ಹಗರಿಬೊಮ್ಮಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ “ಪೌತಿಖಾತೆ” ಆಂದೋಲನ

Loading

ಹಗರಿಬೊಮ್ಮನಹಳ್ಳಿ : ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರೈತರ ದಶಕಗಳ ಸಮಸ್ಯೆಯಾದ ಪೌತಿ, ಪೋಡಿ, ಪಿಂಚಣಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿ ರೈತರ ಸಮಸ್ಯೆಗಳನ್ನು ಪರಿಹಾರ ಮಾಡಲಾಗಿತ್ತು. ಈ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಚಿಂತಿಸಲಾಗಿದ್ದು, ಇದರಲ್ಲಿ ಪ್ರಮುಖವಾಗಿ ಸಮಸ್ಯೆಯಿರುವ ಪೌತಿಖಾತೆಗಳ ಸಮಸ್ಯೆಯನ್ನು ಇತ್ಯರ್ಥಪಡಿಸಲು ವಿಶೇಷ ಆಂದೋಲನ ಕೈಗೊಳ್ಳಲಾಗಿದೆ.

ಕ್ಷೇತ್ರದಲ್ಲಿ ಅಂದಾಜು 20 ಸಾವಿರಕ್ಕೂ ಹೆಚ್ಚು ಪೌತಿಖಾತೆಗಳು ಇರುವ ಬಗ್ಗೆ ಮಾಹಿತಿ ಇದೆ.

ಪೌತಿಖಾತೆಯಿಂದ ಕುಟುಂಬಸ್ಥರಿಗೆ ಜಮೀನು ಅಭಿವೃದ್ಧಿ ಪಡಿಸಲು ಸಾಲ ಸೌಲಭ್ಯಗಳನ್ನು ಪಡೆಯಲು, ಪ್ರಕೃತಿ ವಿಕೋಪದಿಂದ ಬೆಳೆ ಹಾನಿಯಾದಗ ಸರ್ಕಾರದಿಂದ ನೀಡಲಾಗುವ ವಿಮೆ/ಪರಿಹಾರಗಳನ್ನು ಪಡೆಯಲು, ಸಾರ್ವಜನಿಕ ಉದ್ದೇಶಕ್ಕೆ ಭೂ ಸ್ವಾಧೀನವಾದಗ ಪರಿಹಾರ ಪಡೆಯಲು ಅರ್ಹವಾಗುವುದಿಲ್ಲ. ಇದರಿಂದ ಬಡ ರೈತರಿಗೆ ತುಂಬಾ ತೊಂದರೆಯಾಗುತ್ತದೆ. ಬಹುತೇಕ ಪೌತಿಖಾತೆಗಳು 2-3 ತಲೆಮಾರುಗಳಿಂದ ದಾಖಲೆಗಳ ಕೊರತೆಯಿಂದ ಬಾಕಿ ಉಳಿದಿರುವ ಬಗ್ಗೆ ಮಾಹಿತಿಯಿದೆ.

ಸರ್ಕಾರದ ಸುತ್ತೋಲೆ ಸಂಖ್ಯೆ : ಕಂ ಇ 33 ಟಿ ಆರ್ ಎಂ 2019(ಇ ) ದಿನಾಂಕ 17/10/2020 ರಂದು ಹಾಗೂ ಸರ್ಕಾರದ ಸುತ್ತೋಲೆ ಸಂಖ್ಯೆ : ಕಂ ಇ 33 ಟಿ ಆರ್ ಎಂ 2019(ಇ ) ದಿನಾಂಕ : 2019 (ಇ )10/01/2024 ಹೊರಡಿಸಲಾದ ಸುತ್ತೋಲೆಯಲ್ಲಿ ದಾಖಲೆಗಳ ಕೊರತೆಯಿದ್ದಾಗ ಪೌತಿಖಾತೆಗಳನ್ನು ಯಾವ ಮಾನದಂಡದಲ್ಲಿ ಕ್ರಮವಹಿಸಬೇಕು ಎಂಬುದರ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಲಾಗಿದೆ.

  • ಸದರಿ ಸುತ್ತೋಲೆಗಳ ಆಧಾರದ ಮೇಲೆ ಆಗತ್ಯ ಕ್ರಮವಹಿಸುವಂತೆ ಮಾನ್ಯ ಜಿಲ್ಲಾಧಿಕಾರಿಗಳಿಗೆ ಕೋರಲಾಗಿತ್ತು. ಜಿಲ್ಲಾಧಿಕಾರಿಗಳ ಕಾರ್ಯಾಲಯದ ಪತ್ರ ಸಂಖ್ಯೆ ಸಂ/ಕಂ/ಆರ್.ಆರ್.ಟಿ/40/2024-25 ದಿನಾಂಕ 26.08.2024 ರಂತೆ ಪೌತಿ ಆಂದೋಲನ ಕೈಗೊಳ್ಳಲು ಎಲ್ಲ ತಹಶಿಲ್ದಾರವರಿಗೆ ಸೂಚನೆ ನೀಡಲಾಗಿದೆ.
  • ನಮ್ಮ ವಿಧಾನಸಭಾ ಕ್ಷೇತ್ರವನ್ನು ಪೌತಿಖಾತೆ ಮುಕ್ತ ಕ್ಷೇತ್ರವನ್ನಾಗಿಸಲು ಸಂಕಲ್ಪ ಮಾಡಿದ್ದು, ನಮ್ಮ ಕ್ಷೇತ್ರ ವ್ಯಾಪ್ತಿಯ ಎಲ್ಲ ಗೌರವಾನ್ವಿತ “ರೈತ” ಬಾಂದವರು ತಮ್ಮ ಗ್ರಾಮದ ಗ್ರಾಮ ಆಡಳಿತ ಅಧಿಕಾರಿಗಳಿಗೆ/ಗ್ರಾಮ ಸಹಾಯಕರಿಗೆ ತಮ್ಮ ಅರ್ಜಿ ಮತ್ತು ದಾಖಲೆಗಳನ್ನು ಸಲ್ಲಿಸಲು ಈ ಮೂಲಕ ರೈತರಲ್ಲಿ ಕೋರಲಾಗಿದೆ.

Leave a Reply

Your email address will not be published. Required fields are marked *