
ಹೊಸಪೇಟೆ : ದಿನಾಂಕ: 19-08-2024 ರಂದು ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆಯು
ರಾಜ್ಯಪಾಲರು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರ ವಿರುದ್ಧ ದುರುದ್ದೇಶದಿಂದ ಸರ್ಕಾರವನ್ನು ಅಸ್ಥಿರಗೋಳಿಸಲು ಪ್ರಾಸಿಕ್ಯೂಷನಗೆ ಅನುಮತಿ ನೀಡಿದ್ದಾರೆ ಎಂದು ಖಂಡಿಸಿ, ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ ವಿಜಯನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನಾ ಮೆರವಣಿಗೆ.

ಸುದ್ದಿಗಾರರೊಂದಿಗೆ ಮಾನ್ಯ ಬಳ್ಳಾರಿ – ವಿಜಯ ನಗರ ಸಂಸದರಾದ ಮಾನ್ಯ ಈ ತುಕಾರಾಮ್ ಅವರು ಮಾತನಾಡಿ ಕರ್ನಾಟಕ ದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರದ ಬೆಳವಣಿಗೆ ಕಂಡು ಕೇಂದ್ರ ಬಿಜೆಪಿ ಸರ್ಕಾರ ದ ಹಣತಿಯಂತೆ ರಾಜ್ಯಪಾಲರು ಮುಡಾ ಹಗರಣ ವನ್ನು ಸಿ ಎಂ ಸಿದ್ದರಾಮಯ್ಯ ಅವರ ಮೇಲೆ ಪ್ರಾಸಿಕ್ಯೂಷನಗೆ ಅನುಮತಿ ನೀಡುವ ಮೂಲಕ ಮಾನ್ಯ ರಾಜ್ಯಪಾಲರು ದುರುದ್ದೇಶದಿಂದ ಸರ್ಕಾರವನ್ನು ಅಸ್ಥಿರಗೋಳಿಸಲು ವ್ಯವಸ್ಥೆ ಮಾಡುತ್ತಿದ್ದಾರೆ ಆದರೆ ನಮ್ಮ ಸರ್ಕಾರ ಸುಭದ್ರವಾಗಿದೆ. ಇದರಲ್ಲಿ ರಾಜ್ಯಪಾಲರು ವಿಫಲರಾಗುತ್ತಾರೆ ಮತ್ತು
ದೇವರಾಜ್ ಅರಸು ನಂತರದಲ್ಲಿ ಎರಡನೇ ದೇವರಾಜ್ ಅರಸಾಗಿ ಸುಭದ್ರ ನಾಯಕತ್ವದಲ್ಲಿ ಮುಖ್ಯಮಂತ್ರಿಗಳಾದ ಸಿಎಂ ಸಿದ್ದರಾಮಯ್ಯನವರು ಸರ್ಕಾರ ನಡೆಸುತ್ತಿದ್ದಾರೆ.ಇದು ಆರ್ ಎಸ್ ಎಸ್ ಬಿಜೆಪಿಯವರಿಗೆ ಇದು ನುಂಗಲಾರದ ತುತ್ತಾಗಿದೆ. ಬಿಜೆಪಿಯರಿಗೆ ನಮ್ಮ ಸರ್ಕಾರದ ಐದು ಗ್ಯಾರಂಟಿಗಳಿಂದ ಬಿಜೆಪಿಯವರಿಗೆ ಸಹಿಸೋದಕ್ಕೆ ಆಗುತ್ತಿಲ್ಲ ಎಂದು ಈ ಪ್ರತಿಭಟನೆಯು ಮುಂದಿನ ದಿನಗಳಲ್ಲಿ ಬಿಜೆಪಿಗೆ ಎಚ್ಚರಿಕೆ ಯಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಪ್ರತಿಭಟನಾ ಮೆರವಣಿಯ ಮಾರ್ಗ:ಹೊಸಪೇಟೆ ನಗರದ ಮಹಾತ್ಮ ಗಾಂಧೀಜಿ ರವರ ವೃತ್ತದಿಂದ ಪ್ರಾರಂಭ- ಪುಣ್ಯಮೂರ್ತಿ ವೃತ್ತ – ಬಸ್ ನಿಲ್ದಾಣ ಮುಂಭಾಗದಿಂದ – ಡಾ.ಪುನೀತ್ ರಾಜಕುಮಾರ್ ವೃತ್ತ-ತಾಲೂಕು ಕಚೇರಿ-ಡಾ: ಬಿ. ಆರ್. ಅಂಬೇಡ್ಕರ್ (ಜೈ ಭೀಮ್) ವೃತ್ತ. ವರೆಗೆ ಸಾಗಿತ್ತು.
ಈ ಪ್ರತಿಭಟನೆಯಲ್ಲಿ ಶ್ರೀ ಮತಿ ರಾಣಿ ಸಂಯುಕ್ತ ಶ್ರೀ ಮತಿ ಕವಿತಾ ಈಶ್ವರ್ ಸಿಂಗ್ . ಮಾಜಿ ಮಂತ್ರಿ ಶ್ರೀ ಪಿ ಟಿ ಪರಮೇಶ್ವರ ನಾಯ್ಕ್. ವಿಜಯ ನಗರ ಕಾಂಗ್ರೆಸ್ ನಾ ಜಿಲ್ಲಾಧ್ಯಕ್ಷರಾದ ಶ್ರೀ ಸಿರಾಜ್ ಶೇಖ್. ಹೂಡ ಅಧ್ಯಕ್ಷರಾದ ಶ್ರೀ ಇಮಾಮ್ ನಿಯಾಜಿ ಮತ್ತು ಮಾನ್ಯ ಬಳ್ಳಾರಿ – ವಿಜಯ ನಗರ ಸಂಸದರಾದ ಮಾನ್ಯ ಈ ತುಕಾರಾಮ್ ಅವರು ಉಪಸ್ಥಿತರಿದ್ದರು ಹಾಗೂ ಪಕ್ಷದ ಕಾರ್ಯಕರ್ತರು.ಮುಖಂಡರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.
ಹಾಗೆಯೇ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನಗೆ ಅನುಮತಿ ನೀಡಿರುವ ರಾಜ್ಯಪಾಲರ ಪಕ್ಷಪಾತ ಮತ್ತು ಅಸಂವಿಧಾನಿಕ ನಡೆಯನ್ನು ಖಂಡಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಶ್ರೀ ಡಿ. ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ವಿಜಯ ನಗರ ಕ್ಷೇತ್ರದ ಶಾಸಕರಾದ ಶೀ ಹೆಚ್ ಆರ್ ಗವಿಯಪ್ಪ ನವರು ಪಾಲ್ಗೊಂಡಿದ್ದರು.