ಅಡಿ ಕೀರ್ತಿಕೆ ವಾರ್ಷಿಕೋತ್ಸವ

Loading

ಹೊಸಪೇಟೆ : ತಾಲೂಕಿನ ಹಂಪಿ ಸಮೀಪದ ಕಡ್ಡಿರಾಂಪುರ ಗ್ರಾಮದಲ್ಲಿ ಸೋಮವಾರ ಮುರುಗನ್ ದೇವಸ್ಥಾನದಲ್ಲಿ ಅಡಿ ಕೀರ್ತಿಕೆಯ 51ನೇ ವಾರ್ಷಿಕೋತ್ಸವ ಕಾರ್ಯಕ್ರಮ ಭಕ್ತಿಯಿಂದ ಮತ್ತು ವೈಭವದಿಂದ ನಡೆಯಿತು.

ಬೆಳಗ್ಗೆ ದೇವರಿಗೆ ಸುಂದರ ಅಂಲಕಾರ, ಜೊತೆಗೆ ಕಾವಡಿಗಳು, ಹೂವಿನ ಕಾವಡಿಗಳು, ಹಾಲಿನ ಕಾವಡಿಗಳು, ಗುಂಡು ಅಲಗು, ಮತ್ತು ಸುಬ್ರಮಣ್ಯ ‘ಸ್ವಾಮಿ ಶೂಲಾಯುಧವನ್ನು ಹೊತ್ತು ಸ್ವಾಮಿಯ ದೇವಸ್ಥಾನಕ್ಕೆ ತಲುಪಿ ದೇವರಿಗೆ ಅಗಲುಗಳನ್ನು ಪ್ರತಿಷ್ಠಾಪಿಸಿದರು.

ಭಕ್ತರು ಬೆನ್ನಿಗೆ ಕಬ್ಬಿಣದ ಸರಳು ಚುಚ್ಚಿ ತಮ್ಮ ಹರಕೆ ತೀರಿಸಿದರು. ಬೆನ್ನಿಗೆ ಮತ್ತು ಹೊಟ್ಟೆಗೆ ಮತ್ತು ಬಾಯಿಗೆ ಕಬ್ಬಿಣದ ಸರಳುಗಳನ್ನು ಚುಚ್ಚಿಸಿಕೊಂಡು ಅಡಿಕೀರ್ತಿ ಎಂಬ ಹೆಸರಲ್ಲಿ ಹರಕೆ ತೀರಿಸುತ್ತಾರೆ. ಇನ್ನೂ ಕೆಲವರು ತಮ್ಮ ಬೆನ್ನಿಗೆ ಕಬ್ಬಿಣದ ಸರಳು ಹಾಕಿಕೊಂಡು ಕಲ್ಲು, ಗುಂಡನ್ನು ಸುಮಾರು ದೂರು ಎಳೆಯುತ್ತಾ ತಮ್ಮ ಹರಿಕ ತೀರಿಸುತ್ತಿದ್ದರು.

ಹಂಪಿಗೆ ಹೋಗುವ ಮಾರ್ಗದಲ್ಲಿ ಬರುವ ತುರ್ತು ಕಾಲುವೆಯಿಂದ ಕಡ್ಡಿರಾಂಪುರ ಗ್ರಾಮದವ ಸುಬ್ರಮಣ್ಯ ದೇವಸ್ಥಾನದವರೆಗೆ ಹರಿಕೆ ತೀರಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನ ಈಗಿನ ವ್ಯವಸ್ಥಾಪಕರಾದ ಇ ಶಂಕರ ವೇಲು.ಇ ಸೇಲ್ವರಾಜ್ ಹಾಗೂ ವೆಂಕಟೇಶ್. ಮುರುಗನ್ ಮತ್ತು ಗ್ರಾಮದ ಹಿರಿಯ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *