
ಹೊಸಪೇಟೆ : ವಿಜಯ ನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಬುಕ್ಕಸಾಗರ ಗ್ರಾಮ ಪಂಚಾಯತ್ ಗೆ ಸೇರಿದ ವೆಂಕಟಾಪುರ ಗ್ರಾಮದಲ್ಲಿ ನಿನ್ನೆ ಸುರಿದ ಭಾರಿ ಮಳೆಗೆ ಗ್ರಾಮದ ಗುಂಡಲೇ ಕೆರೆಯ ಭಾರಿ ನೀರು ಮನೆಗಳಿಗೆ ನುಗ್ಗಿದೆ ಇದರಿಂದಾಗಿ ಗ್ರಾಮಸ್ಥರಿಗೆ ಮತ್ತು ವಿದ್ಯಾರ್ಥಿಗಳಿಗೆ. ರೈತರಿಗೆ ತುಂಬಾ ತೊಂದರೆ ಉಂಟುಮಾಡಿದೆ.
ಹಾಗೂ ವೆಂಕಟಾಪುರ ದ ಶಿವ ದೇವಸ್ಥಾನ ಕ್ಕೆ ಮಳೆ ನೀರು ನುಗ್ಗಿ ದೇವಸ್ಥಾನ ಜಲಾವೃತಗೊಂಡಿದೆ. ಈ ವಿಷಯ ವಾಗಿ ಗ್ರಾಮಕ್ಕೆ ಗ್ರಾಮ ಪಂಚಾಯತ್ ನಾ ಪಿ ಡಿ ಒ. ಉಪಾಧ್ಯಕ್ಷರು ಸ್ಥಳೀಯ ಜನಪ್ರತಿನಿದಿನಗಳು ಮತ್ತು ತುಂಗಭದ್ರಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.