ಮಾನವ ಸರಪಳಿ ಕಾರ್ಯಕ್ರಮಕ್ಕೆ ಸಾರ್ವಜನಿಕರು ಸಹಕರಿಸಲಿ: ಡಿ.ಸಿ ಎಂ.ಎಸ್.ದಿವಾಕರ ಮನವಿ

ಹೊಸಪೇಟೆ (ವಿಜಯನಗರ) ಸೆಪ್ಟೆಂಬರ್ 10 : ಸೆಪ್ಟೆಂಬರ್ 15 ರಂದು ಅಂತರಾಷ್ಟಿçÃಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ರಾಜ್ಯ ಸರ್ಕಾರದ ನಿರ್ದೇಶನದಂತೆ ವಿಜಯನಗರ ಜಿಲ್ಲೆಯಲ್ಲಿ ನಡೆಸುವ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ಮನವಿ ಮಾಡಿದ್ದಾರೆ.
ರಾಜ್ಯ ಸರಕಾರದಿಂದ ಈ ಕಾರ್ಯಕ್ರಮವು ಬೀದರ್ನಿಂದ ಚಾಮರಾಜನಗರದವರೆಗೆ ಎಲ್ಲ ಕಡೆಗಳಲ್ಲಿ ನಡೆಯಲಿದೆ. ಸಂವಿಧಾನದ ಗೌರವ, ಘನತೆಯನ್ನು ಹೆಚ್ಚಿಸುವ ಉದ್ದೇಶದಿಂದ ಎಲ್ಲಾ ಕಡೆಗೆ ಬೃಹತ್ ಮಾನವ ಸರಪಳಿ ರಚಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಅದರ ಭಾಗವಾಗಿ ವಿಜಯನಗರ ಜಿಲ್ಲೆಯಲ್ಲಿ ಸೆಪ್ಟೆಂಬರ್ 15ರ ಬೆಳಗ್ಗೆ 7.30 ರಿಂದ ಹೊಸಪೇಟೆ ತಾಲೂಕಿನ ಟಿ.ಬಿ.ಡ್ಯಾಂನ ಮೊದಲ ಸೇತವೆಯಿಂದ ಗಣೇಶ ದೇವಸ್ಥಾನದವರೆಗೆ 1 ಕಿ.ಮೀ., ಗಣೇಶ ದೇವಸ್ಥಾನದಿಂದ ಸಾಯಿಬಾಬಾ ಸರ್ಕಲ್ದವರೆಗೆ 3 ಕಿ.ಮೀ, ಸಾಯಿಬಾಬಾ ಸರ್ಕಲ್ನಿಂದ ಬಸವೇಶ್ವರ ಸರ್ಕಲ್ವರೆಗೆ 2 ಕಿ.ಮೀ, ಬಸವೇಶ್ವರ ಸರ್ಕಲ್ದಿಂದ ಅಪ್ಪು ಸರ್ಕಲ್ವರೆಗೆ 2 ಕಿ.ಮೀ., ಅಪ್ಪು ಸರ್ಕಲ್ನಿಂದ ಬಳ್ಳಾರಿ ರೋಡ್ ಸರ್ಕಲ್ ವರೆಗೆ 1.5 ಕಿ.ಮೀ., ಬಳ್ಳಾರಿ ರೋಡ್ ಸರ್ಕಲ್ದಿಂದ ಕಾರಿಗನೂರು ವರೆಗೆ 4 ಕಿ.ಮೀ., ಕಾರಿಗನೂರಿದಿಂದ ವಡ್ಡರಹಳ್ಳಿವರೆಗೆ 5 ಕಿ.ಮೀ., ವಡ್ಡರಹಳ್ಳಿದಿಂದ ಪಿ.ಕೆ.ಹಳ್ಳಿವರೆಗೆ 3 ಕಿ.ಮೀ, ಪಿ.ಕೆ.ಹಳ್ಳಿಯಿಂದ ಬಯಲುವದ್ದಿಗೆರಿವರೆಗೆ 4 ಕಿ.ಮೀ., ಬಯಲುವದ್ದಿಗೇರಿಯಿಂದ ಧರ್ಮಸಾಗರ ವರೆಗೆ 5 ಕಿ.ಮೀ., ಧರ್ಮಸಾಗರದಿಂದ ಗಾದಿಗನೂರುವರೆಗೆ 4 ಕಿ.ಮೀ., ಅಂತಿಮವಾಗಿ ಗಾದಿಗನೂರು ದಿಂದ ಭುವನಹಳ್ಳಿ ಗ್ರಾಮದವರೆಗೆ 3 ಕಿ.ಮೀ ಸೇರಿ ಒಟ್ಟು 38 ಕಿಲೋ ಮೀಟರ್ ಮಾನವ ಸರಪಳಿಯನ್ನು ವಿಜಯನಗರ ಜಿಲ್ಲಾ ವ್ಯಾಪ್ತಿಯಲ್ಲಿ ರಚಿಸಲಾಗುತ್ತದೆ.
ರಾಜ್ಯಾದ್ಯಂತ ಏಕಕಾಲಕ್ಕೆ ಬೃಹತ್ ಮಾನವ ಸರಪಳಿ ನಿರ್ಮಿಸುತ್ತಿರುವುದರಿಂದ ವಿಜಯನಗರ ಜಿಲ್ಲಾ ವ್ಯಾಪ್ತಿಯಲ್ಲಿ ಸಹ ಈ ಕಾರ್ಯಕ್ರಮವು ಸೆಪ್ಟೆಂಬರ್ 15ರಂದು ಅಚ್ಚುಕಟ್ಟಾಗಿ ನಡೆಯಬೇಕು. ಈ ಮಾನವ ಸರಪಳಿ ನಿರ್ಮಿಸಲು ಸಾವಿರರು ಸಂಖ್ಯೆಯಲ್ಲಿ ಜನರನ್ನು ಸೇರಿಸಬೇಕಾಗಿದೆ. ಹಾಗಾಗಿ ಜಿಲ್ಲೆಯ ಸಾರ್ವಜನಿಕರು ಸ್ವ-ಇಚ್ಚೆಯಿಂದ ಈ ಬೃಹತ್ ಮಾನವ ಸರಪಳಿಗೆಯಲ್ಲಿ ಭಾಗವಹಿಸಿ ನಮ್ಮ ಸಂವಿಧಾನದ ಗೌರವ ಮತ್ತು ಘನತೆಯನ್ನು ಹೆಚ್ಚಿಸುವಲ್ಲಿ ಪಾತ್ರರಾಗಬೇಕು ಎಂದು ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ಪ್ರಕಟಣೆಯ ಮೂಲಕ ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.