ಶ್ರೀ ವೀರ ಕಂಪಿಲರಾಯರ ವೃತ್ತ ಮತ್ತು ಪುತ್ಥಳಿ ನಿರ್ಮಿಸಲು ಮನವಿ

Loading

ಕಮಲಾಪುರ : ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಪ್ರೇರಣೆ ನಿಡಿದ ಮತ್ತು ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೂ ಮುಂಚೆ ಹಂಪಿ ಪ್ರದೇಶವನ್ನು ಆಳ್ವಿಕೆ ಹೇಮಕೂಟ ಪರ್ವತದಲ್ಲಿ ಶಿವ ದೇವಾಲಯಗಳನ್ನು ನಿರ್ಮಿಸಿ ನಾಡಿಗೆ ತಮ್ಮದೇ ಕೊಡುಗೆಗಳನ್ನು ನೀಡಿರುವ ಶ್ರೀ ವೀರ ಕಂಪಿಲರಾಯರ ಹೆಸರನ್ನು ಮುಂದಿನ ಪೀಳಿಗೆಗೆ ತಿಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಆದ್ದರಿಂದ ಶ್ರೀ ವೀರ ಕಂಪಿಲರಾಯರ ಹೆಸರಿನಲ್ಲಿ ಕಮಲಾಪುರ ಮತ್ತು ಕಂಪ್ಲಿ ರಾಜ್ಯ ಹೆದ್ದಾರಿಯಲ್ಲಿ ಬರುವ ರಾಮನಗರದಲ್ಲಿ ಅಂದರೆ ವಿಜಯವಿಠಲ ದೇವಸ್ಥಾನಕ್ಕೆ ತೆರಳುವ ತಿರುವಿನಲ್ಲಿ ಶ್ರೀ ವೀರ ಕಂಪಿಲರಾಯರ ವೃತ್ತ ಮತ್ತು ಪುತ್ಥಳಿ ನಿರ್ಮಿಸಲು
ಪುರಾತತ್ವ ಸಂರಕ್ಷಣಾಧಿಕಾರಿಗಳು ಭಾರತೀಯ ಪುರಾತತ್ವ ಸರ್ವೇ ಇಲಾಖೆ (ಎ.ಎಸ್.ಐ)ಗೆ ಕಾರ್ಯಾಲಯದಲ್ಲಿ ಶ್ರೀ ಗಂಡುಗಲಿ ಕುಮಾರರಾಮ ಇತಿಹಾಸ ಸಂರಕ್ಷಣಾ ಸಮಿತಿ ವತಿಯಿಂದ ಮನವಿ ಪತ್ರವನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಶ್ರೀ ಗಂಡುಗಲಿ ಕುಮಾರರಾಮ ಇತಿಹಾಸ ಸಂರಕ್ಷಣಾ ಸಮಿತಿಯ ರಾಜ್ಯ ಉಪಾಧ್ಯಕ್ಷರು ಹೆಚ್ ಹುಲುಗಪ್ಪ ಹುಲಿಯ. ಮತ್ತು ಕರ್ನಾಟಕ ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಸಂಘದ
ಪ್ರಧಾನ ಕಾರ್ಯದರ್ಶಿ ವಿ.ವಿರುಪಾಕ್ಷಿ.
ಗುರುನಾಥ ಕಮಲಾಪುರ
ಮಲ್ಲಿಕಾರ್ಜುನ ಹಂಪಿ ಸೋಮು ಕಮಲಾಪುರ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *