
ಕೂಡ್ಲಿಗಿ:ತಾಲೂಕಿನ ಕೂಡ್ಲಿಗಿ ಪಟ್ಟಣದ ರಾಜೀವ ಗಾಂಧಿ ನಗರದ ಗ್ರಾಮವಾಸಿಗಳು, ಹಾಗೂ ದಲಿತ ಹಿರಿಯ ಮಹಿಳಾ ಚೇತನರು. ದಲಿತರ ಪರ ಹೋರಾಟಗಾರರು, ಹಾಗೂ DSS ತಾಲೂಕು ಘಟಕದ ಅಧ್ಯಕ್ಷರು ಹಾಗೂ ಮುಖಂಡರಾದ ಮಾಜಿ ಸೈನಿಕ ಎಚ್ ರಮೇಶ ರವರ ತಾಯಿ. ಶ್ರೀಮತಿ ಆನೆಪ್ಪರ ಶಾರದಮ್ಮ (74), ಆಗಸ್ಟ್ 1ರಂದು ಬೆಳಿಗ್ಗೆ11 ಗಂಟೆಗೆ ರಾಜೀವ್ ಗಾಂಧಿ ನಗರದ ಸ್ವ ಗೃಹದಲ್ಲಿ ನಿಧನರಾಗಿದ್ದಾರೆ.
ಅವರು ಬಹು ದಿನಗಳಿಂದ, ವಯೋ ಸಹಜ ಅನಾರೋಗ್ಯದಿಂದ ಬಳಲುತಿದ್ದರು. ಮೃತರು ಮಕ್ಕಳು ಮೊಮ್ಮಕ್ಕಳು ಸೊಸೆಯಂದಿರು ಸೇರಿದಂತೆ, ತುಂಬು ಕುಟುಂಬವನ್ನು ಅಪಾರ ಬಂಧು ಬಳಗವನ್ನು ಹೊಂದಿದವರಾಗಿದ್ದರು. *ಅಂತ್ಯಕ್ರಿಯೆ*-ಆಗಸ್ಟ್ 2-8-2024 ರ ಶುಕ್ರವಾರ ರಂದು 10 ಘಂಟೆಗೆ ಪಟ್ಟಣದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು.
ಸಂತಾಪ:- ಕೂಡ್ಲಿಗಿ ತಾಲೂಕಿನ ದಲಿತ ಸಮುದಾಯದವರು, ಹಾಗೂ ವಿವಿದ ಸಮುದಾಯದವರು ಸಮಸ್ತ ಗ್ರಾಮಸ್ಥರು. ದಲಿತ ಸಮುದಾಯದವರು ಸೇರಿದಂತೆ, ದಲಿತ ಸಂಘರ್ಷ ಸಮಿತಿ ಸೇರಿದಂತೆ ದಲಿತ ಪರ ಸಂಘಟನೆಗಳು,ಮಾದಿಗ ದಂಡೋರ ಸಂಘಟನೆಯವರು, ಪತ್ರಕರ್ತರು ರೈತರು ಕಾರ್ಮಿಕರು ಮಹಿಳೆಯರು ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು. ದಲಿತ ಸಂಘರ್ಷ ಸಮಿತಿ ವಿವಿದ ಗ್ರಾಮ ಘಟಕಗಳ, ತಾಲೂಕು ಜಿಲ್ಲಾ ರಾಜ್ಯ ಘಟಕಗಳ ಪದಾಧಿಕಾರಿಗಳು ಸರ್ವ ಸದಸ್ಯರು.
ಶಾಸಕರು ಮೊದಲ್ಗೊಂಡು ತಾಲೂಕಿನ ವಿವಿದ ಜನಪ್ರತಿನಿಧಿಗಳು, ಹಾಗೂ ಹೋರಾಟಗಾರರು ಗಣ್ಯರು. ಕೂಡ್ಲಿಗಿ ಪಟ್ಟಣದ ಪ್ರಮುಖ ನಾಗರೀಕರು, ಕೂಡ್ಲಿಗಿ ಪಟ್ಟಣದ ನೆರೆ ಹೊರೆ ಗ್ರಾಮಸ್ಥರು. ಮೃತ ಶ್ರೀಮತಿ ಆನೆಪ್ಪರ ಶಾರದಮ್ಮ ರವರ ಅಗಲಿಕೆಗೆ, ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.