ಪ್ರಕರಣಗಳನ್ನು ಮುಕ್ತಾಯಮಾಡಲಾಗಿರುತ್ತದೆ, ಈ ಸಂದರ್ಭದಲ್ಲಿ ಮಾನ್ಯ ವಕೀಲರ ಸಂಘದ ಸದಸ್ಯರು, ನ್ಯಾಯಾಲಯದ ಸಿಬ್ಬಂದಿಗಳು ಮತ್ತು ಪೊಲೀಸ್‌ ಸಿಬ್ಬಂದಿಗಳು ಹಾಗೂ ಕಕ್ಷಿದಾರರು ಹಾಜರಿದ್ದು ಅದಾಲತ್‌ ಯಶಸ್ವಿಯಾಗಿದೆ.

Leave a Reply

Your email address will not be published. Required fields are marked *