ಕೂಡ್ಲಿಗಿ ಪಟ್ಟಣದ ಅಧ್ಯಕ್ಷರಾಗಿ ಕ್ಷಣದಲ್ಲಿ ಸಂಸದರಾದ ಈ ತುಕಾರಾಂ, ರವರಿಗೆ ಪಟ್ಟಣದ ಅಭಿವೃದ್ಧಿಗೆ ಬೇಡಿಕೆಯನ್ನು ಇಟ್ಟ ನೂತನ ಅಧ್ಯಕ್ಷರು ಕಾವಲಿ ಶಿವಪ್ಪ ನಾಯಕ

Loading

ಕೂಡ್ಲಿಗಿ : ಪಟ್ಟಣದ ಎರಡನೇ ಅವಧಿಗೆ ಅಧ್ಯಕ್ಷರ ಸ್ಥಾನಕ್ಕೆ ಸಾಮಾನ್ಯ ಸ್ಥಾನ ಇದ್ದುಈ ಸ್ಥಾನಕ್ಕೆ ಪರಿಶಿಷ್ಟ ಪಂಗಡದ ಕಾಂಗ್ರೆಸ್ ನ ಸದಸ್ಯರಾದ ಕಾವಲಿ ಶಿವಪ್ಪ ನಾಯಕ ರವರು ಅವಿರೋಧವಾಗಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು.

ಚುನಾವಣಾ ಪ್ರಕಟಣೆಯನ್ನು ತಾಲೂಕು ತಹಶೀಲ್ದಾರ್ರಾದ ಎಂ. ರೇಣುಕಾ ರವರು ಮಾಧ್ಯಮದ ಮೂಲಕ ಪ್ರಕಟಣೆ ನೀಡಿದ ನಂತರ ಮಾನ್ಯ ಶಾಸಕರಾದ ಎನ್‌.ಟಿ ಶ್ರೀನಿವಾಸ್ ಹಾಗೂ ವಿಜಯನಗರ ಹಾಗೂ ಅಖಂಡ ಬಳ್ಳಾರಿ ಜಿಲ್ಲೆಯ ಸಂಸದರಾದ ಇ ತುಕಾರಾಂ ರವರು ಹಾಜರಿದ್ದ ಸಂದರ್ಭದಲ್ಲಿ ನೂತನ ಪಟ್ಟಣ ಪಂಚಾಯ್ತಿ ಅಧ್ಯಕ್ಷರಾಗಿ ಆಯ್ಕೆಯಾದಂತಹ ಸಂದರ್ಭದಲ್ಲಿ ನೂತನ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾದ ಕಾವಲಿ ಶಿವಪ್ಪ ನಾಯಕರವರು ಮಾನ್ಯ ಸಂಸದರಿಗೆ ಪಟ್ಟಣದ ಪಟ್ಟಣ ಪಂಚಾಯತಿಯ ಎಲ್ಲಾ ಸದಸ್ಯರ ಪರವಾಗಿ ಹಾಗೂ

ಶಾಸಕರ ಪರವಾಗಿ ಅಭಿವೃದ್ಧಿಯ ದೃಷ್ಟಿಯನ್ನು ಇಟ್ಟುಕೊಂಡು ಪ್ರಮುಖ ರಸ್ತೆಗಳ ಅಭಿವೃದ್ಧಿಯ ವಿಷಯವನ್ನು ಅರಿತು ಉದ್ದೇಶಿಸಿ ಬೇಡಿಕೆಗಳನ್ನಿಟ್ಟು ಮಾತನಾಡಿದರು. ಹಾಗೂ ಈ ಸಂದರ್ಭದಲ್ಲಿ ಸಂಸದರಾದ ಈ ತುಕಾರಾಮರವರಿಗೂ ಹಾಗೂ ಎನ್. ಟಿ ಶ್ರೀನಿವಾಸ್ ಶಾಸಕರು ರವರಿಗೂ ಹಾಗೂ ಎಲ್ಲಾ ಕಾಂಗ್ರೆಸ್ಸಿನ ಎಲ್ಲಾ ಮುಖಂಡರಿಗೂ ಹಾಗೂ ಪಟ್ಟಣ ಪಂಚಾಯಿತಿಯ ಸರ್ವ ಸದಸ್ಯರಿಗೂ ಅಭಿಮಾನಿಗಳಿಗೂ ಅಭಿನಂದನೆಗಳು ತಿಳಿಸಿದರು

Leave a Reply

Your email address will not be published. Required fields are marked *