ಗ್ರಾಮ ಆಡಳಿತ ಅಧಿಕಾರಿಗಳಿಂದ ಹಬ್ಬದಂತೆ ನಡೆದ ಕಂದಾಯ ದಿನಾಚರಣೆ

Loading

ಹೊಸಪೇಟೆ (ವಿಜಯನಗರ ಜಿಲ್ಲೆ) : ಹೊಸಪೇಟೆಯ ಒಳಾಂಗಣ ಕ್ರೀಡಾಂಗಣದಲ್ಲಿ ಜುಲೈ 20ರಂದು ಹಬ್ಬದ ಸಂಭ್ರಮ ಕಂಡು ಬಂದಿತು.

ನಿತ್ಯ ಒಂದಿಲ್ಲೊAದು ಕಡತ, ವಿಷಯಗಳಲ್ಲಿ ಮುಳುಗಿರುತ್ತಿದ್ದ ವಿಜಯನಗರ ಜಿಲ್ಲೆಯ ಎಲ್ಲ ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳು ಒಗ್ಗೂಡಿ ಕಂದಾಯ ದಿನಾಚರಣೆಯನ್ನು ಹಬ್ಬದಂತೆ ಆಚರಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಗ್ರಾಮ ಆಡಳಿತ ಅಧಿಕಾರಿಗಳ ಪೈಕಿ ಕೆಲವು ಮಹಿಳಾ ಅಧಿಕಾರಿಗಳು ದೇಶಿ ಶೈಲಿಯ ಸೀರೆ ಧರಿಸಿ ಆಗಮಿಸಿದ್ದರು. ಜುಬ್ಬಾ, ಲುಂಗಿ ತೊಟ್ಟು ಕೆಲವು ಅಧಿಕಾರಿಗಳು ಗಮನ ಸೆಳೆದರು. ತಂದೆ, ತಾಯಿ, ಸಹೋದರ ಸಹೋದರಿ ಮಕ್ಕಳೊಂದಿಗೆ ಕಾರ್ಯಕ್ರಮ ಆಗಮಿಸಿ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು.

ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆ ಮಹಿಳಾ ಮತ್ತು ಪುರುಷ ಅಧಿಕಾರಿಗಳು ಸಾಲಾಗಿ ನಿಂತು ಪುಷ್ಪ ನೀಡುವ ಮೂಲಕ ಅವರನ್ನು ಆತ್ಮೀಯವಾಗಿ ಬರ ಮಾಡಿಕೊಂಡರು.

ನಾಡಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮವು ಸತತ ಎರಡೂವರೆ ಗಂಟೆಗೂ ಹೆಚ್ಚು ಕಾಲ ವಿಭಿನ್ನವಾಗಿ ನಡೆಯಿತು. ಕಾರ್ಯಕ್ರಮದ ಬಳಿಕ ಪಾಯಸ, ಪೂರಿ, ಚಿತ್ತಾನ್ನ ಸೇರಿದಂತೆ ಹಲವು ಬಗೆಯ ಊಟದ ವ್ಯವಸ್ಥೆ ಮಾಡಲಾಗಿತ್ತು.

ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ ದಾವಣಗೆರೆ, ಜಿಲ್ಲಾ ಘಟಕ ವಿಜಯನಗರ, ಕಂದಾಯ ನೌಕರರು ಹಾಗೂ ಗ್ರಾಮ ಸಹಾಯಕರ ಸಹಯೋಗದೊಂದಿಗೆ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಜುಲೈ 20ರಂದು ನಡೆದ ಕಂದಾಯ ದಿನಾಚರಣೆ, ಪ್ರತಿಭಾ ಪುರಸ್ಕಾರ ಹಾಗೂ ಕಾರ್ಯಾಗಾರಕ್ಕೆ ಜಿಲ್ಲಾಧಿಕಾರಿಗಳು ದೀಪ ಬೆಳಗಿಸುವ ಮೂಲಕ ವಿದ್ಯುಕ್ತ ಚಾಲನೆ ನೀಡಿದರು. ಈ ವೇಳೆ ಜಿಲ್ಲಾಧಿಕಾರಿಗಳು ಮಾತನಾಡಿ, ಗ್ರಾಮಮಟ್ಟದಲ್ಲಿ ಕಾರ್ಯನಿರ್ವಹಿಸುವ ಗ್ರಾಮ ಆಡಳಿತ ಅಧಿಕಾರಿಗಳು ತಾಳ್ಮೆ, ಸಹನೆಯಿಂದ ಇರಬೇಕು. ಜನರ ನೋವು ನಲಿವಿಗೆ ಸ್ಪಂದನೆ ನೀಡಬೇಕು. ಮುಖ್ಯವಾಗಿ ಸಾರ್ವಜನಿಕರು ನಮ್ಮನ್ನು ನೋಡುವ ದೃಷ್ಟಿಕೋನ ಸರಿಯಾಗಿರುವಂತೆ ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ಮಾಡಿದರು.

ಅಧಿಕಾರಿಗಳು ಕೆಲಸದ ಜೊತೆಗೆ ಆರೋಗ್ಯದ ಕಡೆಗೆ ಗಮನ ಕೊಡಬೇಕು. ಅತಿಯಾದ ಒತ್ತಡದಲ್ಲಿ ಕೆಲಸ ಮಾಡಬಾರದು. ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಬೇಕು. ಬರೀ ಕಚೇರಿ, ಕೆಲಸ ಎಂದು ಕುಟುಂಬವನ್ನು ನಿರ್ಲಕ್ಷö್ಯ ಮಾಡಬಾರದು. ತಂದೆ, ತಾಯಿ, ಸಹೋದರ, ಸಹೋದರಿ, ಹೆಂಡತಿ ಮಕ್ಕಳಿಗು ಸಹ ಸಮಯ ನೀಡಬೇಕು ಎಂದರು.

ಮಕ್ಕಳಿಗೆ ನಾವು ಎಟಿಎಂ ಆಗಬಾರದು. ಅವರಿಗೆ ಒಳ್ಳೆಯ ಸಂಸ್ಕಾರ ನೀಡಬೇಕು. ಮಕ್ಕಳು ಪಾಲಕರಿಂದ ಬರೀ ಹಣವನ್ನೇ ನಿರೀಕ್ಷೆ ಮಾಡುವುದಿಲ್ಲ. ಬದಲಾಗಿ ಅವರು ನಮ್ಮ ನಡೆ ನುಡಿಯನ್ನು ಗಮನಿಸುತ್ತಾರೆ. ಅವರಿಗೆ ಪ್ರೀತಿ, ಉತ್ತಮ ಮಾರ್ಗದರ್ಶನ ಕೊಡುವುದು ಪಾಲಕರ ಜವಾಬ್ದಾರಿಯಾಗಿರುತ್ತದೆ ಎಂದು ತಿಳಿಸಿದರು.

ಅಧಿಕಾರಿಗಳ ಕಾರ್ಯವೈಖರಿಗೆ ಮೆಚ್ಚುಗೆ: ಜಿಲ್ಲೆಯಲ್ಲಿ ಕಂದಾಯ ಇಲಾಖೆಯಿಂದ ಉತ್ತಮ ಕಾರ್ಯಗಳಾಗುತ್ತಿವೆ. ಸರ್ವೇ ಸೇರಿದಂತೆ ಎಲ್ಲಾ ಕಾರ್ಯಗಳಲ್ಲಿ ವಿಜಯನಗರ ಜಿಲ್ಲೆಯ ಪ್ರಗತಿ ಉತ್ತಮವಾಗಿದ್ದು ಈ ಶ್ರೇಯಸ್ಸು ಜಿಲ್ಲೆಯ ಎಲ್ಲ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಇನ್ನೀತರ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸಲ್ಲುತ್ತದೆ ಎಂದು ತಿಳಿಸಿದರು.

ಸಂಘದ ಕಾರ್ಯಕ್ಕೆ ಮೆಚ್ಚುಗೆ: ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ವಿಜಯನಗರ ಜಿಲ್ಲಾ ಘಟಕದ ಕೋಶಾಧ್ಯಕ್ಷ ವೈ ಬಸವರಾಜ, ಗೌರವಾಧ್ಯಕ್ಷ ಶಿವಕುಮಾರ ಟಿ.ಜಿ.ಎಂ., ಜಿಲ್ಲಾಧ್ಯಕ್ಷ ಯಂಕಾರೆಡ್ಡಿ ಕೆ., ಉಪಾಧ್ಯಕ್ಷರಾದ ಶ್ಯಾಮಲಾಕುಮಾರಿ ಕೆ., ವೀರೇಶ ಟಿ., ಸುಧಾ ಜೈನರ್, ಪ್ರಧಾನ ಕಾರ್ಯದರ್ಶಿ ಗುರುಬಸವರಾಜ ಸಿ., ಕಾರ್ಯದರ್ಶಿಗಳಾದ ಗಂಗಾಧರ ಮತ್ತು ಅನಿತಾ ವಿ., ಕವಿತಾ ಹರಪನಹಳ್ಳಿ, ಅಶೋಕ ಡಂಬಳ, ಹೆಚ್.ಎಸ್.ಸಮಿಯಲ್ ಮೋಮಿನ್. ವಿವಿಧ ವಿಭಾಗಗಳ ಕಾರ್ಯದರ್ಶಿಗಳಾದ ಕೊಟ್ರೇಶ ಉತ್ತಂಗಿ, ಶಶಿಕುಮಾರ ಜಿ., ಕೋಮಲ್ ಎಸ್., ಸಂಘದ ತಾಲೂಕು ಅಧ್ಯಕ್ಷ ರವಿಚಂದ್ರ ಎಸ್. ಗೊಗ್ಗಿ, ಹಡಗಲಿ ತಾಲೂಕು ಅಧ್ಯಕ್ಷ ಮಲ್ಲೇಶ್ ನಾಯ್ಕ ಡಿ.ಜಿ., ಕೂಡ್ಲಿಗಿ ತಾಲೂಕಾಧ್ಯಕ್ಷ ಮರುಳಸಿದ್ದಪ್ಪ ಎನ್.ಯು., ಹರಪನಹಳ್ಳಿಯ ತಾಲೂಕು ಅಧ್ಯಕ್ಷ ಶಶಿಕುಮಾರ ಜಿ., ಕೊಟ್ಟೂರಿನ ತಾಲೂಕು ಅಧ್ಯಕ್ಷೆ ಜ್ಯೋತಿಬಾಯಿ, ಹಗರಿಬೊಮ್ಮನಹಳ್ಳಿಯ ತಾಲೂಕು ಅಧ್ಯಕ್ಷ ಗಣೇಶ್ ಎಸ್.ಜಿ. ಹಾಗೂ ಜಿಲ್ಲೆಯ ಕಂದಾಯ ಇಲಾಖೆಯ ಎಲ್ಲಾ ಹಂತದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಅಚ್ಚುಕಟ್ಟಾಗಿ ಕಾರ್ಯಕ್ರಮ ಏರ್ಪಾಡು ಮಾಡಿದ್ದಕ್ಕೆ ಜಿಲ್ಲಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಜಿಲ್ಲಾಧ್ಯಕ್ಷ ಯಂಕಾರೆಡ್ಡಿ ಕೆ ಪ್ರಾಸ್ತಾವಿಕ ಮಾತನಾಡಿ, 2022ರಲ್ಲಿ ಮೊದಲ ಬಾರಿಗೆ ಕಂದಾಯ ದಿನಾಚರಣೆ ನಡೆಸಲಾಯಿತು. ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಬಗ್ಗೆ ಉತ್ತಮ ಕಾಳಜಿ ಮತ್ತು ಸ್ಪಂದನೆ ಹೊಂದಿದ್ದರಿAದಾಗಿ 2024ರಲ್ಲಿ ಕಂದಾಯ ದಿನಾಚರಣೆ ನಡೆಸುವಂತಾಯಿತು ಎಂದು ತಿಳಿಸಿದರು. ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಚಟುವಟಿಕೆಗಳ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಅಪರ ಜಿಲ್ಲಾಧಿಕಾರಿಗಳಾದ ಅನುರಾಧ ಜಿ ಅವರು ನೀಡುತ್ತಿರುವ ಪ್ರೋತ್ಸಾಹ ಶ್ಲಾಘನೀಯವಾಗಿದೆ ಎಂದರು.

ರಕ್ತದಾನ ಶಿಬಿರ: ಕಂದಾಯ ದಿನಾಚರಣೆ ನಿಮಿತ್ತ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದು ವಿಶೇಷವಾಗಿತ್ತು. ಅಪರ ಜಿಲ್ಲಾಧಿಕಾರಿಗಳಾದ ಅನುರಾಧ ಜಿ ಅವರು ರಕ್ತದಾನ ಶಿಬಿರ ಉದ್ಘಾಟಿಸಿದರು. ಕಾರ್ಯಕ್ರಮದ ಸ್ಥಳದಲ್ಲಿಯೇ ರಕ್ತದಾನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು.

ಪ್ರಶಸ್ತಿ ಪ್ರದಾನ: ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ 2024ನೇ ಸಾಲಿನಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಪಡೆದ ಕಂದಾಯ ನೌಕರರ ಮಕ್ಕಳಿಗೆ ಕಂದಾಯ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ ನೀಡಲಾಯಿತು.

ವಿಜೇತರಿಗೆ ಬಹುಮಾನ: ಕಂದಾಯ ದಿನಾಚರಣೆ ಹಿನ್ನೆಲೆಯಲ್ಲಿ ಕಂದಾಯ ಅಧಿಕಾರಿಗಳು ಮತ್ತು ಸಿಬ್ಬಂದಿಯಿAದ ದಿನಾಚರಣೆಯ ಪೂರ್ವ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ವಿವಿಧ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಇದೆ ವೇಳೆ ಜಿಲ್ಲಾಧಿಕಾರಿಗಳು ಪ್ರಮಾಣ ಪತ್ರ ಸಹಿತ ಬಹುಮಾನ ನೀಡಿದರು.

ಕಾರ್ಯಕ್ರಮದಲ್ಲಿ ಹರಪನಹಳ್ಳಿಯ ಸಹಾಯಕ ಆಯುಕ್ತರಾದ ಚಿದಾನಂದ ಗುರುಸ್ವಾಮಿ, ಹೊಸಪೇಟೆಯ ಸಹಾಯಕ ಆಯುಕ್ತರಾದ ವಿವೇಕಾನಂದ ಪಿ, ಹೊಸಪೇಟೆ ತಹಶೀಲ್ದಾರರಾದ ವಿಶ್ವಜೀತ ಮೇಹತಾ, ಹರಪನಹಳ್ಳಿಯ ತಹಶೀಲ್ದಾರರಾದ ಬಿ.ವಿ.ಗಿರೀಶ್ ಬಾಬು, ಹಗರಿಬೊಮ್ಮನಹಳ್ಳಿಯ ತಹಶೀಲ್ದಾರರಾದ ಚಂದ್ರಶೇಖರ್ ಶಂಭಣ್ಣ ಗಾಳಿ, ಕೂಡ್ಲಿಗಿಯ ತಹಶೀಲ್ದಾರರಾದ ಎಂ. ರೇಣುಕ, ಕೊಟ್ಟೂರು/ಹಡಗಲಿಯ ತಹಶೀಲ್ದಾರರಾದ ಅಮರೇಶ ಜಿ.ಕೆ., ಜಿಲ್ಲಾಧಿಕಾರಿಗಳ ಕಾರ್ಯಾಲಯದ ಚುನಾವಣಾ ತಹಶೀಲ್ದಾರರಾದ ಕಾರ್ತಿಕ ವಿ, ಮುನಿಸಿಪಲ್ ತಹಶೀಲ್ದಾರರಾದ ಮೇಘ, ಶಿಷ್ಟಾಚಾರ ತಹಶೀಲ್ದಾರರಾದ ಎಂ. ಪ್ರತಿಭಾ, ಹೊಸಪೇಟೆ ಸಹಾಯಕ ಆಯುಕ್ತರ ಕಚೇರಿಯ ಗ್ರೇಡ್-2 ತಹಶೀಲ್ದಾರರಾದ ಹೇಮಂತ್ ಕುಮಾರ್ ಸಿ. ದೊಡ್ಡಮನಿ, ಹರಪನಹಳ್ಳಿ ತಾಲೂಕು ಕಚೇರಿಯ ಗ್ರೇಡ್-2 ತಹಶೀಲ್ದಾರರಾದ ನಟರಾಜ ಜೆ, ಹೊಸಪೇಟೆ ತಾಲೂಕು ಕಚೇರಿಯ ಗ್ರೇಡ್-2 ತಹಶೀಲ್ದಾರರಾದ ವೆಂಕಟೇಶ್ ಆಶ್ರಿತ್, ಚುನಾವಣಾ ವಿಭಾಗದ ಶೀರಸ್ತೇದಾರ ಮನೋಜ ಲಾಡೆ, ಜಿಲ್ಲಾಧಿಕಾರಿಗಳಾದ ಆಪ್ತ ಸಹಾಯಕರಾದ ನಾಗರಾಜ ಎಂ., ನವೀನ್ ಸೇರಿದಂತೆ ಇನ್ನೀತರರು ಇದ್ದರು.

ಗ್ರೇಡ್-2 ತಹಶೀಲ್ದಾರರಾದ ಹೇಮಂತ್ ಕುಮಾರ್ ಸಿ. ಹಾಗೂ ಇನ್ನೀತರರು ಕಾರ್ಯಕ್ರಮದಲ್ಲಿ ಚಲನಚಿತ್ರಗಳನ್ನು ಹಾಡಿ ರಂಜಿಸಿದರು.

Leave a Reply

Your email address will not be published. Required fields are marked *