ಹೊಸಪೇಟೆ 2ನೇ ವಲಯ ಮಟ್ಟದ ಕ್ರೀಡಾಕೂಟ

Loading

ಹೊಸಪೇಟೆ ( ವಿಜಯ ನಗರ ) : ನಗರದಲ್ಲಿ ದಿನಾಂಕ 10/09/2024 ರ ಮಂಗಳವಾರ ಪುನೀತ್ ರಾಜ್ ಕುಮಾರ್ ಜಿಲ್ಲಾ ಕ್ರೀಡಾಗಣದಲ್ಲಿ
ಹಿರಿಯ ಪ್ರಾಥಮಿಕ ಶಾಲೆಗಳ 2ನೇ ವಲಯ ಮಟ್ಟದ ಕ್ರೀಡಾಕೂಟ ವನ್ನು ಆಯೋಜನೆ ಮಾಡಲಾಯಿತು.

ಈ ಕ್ರೀಡಾಕೂಟವನ್ನು ಕ್ರೀಡಾ ಧ್ವಜ ಮತ್ತು ಕ್ರೀಡಾ ಜ್ಯೋತಿಯನ್ನು ನೆರವೇರಿಸಿ ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮ ಕ್ಕೆ ಚಾಲನೆ ಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮ ದಲ್ಲಿ ಮಾತನಾಡಿದ ನಗರ ಅಭಿವೃದ್ಧಿ ಪ್ರಾಧಿಕಾರ ದ ಅಧ್ಯಕ್ಷರು ವಿಜಯ ನಗರ ಆದ ಶ್ರೀ ಇಮಾಮ್ ನಿಯಾಜ್ ಅವರು ಈ ಕ್ರೀಡಾ ಕಾರ್ಯಕ್ರಮದಲ್ಲಿ ಎಲ್ಲರೂ ಸೌಹಾರ್ದ ದಿಂದ ಆಟ ಆಡಿ ಯಾರ ಮೇಲೂ ದ್ವೇಷ ಪಡದೆ ಉತ್ತಮ ರೀತಿಯಲ್ಲಿ ಆಟ ಆಡಿ ಎಂದರು.

ಹಾಗೆಯೇ ಸಹಾಯ ನಿರ್ದೇಶಕರು ಅಕ್ಷರ ದಾಸೋಹ ಇಲಾಖೆ ಯ ಸುಧಾಕರ ಅವರು ಮಾತನಾಡಿ ಕ್ರೀಡೆಗಳಲ್ಲಿ ಗೆಲುವು ಸೋಲು ಮುಖ್ಯವಲ್ಲ ನಾವು ದೈಹಿಕವಾಗಿ ಉತ್ತಮರು ಎಂಬುದನ್ನು ತೋರುವ ವೇದಿಕೆಯಾಗಿದೆ ಎಲ್ಲಾ ಕ್ರೀಡೆಗಳು ಪ್ರಾರಂಭವಾಗುವುದು ಈ ವಲಯ ಮಟ್ಟದಿಂದಲೇ ಮುಂದೆ ತಾಲೂಕು ಜಿಲ್ಲಾ ರಾಜ್ಯ ಮತ್ತು ಅಂತರಾಜ್ಯ ಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಆಟಗಳಲ್ಲಿ ನಮ್ಮ ದೇಶದ ಪರವಾಗಿ ಆಡುವ ಅವಕಾಶ ಲಭಿಸುತ್ತದೆ ಎಂದು ತಮ್ಮದೇ ಆದ ಶೈಲಿಯಲ್ಲಿ ಕ್ರೀಡಾಪಟುಗಳಿಗೆ ಹುರಿದುಂಬಿಸಿದರು.

ಈ ಕ್ರೀಡಾಕೂಟದಲ್ಲಿ ಮೊದಲಿಗೆ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳು ಹಾಗೂ ಗಣ್ಯರಿಂದ 100 ಮೀಟರ್ ಓಟದಿಂದ ಪ್ರಾರಂಭಿಸಿ ಚಾಲನೆ ನೀಡಿದರು.

ಈ ಕ್ರೀಡಾಕೂಟ ದಲ್ಲಿ ವೈಯಕ್ತಿಕ 100 ಮೀಟರ್ ಓಟದಲ್ಲಿ ಸಮರ್ಥ್ ಎಲ್ ಎಫ್ ಎಸ್ ಸ್ಕೂಲ್. ದ್ವಿತೀಯ ಕಿರಣ ಅಶ್ವಿನಿ ಶಾಲೆ. ತೃತೀಯ ಧರ್ಮರಾಜ್ NC TB ಡ್ಯಾಮ್ ಶಾಲೆ.

ಗುಂಡು ಎಸೆತ ದಲ್ಲಿ ಕೋಮಲ ಅಶ್ವಿನಿ ಶಾಲೆ ಪ್ರಥಮ ಸ್ಥಾನ ಭೀಮವ್ವ ವಿನೋಬಾ ಶಾಲೆ ದ್ವಿತೀಯ ಸ್ಥಾನ ಮತ್ತು ಪರಿಮಳ HBS TB dam

ಚಕ್ರ ಎಸೆತ ಕೋಮಲ ಪ್ರಥಮ ಸ್ಥಾನ ದ್ವಿತೀಯ ಭೀಮವ್ವ ಹಾಗೂ ತೃತೀಯ ಸುಚಿತ್ರ ಹಾಗೂ ಗುಂಪು ಆಟಗಳಲ್ಲಿ ಖೋ ಖೋ ಆಟ ದಲ್ಲಿ ಎಲ್ ಎಫ್ ಸ್ಕೂಲ್ ಪ್ರಥಮ ಮತ್ತು ಇಪ್ಪಿತೇರಿ ಮಾಗಾಣಿ ಶಾಲೆ ದ್ವಿತೀಯ ಸ್ಥಾನವನ್ನು ಪಡೆದಿದೆ.

ಈ ಸಂದರ್ಭದಲ್ಲಿ ಕೆ ಬಸವರಾಜ್ ಶಿಕ್ಷಕರ ಸಂಘದ ಅಧ್ಯಕ್ಷರು. N b ನಿಜಾಮೂದಿನ್ ಸಮಾಜದ ಸೇವಕರು. ಬಿ ವೆಂಕಟರಮಣ ಕಾರ್ಮಿಕ ಸಂಘ ದ ಅಧ್ಯಕ್ಷರು. ಮತ್ತು
ವಲಯದ ಕ್ರೀಡಾ ಕಾರ್ಯದರ್ಶಿ ಗಳು ಮತ್ತು ಹೊಸೂರು ಶಾಲೆಯ ಮುಖ್ಯ ಗುರುಗಳಾದ ಮಂಜಪ್ಪ ರಂಗಪ್ಪ ನವರ್. ಮತ್ತು ಜಿಲ್ಲಾ ನೌಕರರ ಸಂಘ ರಾಜ್ಯ ಪರಿಷತ್ ಸದ್ಯಸರು ಎಸ್ ಬಸವರಾಜ್ ಇವರು ಪಾಲ್ಗೊಂಡಿದ್ದರು. ಹಾಗೂ

ಹೊಸಪೇಟೆ ತಾಲೂಕಿನ ವಿವಿಧ ಶಾಲೆಯ ಮಕ್ಕಳು ಈ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಕ್ರೀಡಾಕೂಟವನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *