
ಹಗರಿಬೊಮ್ಮನಹಳ್ಳಿ : ದಿನಾಂಕ;02.06.2024 ರಂದು ಹಗರಿಬೊಮ್ಮನಹಳ್ಳಿ ಪಟ್ಟಣದ ಹೊರವಲಯದಲ್ಲಿ ಶ್ರೀ ರವೀಶ್ ಮೇಟಿ. ಹೆಚ್ಸಿ-58 ತಂಬ್ರಹಳ್ಳಿ ಪೊಲೀಸ್ ಠಾಣೆ ಇವರ ಮನೆ ಕಳ್ಳತನವಾಗಿ ಸುಮಾರು ರೂ 3.92.000 ಬೆಲೆಯ ಬಂಗಾರದ ಆಭರಣಗಳು ಹಾಗೂ ರೂ 8000.00 ನಗದು ಹಣ ಕಳ್ಳತನವಾಗಿದ್ದು ಈ ಸಂಬಂದ ಹ.ಬೊ.ಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂ 66/2024 . 457. 380 ಐ ಪಿ ಸಿ ರೀತ್ಯ ದಾಖಲಾಗಿರುತ್ತದೆ.
ಕೊಟ್ಟೂರು ಪೊಲೀಸ್ ಠಾಣೆ ಗುನ್ನೆ : 07/2024 454. 457. 380 ಐ ಪಿ ಸಿ ಗುನ್ನೆ ನಂ 131/2024 ಕಲಂ 331(3) 331(4) 305(ಎ) ಬಿಎನ್ಎಸ್ ಪ್ರಕರಣಗಳಲ್ಲಿ ಮನೆ ಕಳ್ಳತನ ಮಾಡಿದ ಆರೋಪಿತರು ಮಾಲು ಪತ್ತೇ ಕಾರ್ಯಕ್ಕೆ
ಮಾನ್ಯ ಶ್ರೀ. ಶ್ರೀಹರಿಬಾಬು, ಐಪಿಎಸ್, ಪೊಲೀಸ್ ಅಧೀಕ್ಷಕರು, ವಿಜಯನಗರ ಜಿಲ್ಲೆ ಮತ್ತು ಮಾನ್ಯ, ಶ್ರೀ ಸಲೀಂ ಪಾಷ ಎ.ಎಸ್.ಪಿ. ವಿಜಯನಗರ ಜಿಲ್ಲೆ ಮಾನ್ಯ ಶ್ರೀ.ಮಲ್ಲೇಶಪ್ಪ ಮಲ್ಲಾಪುರ, ಡಿ.ಎಸ್.ಪಿ.ಕೂಡ್ಲಿಗಿ ಉಪವಿಭಾಗ ರವರ ಮಾರ್ಗದರ್ಶನದಲ್ಲಿ, ಶ್ರೀ ವಿಕಾಸ್ ಲಮಾಣಿ ಸಿ.ಪಿ.ಐ. ಹೆಚ್.ಬಿ.ಹಳ್ಳಿ ಮತ್ತು ಶ್ರೀ ವೆಂಕಟಸ್ವಾಮಿ ಸಿಪಿಐ ಕೊಟ್ಟೂರು ವೃತ್ತ ರವರ ನೇತೃತ್ವದಲ್ಲಿ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯ ಪಿ.ಎಸ್.ಐ. ಶ್ರೀ ಬಸವರಾಜ ಅಡವಿಬಾವಿ ಮತ್ತು ಕೊಟ್ಟೂರು ಠಾಣೆಯ ಪಿಎಸ್ಐ ಶ್ರೀಮತಿ ಗೀತಾಂಜಲಿ ಹಾಗೂ ಹ,ಬೊ.ಹಳ್ಳಿ ಠಾಣೆಯ ಪಿಎಸ್ಐ ಶ್ರೀ ಜಿ,ಕೆ, ಅಬ್ಬಾಸ್ ಮತ್ತು ಸಿಬ್ಬಂದಿಯವರಾದ, ಕೂಡ್ಲಿಗಿಯ ಡಿ.ಎಸ್.ಪಿ. ಸಾಹೇಬರ ಕಛೇರಿಯ ಸಿಬ್ಬಂದಿಯವರಾದ ಸಿ.ಕೊಟ್ರೇಶ ಹೆಚ್.ಸಿ.183, ಹೆಚ್.ಬಿ.ಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ರಾಮಾಂಜಿನಿ ಸಿಹೆಚ್ಸಿ-163.ಶಿವಾನಂದ ಎಸ್ ಹೆಚ್ ಸಿ 267.ದಶರಥ 114 ಸಿದ್ದೇಶ್ ಹೆಚ್ ಸಿ 238 ಮಲ್ಲೇಶ್ ನಾಯ್ಕ್ ಸಿ ಪಿ ಸಿ 241. ಶ್ರೀಮತಿ ವಿನೋದ ಮಪಿಸಿ 147. ಶ್ರೀ ಶಿವರಾಜ ಸಿಪಿಸಿ 20. ಪರಶುರಾಮ ಸಿಪಿಸಿ 366. ಚಿದಾನಂದ ಸಿಪಿಸಿ 353. ಮಹೇಶ್ ಸಿಪಿಸಿ 409. ಸುರೇಶ್ ಕುಮಾರ್, ಸಿಪಿಸಿ-296. ಹನುಮಂತ- ಸಿಪಿಸಿ-413. ಎಂ,ಸುರೇಶ್ ಕುಮಾರ್ ಸಿಪಿಸಿ- 330.

ಕೊಟ್ಟೂರು ಠಾಣೆಯ ಸಿಬ್ಬಂದಿಯವರಾದ ವೀರೇಶ ಪಿ.ಸಿ.166, ಬಸವರಾಜ ಪಿ.ಸಿ.204, ಶಶಿಧರ ವೈ. ಪಿ.ಸಿ.494, ರೇವಣಸಿದ್ದಪ್ಪ ಪಿ.ಸಿ.338, ಯು.ನಾಗಪ್ಪ ಹೆಚ್.ಸಿ.256 ಇವರುಗಳ ಒಂದು ತಂಡವನ್ನು ರಚನೆ ಮಾಡಿದ್ದು, ಖಚಿತ ಮಾಹಿತಿ ಮೇರೆಗೆ ದಿನಾಂಕ: 07-09-2024 ರಂದು ಬೆಳಿಗ್ಗೆ 7-30 ಗಂಟೆಗೆ ತನಿಖಾಧಿಕಾರಿಗಳು ಮತ್ತು ಸಿಬ್ಬಂದಿಯವರ ತಂಡ ಆರೋಪಿತನಾದ: ಹೆಚ್.ಹನುಮಂತ ತಂದೆ ಕೊಲ್ಲಪ್ಪ, ವ: 26 ವರ್ಷ, ಭೋವಿ ಜನಾಂಗ, ಗಾರೆ ಕೆಲಸ ವಾಸ. ಭೈರಾದೇವರಗುಡ್ಡ ಗ್ರಾಮ ಕೊಟ್ಟೂರು ತಾ. ಹಾಲಿವಾಸ ಕರಿಮಾರಮ್ಮ ದೇವಸ್ಥಾನದ ಹತ್ತಿರ ಕರಿಮಾರಮ್ಮ ಕಾಲೋನಿ ಬಳ್ಳಾರಿ ನಗರ. ಈತನಿಗೆ ವಶಕ್ಕೆ ಪಡೆದುಕೊಂಡು ಕೊಟ್ಟೂರು ಠಾಣೆಯ ಮೇಲ್ಕಂಡ 02 ಪ್ರಕರಣಗಳಲ್ಲಿ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದರಿಂದ ದಸ್ತಗಿರಿ ಕ್ರಮ ಅನುಸರಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಕೊಟ್ಟೂರು ಠಾಣೆಯ ಪ್ರಕರಣಗಳ ವಿಚಾರಣೆ ಸಮಯದಲ್ಲಿ ಹಗರಿಬೊಮ್ಮನಹಳ್ಳಿ ಪಟ್ಟಣದ ಹರಿಹರ ರಸ್ತೆಯಲ್ಲಿ ಸಹ ಒಂದು ಕಳ್ಳತನ ಮಾಡಿರುತ್ತೇನೆಂದು ತನ್ನ ಸ್ವ-ಖುಷಿ ಏಳಿಕೆಯಲ್ಲಿ ಒಪ್ಪಿಕೊಂಡಿದ್ದರಿಂದ ಸದರಿ ಆಸಾಮಿಯನ್ನು ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ನ್ಯಾಯಾಂಗ ಬಂದನದಿಂದ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ಮಾಡಿದಾಗ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಸಹ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದರಿಂದ ಈ ಆರೋಪಿಯ ಕಡೆಯಿಂದ.
ಹ.ಬೊ.ಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂ 66/2024 500. 457. 380 ಐಪಿಸಿ
1) ಬಂಗಾರದ ನಾಲ್ಕು ಬಳೆಗಳು
2) ಬಂಗಾರದ 01 ಮಾಂಗಲ್ಯ ಚೈನ್ ಸರ
3] ಬಂಗಾರದ 03 ಜೊತೆ ಬೆಂಡೋಲೆಗಳು,
4] ಬಂಗಾರದ 02 ಉಂಗುರಗಳು,
5] ಬಂಗಾರದ 01 ಚೈನ್ ಸರ.
ಎಲ್ಲಾ ಒಟ್ಟು 5.15.564 /-ರೂ ಬೆಲೆ ಬಾಳುವ ಬಂಗಾರದ ಆಭರಣಗಳನ್ನು ಜಪ್ತು ಪಡಿಸಿಕೊಂಡಿರುತ್ತಾರೆ.