ಶೈಕ್ಷಣಿಕ ಬೇರು ಗಟ್ಟಿಗೊಳಿಸೋಣ: ಕ್ಷೇತ್ರ ಶಿಕ್ಷಣಾಧಿಕಾರಿ ಕರೆ

Loading

ಹಗರಿಬೊಮ್ಮನಹಳ್ಳಿ : ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಹಂತದಿಂದಲೇ ವಿದ್ಯಾರ್ಥಿಗಳ ಶೈಕ್ಷಣಿಕ ಬೇರುಗಳನ್ನು ಗಟ್ಟಿಗೊಳಿಸಲು ಸರಕಾರದ ಜತೆಗೆ ಸಂಘಸಂಸ್ಥೆಗಳ ಸಹಭಾಗಿತ್ವ ಅಗತ್ಯ ಎಂದು ಬಿಇಒ ಮೈಲೇಶ್ ಬೇವೂರ್ ಅಭಿಪ್ರಾಯಪಟ್ಟರು.

ಪಟ್ಟಣದ ಗಂ.ಭೀ.ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಅಕ್ಕಿ ಬಸಮ್ಮ ತೋಟಪ್ಪ ಪಬ್ಲಿಕ್ ಚಾರಿಟಬಲ್ ಟ್ರಸ್ಟ್‌ನಿಂದ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ಶಿಕ್ಷಕರು, ಪಾಲಕರು ಮತ್ತು ವಿದ್ಯಾರ್ಥಿಗಳು ಸಹಭಾಗಿತ್ವ

ನೀಡಿದ ಪರಿಣಾಮ ತಾಲೂಕು ಎಸ್ಸೆಸ್ಸೆಲ್ಸಿಯಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಮೊದಲ ಸ್ಥಾನದಲ್ಲಿದೆ. ಈ ಮೂಲಕ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲೂ ಉತ್ತಮತೆ ಉಳಿಸಿಕೊಳ್ಳುವ ಹೊಣೆಗಾರಿಕೆ ಹೆಚ್ಚಿದೆ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರತಿಭೆಗೆ ಉತ್ತೇಜನದ ಅಗತ್ಯವಿದೆ ಎಂದರು.

ಟ್ರಸ್ಟ್‌ನ ಕಾರ್ಯದರ್ಶಿ ಅಕ್ಕಿ ತೋಟೇಶ್ ಮಾತನಾಡಿ, ಒಟ್ಟು 7ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಒಟ್ಟು 20 ಶಾಲೆಗೆ ಹಂಚುವ ಗುರಿ ಹೊಂದಲಾಗಿದೆ. ಸರಕಾರಿ ಶಾಲೆ ವಿದ್ಯಾರ್ಥಿಗಳಿಗೆ ಶಿಕ್ಷಣ ಹೊರೆಯಾಗಬಾರದು. ಟ್ರಸ್ಟ್‌ನಿಂದ ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸೇವೆ ಸಲ್ಲಿಸಲಾಗುವುದು. ಈ ಸಾಲಿನಲ್ಲಿ ಟ್ರಸ್ಟ್‌ನಿಂದ ಕೊಟ್ಟೂರೇಶ್ವರ ಗಚ್ಚಿನಮಠದಲ್ಲಿ  ಭಕ್ತರಿಗೆ ಸಹಕಾರಿಯಾಗಿ 20 ಲಕ್ಷ ರೂಪಾಯಿ ಸೆಲ್ಟರ್ ನಿರ್ಮಿಸಲಾಗಿದೆ ಎಂದರು.

ವೀ.ವಿ.ಸಂಘದ ಮಾಜಿ ನಿರ್ದೇಶಕ ಅಕ್ಕಿ ಶಿವಕುಮಾರ್ ಮಾತನಾಡಿದರು. ಮುಖ್ಯಶಿಕ್ಷಕ ವಟ್ಟಮ್ಮನಹಳ್ಳಿ ಮಲ್ಲಪ್ಪ, ಇಸಿಒ ಶಿವಲಿಂಗ ಸ್ವಾಮಿ, ಶಿಕ್ಷಕ ಡಾ.ಪರಮೇಶ್ವರಯ್ಯ ಸೊಪ್ಪಿಮಠ, ಸಿದ್ದನಗೌಡ, ಡಿ.ವೆಂಕಟೇಶನಾಯ್ಕ, ಜನಾರ್ದನ, ಮಲ್ಲಿಕಾರ್ಜುನ, ಸುಶೀಲಾ, ಭಾರತಿ, ಎಚ್.ಕುಮಾರ್ ಇದ್ದರು. ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ಪಿ.ಎಂ.ಮಂಜುನಾಥ, ಶಿಕ್ಷಕಿ ಜಯಶ್ರೀ, ಮೈಸೂರು D ನಿರ್ವಹಿಸಿದರು.

ಈ ಸಂದರ್ಭದಲ್ಲಿ  ಹಗರಿಬೊಮ್ಮನಹಳ್ಳಿ ಪಟ್ಟಣದ ಗಂ.ಭೀ. ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಅಕ್ಕಿ ಬಸಮ್ಮ ತೋಟಪ್ಪ ಸ್ಮಾರಕ ಟ್ರಸ್ಟ್ ಕಾರ್ಯದರ್ಶಿ ಅಕ್ಕಿ ತೋಟೇಶ್ ಇವರು ಉಚಿತ ನೋಟ್ ಪುಸ್ತಕ ವಿತರಿಸಿದರು.

Leave a Reply

Your email address will not be published. Required fields are marked *