
ಕೊಟ್ಟೂರು : ನಗರದಲ್ಲಿ ೧೮೪೧ನೇ ಮಧ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ನಡೆಯಿತು. ಈ ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ ರಾಜಣ್ಣ ಕೊರವಿರವರು ದಂಪತಿ ಸಮೇತ ಆಗಮಿಸಿ ಶಿಬಿರಾರ್ಥಿಗಳಿಗೆ ಮಧ್ಯವರ್ಜನದ ಶಿಬಿರದ ಮಹತ್ವವನ್ನು ತಿಳಿಸಿದರು. ಪಟ್ಟಣದ ಶ್ರೀಮರಳು ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಕೊಟ್ಡೂರು ಇದನ್ನು ಆಯೋಜನೆ ಮಾಡಿತ್ತು. ಯುವಕರು ಇತ್ತೀಚೆಗೆ ಮಧ್ಯಪಾನದಿಂದ ತಮ್ಮ ಜೀವನವನ್ನು ಜೀವವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಮಧ್ಯವರ್ಜನ ಮಾಡುವುದರಿಂದ ಹಣವೂ ಜೀವವೂ ಉಳಿಯುತ್ತದೆ ಎಂದರು. ಆ ಮೂಲಕ ಬದುಕನ್ನು ಸುಂದರಗೊಳಿಸಿಕೊಳ್ಳಬಹುದು ಎಂದರು.
ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀ ಮೈದೂರು ಶಿವಣ್ಣ, ಉಪಾಧ್ಯಕ್ಷರಾದ ಶ್ರೀ ರಾಂಪುರದ ವಿವೇಕಾನಂದ ಮತ್ತು ಸದಸ್ಯರು, ವಿಜಯನಗರ ಜಿಲ್ಲೆಯ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಶ್ರೀ ಕಾವಲಿ ಶಿವಪ್ಪ ನಾಯಕ, ನಿಕಟಪೂರ್ವ ಅಧ್ಯಕ್ಷರಾದ ಶ್ರೀ ನಟರಾಜ ಬಾದಾಮಿ, ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು, ಆರಕ್ಷಕ ಇಲಾಖೆಯ ವೃತ್ತ ನಿರೀಕ್ಷಕರಾದ ಶ್ರೀ ಸಿ. ವೆಂಕಟಸ್ವಾಮಿ, ತಾಲೂಕಿನ ಯೋಜನಾಧಿಕಾರಿ ನವೀನ್ ಕುಮಾರ್ ಎಚ್ ಡಿ, ಕಲ್ಯಾಣ ಮಂಟಪದ ಮಾಲೀಕರಾದ ಶ್ರೀ ಜಡಿತಲಿ ಕೊಟ್ರೇಶ್ ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭಕ್ಕೆ ಮುನ್ನ ಕುಟುಂಬ ದಿನವನ್ನು ಕೊಪ್ಪಳ ಪ್ರಾದೇಶಿಕ ವ್ಯಾಪ್ತಿಯ ಜನಜಾಗೃತಿ ವಿಭಾಗದ ಯೋಜನಾಧಿಕಾರಿ ಶ್ರೀ ನಾಗೇಶ್ ರವರು ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಪತ್ರಕರ್ತರು, ನವಜೀವನ ಸಮಿತಿಯ ಸದಸ್ಯರು, ಯೋಜನೆಯ ಕಾರ್ಯಕರ್ತರು, ಶಿಬಿರಾರ್ಥಿಗಳ ಕುಟುಂಬದವರು ಹಾಜರಿದ್ದರು.೦೮ ದಿನಗಳ ಶಿಬಿರವನ್ನು ಯಶಸ್ವಿಯಾಗಿ ಶಿಭಿರಾಧಿಕಾರಿ ಶ್ರೀ ಕುಮಾರ್, ಆರೋಗ್ಯ ಸಹಾಯಕಿ ಶ್ರೀಮತಿ ಪ್ರಸಿಲ್ಲಾಡಿಸೋಜರವರು ನಡೆಸಿಕೊಟ್ಟರು. ಈ ಶಿಬಿರದಲ್ಲಿ ೮೪ ಜನ ಪಾನಮುಕ್ತರು ನವ ಜೀವನಕ್ಕೆ ಕಾಲಿಸಿದರು.