ಜುಲೈ 11 ರಂದು ರಾಜ್ಯ ಮಾನವ ಹಕ್ಕುಗಳಆಯೋಗದಿಂದ ವಿಜಯನಗರ ಜಿಲ್ಲಾ ಪ್ರವಾಸ

Loading

ಹೊಸಪೇಟೆ (ವಿಜಯನಗರ) : ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರ ತಂಡವು ಜುಲೈ 11 ರಂದು ವಿಜಯನಗರ ಜಿಲ್ಲೆಯಲ್ಲಿ ಪ್ರವಾಸ ಹಮ್ಮಿಕೊಂಡಿದೆ.

ಜುಲೈ 11 ರಂದು ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರ ತಂಡವು ಬೆಳಿಗ್ಗೆ 11 ಗಂಟೆಯಿAದ 12 ಗಂಟೆಯವರೆಗೆ ಜಿಲ್ಲಾಡಳಿತ ಭವನದಲ್ಲಿನ ಆಡಿಟೋರಿಯಂ ಹಾಲ್‌ನಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸುವರು.

ಮಧ್ಯಾಹ್ನ 12 ಗಂಟೆಯಿAದ 01.30ರವರೆಗೆ ಸಿಟ್ಟಿಂಗ್ಸ್ ಹಾಗೂ ಸ್ಥಳೀಯ ಪರಿವೀಕ್ಷಣೆ ನಡೆಸುವರು. ಮಧ್ಯಾಹ್ನ ಊಟದ ವಿರಾಮದ ನಂತರ ಮತ್ತೆ ಮಧ್ಯಾಹ್ನ 2.30 ರಿಂದ ಸಂಜೆ 6 ಗಂಟೆವರೆಗೆ ಸಿಟಿಂಗ್ಸ್ ಮತ್ತು ಸ್ಥಳೀಯ ಪರಿವೀಕ್ಷಣೆ ಮುಂದುವರೆಸುವರು. ಬಳಿಕ 6.30ಕ್ಕೆ ಹೊಸಪೇಟೆಯಿಂದ ನಿರ್ಗಮಿಸಿ ರಸ್ತೆ ಮಾರ್ಗವಾಗಿ ಹುಬ್ಬಳ್ಳಿಗೆ ಪ್ರಯಾಣ ಬೆಳೆಸುವರು ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *