ಮಾನವ ಸರಪಳಿ ಕಾರ್ಯಕ್ರಮ

Loading

ಅಚ್ಚುಕಟ್ಟಾಗಿ ನಡೆಯಲಿ: ಎಂ.ಎಸ್.ದಿವಾಕರ ಸೂಚನೆ

ಹೊಸಪೇಟೆ (ವಿಜಯನಗರ) : ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಮಾನವ ಸರಪಳಿ ಕಾರ್ಯಕ್ರಮವು ಸೆ.15ರಂದು ಅಚ್ಚುಕಟ್ಟಾಗಿ ನಡೆಯಬೇಕು. ಯಾವುದೇ ಲೋಪಕ್ಕೆ ಅವಕಾಶವಾಗದಂತೆ ಅಧಿಕಾರಿಗಳು ಜಾಗೃತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ಹೇಳಿದರು.


ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸೆಪ್ಟೆಂಬರ್ 12ರಂದು ನಡೆದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಸೆಪ್ಟೆಂಬರ್ 15ರಂದು ಅಂದು ವಿಜಯನಗರ ಜಿಲ್ಲೆಯಲ್ಲಿ ಸುಮಾರು 38 ಕಿಲೋ ಮೀಟರ್‌ವರೆಗೆ ಮಾನವ ಸರಪಳಿ ನಿರ್ಮಿಸಲಾಗುತ್ತದೆ. ಟಿ.ಬಿ. ಡ್ಯಾಮ್ ಮೊದಲನೇ ಸೇತುವೆಯಿಂದ ಗಣೇಶ ದೇವಸ್ಥಾನದವರೆಗೆ 1 ಕಿ.ಮೀ., ಗಣೇಶ ದೇವಸ್ಥಾನದಿಂದ ಸಾಯಿಬಾಬಾ ಸರ್ಕಲ್‌ದವರೆಗೆ 3 ಕಿ.ಮೀ, ಸಾಯಿಬಾಬಾ ಸರ್ಕಲ್‌ನಿಂದ ಬಸವೇಶ್ವರ ಸರ್ಕಲ್‌ವರೆಗೆ 2 ಕಿ.ಮೀ, ಬಸವೇಶ್ವರ ಸರ್ಕಲ್‌ದಿಂದ ಅಪ್ಪು ಸರ್ಕಲ್‌ವರೆಗೆ 2 ಕಿ.ಮೀ., ಅಪ್ಪು ಸರ್ಕಲ್‌ನಿಂದ ಬಳ್ಳಾರಿ ರೋಡ್ ಸರ್ಕಲ್ ವರೆಗೆ 1.5 ಕಿ.ಮೀ., ಬಳ್ಳಾರಿ ರೋಡ್ ಸರ್ಕಲ್‌ದಿಂದ ಕಾರಿಗನೂರು ವರೆಗೆ 4 ಕಿ.ಮೀ., ಕಾರಿಗನೂರಿದಿಂದ ವಡ್ಡರಹಳ್ಳಿವರೆಗೆ 5 ಕಿ.ಮೀ., ವಡ್ಡರಹಳ್ಳಿದಿಂದ ಪಿ.ಕೆ.ಹಳ್ಳಿವರೆಗೆ 3 ಕಿ.ಮೀ, ಪಿ.ಕೆ.ಹಳ್ಳಿಯಿಂದ ಬಯಲುವದ್ದಿಗೆರಿವರೆಗೆ 4 ಕಿ.ಮೀ., ಬಯಲುವದ್ದಿಗೇರಿಯಿಂದ ಧರ್ಮಸಾಗರ ವರೆಗೆ 5 ಕಿ.ಮೀ., ಧರ್ಮಸಾಗರದಿಂದ ಗಾದಿಗನೂರುವರೆಗೆ 4 ಕಿ.ಮೀ., ಅಂತಿಮವಾಗಿ ಗಾದಿಗನೂರು ದಿಂದ ಭುವನಹಳ್ಳಿ ಗ್ರಾಮದವರೆಗೆ 3 ಕಿ.ಮೀ ಸೇರಿ ಒಟ್ಟು 38 ಕಿಲೋ ಮೀಟರ್.

ಮಾನವ ಸರಪಳಿಯನ್ನು ವಿಜಯನಗರ ಜಿಲ್ಲಾ ವ್ಯಾಪ್ತಿಯಲ್ಲಿ ರಚಿಸಬೇಕಿರುತ್ತದೆ. ಪ್ರತಿ 3 ಕಿ.ಮೀಗೆ ಒಬ್ಬರು ಜಿಲ್ಲಾಮಟ್ಟದ ಅಧಿಕಾರಿ, ಪ್ರತಿ 1 ಕಿ.ಮೀಗೆ ಒಬ್ಬರಂತೆ ತಾಲೂಕುಮಟ್ಟದ ಅಧಿಕಾರಿಗಳನ್ನು ಮೇಲ್ವಿಚಾರಣೆಗೆ ನಿಯೋಜಿಸಿದ್ದು ಈ ಅಧಿಕಾರಿಗಳು ಖುದ್ದು ಹಾಜರಿದ್ದು ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಅಂದು ಡ್ಯಾಮನ ಮೊದಲನೇ ಸೇತುವೆಯಿಂದ ಮಾನವ ಸರಪಳಿ ರಚನಾ ಕಾರ್ಯ ಆರಂಭವಾಗಿ ಅದು ಪೂರ್ಣವಾಗುವವರೆಗೆ ಯಾವುದೇ ಕಡೆಗಳಲ್ಲಿ ಯಾರಿಗೂ ಸಹ ತೊಂದರೆಯಾಗಬಾರದು. ಪಕ್ಕದ ಕೊಪ್ಪಳ ಜಿಲ್ಲೆಯಿಂದ ಬರುವ ಮಾನವ ಸರಪಳಿಗೆ ನಮ್ಮ ಜಿಲ್ಲೆಯ ಮಾನವ ಸರಪಳಿಯನ್ನು ಜೋಡಿಸಬೇಕು. ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ಸಾರ್ವಜನಿಕರು, ಯುವಜನರು ಸರಿಯಾದ ಸಮಯಕ್ಕೆ ಹಾಜರಿರುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.


ಸೆ.15 ಭಾನುವಾರ ಆಗಿದ್ದರಿಂದ ಸಂಬAಧಿಸಿದ ಅಧಿಕಾರಿಗಳು ಖುದ್ದು ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ, ಆಯಾ ಕಾಲೇಜಿನ ಪ್ರಾಚಾರ್ಯರು ಮತ್ತು ಮುಖ್ಯಾಧ್ಯಾಪಕರೊಂದಿಗೆ ಮಾತನಾಡಿ ವಿದ್ಯಾರ್ಥಿಗಳನ್ನು ಕಾರ್ಯಕ್ರಮಕ್ಕೆ ಕರೆ ತರುವಂತಾಗಬೇಕು ಎಂದು ಸೂಚನೆ ನೀಡಿದರು.


ಸೆಪ್ಟೆಂಬರ್ 15ರಂದು ಕರ್ತವ್ಯ ದಿನ ಎಂದು ಪರಿಗಣಿಸಿ ಕಾರ್ಯನಿರ್ವಹಿಸಲು ಈಗಾಗಲೇ ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಿಗೆ ಸುತ್ತೋಲೆ ಕಳುಹಿಸಿ ಸೂಚನೆ ನೀಡಲಾಗಿದೆ. ಅದರಂತೆ ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳ ಪ್ರಾಂಶುಪಾಲರು ಮತ್ತು ಮುಖ್ಯಾಧ್ಯಾಪಕರು ಅಂತಾರಾಷ್ಟಿçÃಯ ಪ್ರಜಾಪ್ರಭುತ್ವ ದಿನಾಚರಣೆಗೆ ಅಗತ್ಯ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಸಭೆಯ ಮೂಲಕ ಕೋರಿದರು.


ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಭೀಮಪ್ಪ ಲಾಳಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಮಂಜುನಾಥ್ ಹೆಚ್.ಎಸ್., ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶರಣಪ್ಪ ಮುದುಗಲ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ರಾಮಚಂದ್ರಪ್ಪ ಕೆ.ಬಿ., ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಪ್ರಭುಲಿಂಗ ಎಸ್. ತಳಿಕೆರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಶ್ವೇತಾ .ಎಸ್ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *