ಸರ್ಕಾರಿ ಶಾಲೆ ಎಂದರೆ ಆಟ ಪಾಠಕ್ಕೆ ಮುಳುಗದೇ ಜೀವನದ ಅಸಲಿ ಪಾಠವನ್ನು ಪ್ರಾಯೋಗಿಕವಾಗಿ ಕಳಿಸಿದ ಹೊಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 

Loading

ಹೊಸಪೇಟೆ : ಶನಿವಾರ ಏಳನೇ ತರಗತಿ ಮಕ್ಕಳು ಎಂದಿನಂತೆಯೇ ತರಗತಿಯಲ್ಲಿ ಕುಳಿತು ಪಾಠ ಆಲಿಸದೇ ಗದ್ದೆಗೆ ಹೋಗಿ ಭತ್ತದ ನಾಟಿ ಮಾಡಿದರು. ಬರೀ ಪಠ್ಯದಲ್ಲೇ   ಮುಳುಗದೇ ಪ್ರಾಯೋಗಿಕವಾಗಿ ಕಲಿಸಬೇಕೆಂಬ ಶಿಕ್ಷಕರ ಆಶಯದಂತೆ ಸ್ವತಃ ಗದ್ದೆಗೆ ತೆರಳಿ ಭತ್ತ ನಾಟಿ ಮಾಡುವ ಮೂಲಕ ಸೈ ಎನಿಸಿಕೊಂಡರು.

ಇದು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹೊಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿಯ 40 ಬಾಲಕ, ಬಾಲಕಿಯರು ಭತ್ತದ ನಾಟಿ ಮಾಡಿದರು. ಈ ಪೈಕಿ  ಬಾಲಕಿಯರು ಹಾಗೂ  ಬಾಲಕರು ಸೇರಿ 40 ಮಕ್ಕಳು ಇದ್ದರು, ಹುಸೂರು ಬಳಿಯೇ ಇರುವ  ರೈತ ಸುದರ್ಶನ್ ಅವರ ಒಂದುವರೆ ಎಕರೆಯಲ್ಲಿ ಶಾಲಾ ಮಕ್ಕಳೇ ಭತ್ತದ ನಾಟಿ ಮಾಡಿದರು.

ಲೇಖಕಿ ವಿ.ಗಾಯತ್ರಿ ಬರೆದತುಂಗಾಕಾದಂಬರಿಯಿಂದ ‘ಸೀನ ಸೆಟ್ಟರು ನಮ್ಮ ಟೀಚರು’ ಎಂಬ ಪಾಠವನ್ನು ಏಳನೇ ತರಗತಿಗೆ ಅಳವಡಿಕೆ ಮಾಡಲಾಗಿದೆ. ಇದು ಜಪಾನ ನ ಹಳ್ಳಿಯೊಂದರ ಕಥೆ ಇದ್ದು ಈ ಪಾಠದಂತೇ ಹೊಸೂರು ಶಾಲೆಯ ಶಿಕ್ಷಕರು

ಮಕ್ಕಳಿಗೆ ಬರೀ ಪಠ್ಯದಲ್ಲೇ ಉಳಿಸದೇ ಅವರಲ್ಲೂ ಕೌಶಲ್ಯ ಮೈಗೂಡಿಸಲು ರೈತರು ಹೇಗೆ ಭತ್ತ ನಾಟಿ ಮಾಡುತ್ತಾರೆ? ಭತ್ತವನ್ನು ಯಾವ ರೀತಿ ಬೆಳೆಸುತ್ತಾರೆ ಎಂಬುದನ್ನು ತೋರಿಸಲು ಮಕ್ಕಳನ್ನು ಗದ್ದೆಗೆ ಕರೆದುಕೊಂಡು ಹೋಗಿ, ಮಕ್ಕಳಿಂದಲೇ ಮಡಿಯಲ್ಲಿದ್ದ ಸಸಿ ಕಿತ್ತು, ಸಿವುಡು ಕಟ್ಟಿ,

ಹದ ಮಾಡಿದ ಗದ್ದೆಯಲ್ಲಿ ನಾಟಿ ಮಾಡಿಸಿದ್ದಾರೆ. ನಾಟಿ ಮಾಡಿದ ಬಗೆ ಹೇಗೆ?

ಶಾಲೆಯಲ್ಲಿ ಪ್ರಾರ್ಥನೆ ಮುಗಿದೊಡನೆ, ತರಗತಿಯಲ್ಲಿ ಬ್ಯಾಗ್ ಇಟ್ಟು, ಹೊಲದತ್ತ ಬಂದ ಮಕ್ಕಳು ಮೊದಲಿಗೆ ಊರಿನ ರೈತರಾದ ಸುದರ್ಶನ್ ಅವರನ್ನು ಭೇಟಿ ಮಾಡಿ ಬಳಿಕ ಮಡಿಯಲ್ಲಿದ್ದ ಸಸಿ ಕಿತ್ತು, ಸಿವುಡು ಕಟ್ಟಿದರು. ಬಳಿಕ ಗದ್ದೆಗೆ ಇಳಿದು ನಾಟಿ ಮಾಡಿದರು. ಗದ್ದೆಯಲ್ಲಿ ನೀರು ಇದ್ದರೂ ಅಂಜದೇ ಮಕ್ಕಳು, ಥೇಟ್ ಕೃಷಿ ಕೂಲಿಕಾರ್ಮಿಕರಂತೇ ಭತ್ತ ನಾಟಿ ಮಾಡಿದರು .ಶಾಲಾಮಕ್ಕಳಂತೂ ಉತ್ಸಾಹದಿಂದ ಭತ್ತ ನಾಟಿ ಮಾಡಿದರು. ಗದ್ದೆಯಲ್ಲಿ ಓಡಾಡಿ ಖುಷಿ ಪಟ್ಟರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ನ ಈ ಒ ಅವರು ಸಹಾ ಭಾಗಿಯಾದರು. ಮತ್ತು ಹೊಸೂರು ಗ್ರಾಮ ಪಂಚಾಯತ್ ನ ಅಧ್ಯಕ್ಷರು ಆದ ಶ್ರೀಮತಿ ಜೆ ಪದ್ಮ ಮುಖ್ಯ ಗುರುಗಳಾದ ಮಂಜಪ್ಪ ಆರ್. ಶಿಕ್ಷಕರಾದ  ಗುರುರಾಜ್. ಪ್ರವೀಣ್. ಶ್ವೇತಾ . ಸೌಜನ್ಯ  ಉಪಸ್ಥಿತರಿದ್ದರು

Leave a Reply

Your email address will not be published. Required fields are marked *