
ಹಗರಿಬೊಮ್ಮನಹಳ್ಳಿ : ದಿನಾಂಕ:05.12.2023 ರಂದು ಫಿರ್ಯಾದಿದಾರರಾದ ಶ್ರೀ.ಟಿ.ಚಂದ್ರಪ್ಪ, ವಾಸ: ಹಂಪಿನಕಟ್ಟಿ ಗ್ರಾಮ ರವರು ಮರಿಯಮ್ಮನಹಳ್ಳಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ:ಫಿರ್ಯಾದಿದಾರರ ತಂದೆಯವರಾದ ಟಿ.ಹುಲುಗಪ್ಪ ರವರು ದಿನಾಂಕ:04.12.2023 ರಂದು ಸಂಜೆ:4:30 ಪಿ.ಎಂ. ಗಂಟೆ ಸುಮಾರಿಗೆ ಮರಿಯಮ್ಮನಹಳ್ಳಿ ಪಟ್ಟಣದ ಹೊಲವಲಯದಲ್ಲಿರುವ ಕೆ.ಈ.ಬಿ. ಹತ್ತಿರ ಕೂಡ್ಲಿಗಿ ಕಡೆಯಿಂದ ಹೊಸಪೇಟೆ ಕಡೆಗೆ ಹೋಗುವ ಎನ್.ಹೆಚ್.50 ರಸ್ತೆಯನ್ನು ಕ್ರಾಸ್ ಮಾಡಿಕೊಂಡು ಕೆ.ಇ.ಬಿ. ಕಡೆಗೆ ಇರುವ ಸರ್ವಿಸ್ ರಸ್ತೆಯ ಕಡೆಗೆ ಹೋಗುತ್ತಿದ್ದಾಗ ಕೆಂಪು ಬಣ್ಣದ ಆವೆಂಜರ್ ಮೋಟಾರ್ ಸೈಕಲ್ ನಂ: ಕೆಎ.03/ಹೆಚ್.ಎಲ್.1270 ನೇದ್ದನ್ನು ಅದರ ಚಾಲಕನು ಅತಿ ವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಕೂಡ್ಲಿಗಿ ಕಡೆಯಿಂದ ಹೊಸಪೇಟೆ ಕಡೆಗೆ ಅತಿ ವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಟಿ.ಹುಲುಗಪ್ಪ ರವರಿಗೆ ಢಿಕ್ಕಿ ಹೊಡೆಸಿದ್ದರಿಂದ ಟಿ.ಹುಲುಗಪ್ಪನಿಗೆ ತೀವ್ರವಾದ ರಕ್ತಗಾಯಗಳು ಆಗಿದ್ದು, ಚಿಕಿತ್ಸೆಗಾಗಿ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ:07.12.2023 ರಂದು ಬೆಳಗಿನ ಜಾವ:5:00 ಗಂಟೆಗೆ ಸುಮಾರಿಗೆ ಮೃತಪಟ್ಟಿರುತ್ತಾನೆ. ಈ ಅಪಘಾತವನ್ನುವುಂಟು ಮಾಡಿದ ಅವೆಂಜರ್ ಮೋಟಾರ್ ಸೈಕಲ್ನ ಚಾಲಕನು ತನ್ನ ಮೋಟಾರ್ ಸೈಕಲ್ನ್ನು ಅಲ್ಲಿಯೇ ಬಿಟ್ಟು, ಹೆಸರು ವಿಳಾಸವನ್ನು ತಿಳಿಸದೇ ಅಪಘಾತ ಸ್ಥಳದಿಂದ ಪರಾರಿಯಾಗಿರುತ್ತಾನೆ. ಈ ಅಪಘಾತವನ್ನುವುಂಟು ಮಾಡಿದ ಆವೆಂಜರ್ ಮೋಟಾರ್ ಸೈಕಲ್ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಸಾರಾಂಶದ ಮೇರೆಗೆ ಮೇಲ್ಕಂಡ ಉಲ್ಲೇಖದನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.
ಸದರಿ ಪ್ರಕರಣದ ತನಿಖೆಯಿಂದ ಅಪಘಾತಪಡಿಸಿದ ಮೋಟಾರ್ ಸೈಕಲ್ ಚಾಲಕನ ಪೋಟೊ ಸಿಕ್ಕಿದ್ದು, ಮೋಟಾರ್ ಸೈಕಲ್ ಚಾಲಕನ ಹೆಸರು ವಿಳಾಸದ ಪತ್ತೆಗಾಗಿ ಮೋಟಾರ್ ಸೈಕಲ್ ಚಾಲಕನ ಕಲರ್ ಫೋಟೋವನ್ನು ಮತ್ತು ಆರೋಪಿತನು ಉಪಯೋಗಿದ ಮೋಟಾರ್ ಸೈಕಲ್ನ ಭಾವಚಿತ್ರವನ್ನು ತನಿಖೆಗೆ ಪೂರಕವಾಗುವಂತೆ ತಮ್ಮ ಸುದ್ದಿ ವಾಹಿನಿಯಲ್ಲಿ ಪ್ರಸಾರ ಮಾಡಲು ಮಾನ್ಯರಲ್ಲಿ ಕೋರಿದೆ. ಅಪಘಾತಪಡಿಸಿದ ಮೋಟಾರ್ ಸೈಕಲ್ ಚಾಲಕನ ಭಾವಚಿತ್ರ ಮತ್ತು ಆವೆಂಜರ್
ಮೋಟಾರ್ ಸೈಕಲ್ನ ಭಾವಚಿತ್ರವನ್ನು ಲಗತ್ತಿಸಿದೆ ಅಪಘಾತಪಡಿಸಿದ ಮೋಟಾರ್ ಸೈಕಲ್ ಚಾಲಕನ ಹೆಸರು ಮತ್ತು ವಿಳಾಸದ ಬಗ್ಗೆ ಮಾಹಿತಿ ಸಿಕ್ಕಲ್ಲಿ ಈ ಕೆಳಕಂಡ ವಿಳಾಸಗಳನ್ನು ಸಂಪರ್ಕಿಸಲು ಕೋರಿದೆ.