ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ: ತ್ರಿಸದಸ್ಯ ಸಮಿತಿ ರಚನೆ

Loading

ಹೊಸಪೇಟೆ (ವಿಜಯನಗರ) : ಜೂನ್ 30 ರಂದು ಜಿಲ್ಲೆಯಲ್ಲಿ ನಡೆಯಲಿರುವ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ-2024ರ ಪರೀಕ್ಷಾ ಗೌಪ್ಯ ಸಾಮಗ್ರಿಗಳ ಬಂಡಲ್‌ಗಳನ್ನು ಸ್ವೀಕರಿಸಿ ಖಜಾನೆಯ ಭದ್ರತಾ ಕೊಠಡಿಯಲ್ಲಿ ಅಭಿರಕ್ಷಿಸುವ ಮತ್ತು ಪರೀಕ್ಷಾ ದಿನದಂದು ಮಾರ್ಗಾಧಿಕಾರಿಗಳಿಗೆ ವಿತರಿಸುವ ಹಾಗೂ ಆಯಾ ಅಧಿವೇಶನದ ಪರೀಕ್ಷೆ ನಂತರ ಉತ್ತರ ಪತ್ರಿಕೆಗಳ ಬಂಡಲ್‌ಗಳನ್ನು ಖಜಾನೆಯಲ್ಲಿ ಅಭಿರಕ್ಷಿಸಿಡುವ ಸಂಬAಧ ವಿಜಯನಗರ ಜಿಲ್ಲೆಯ ಜಿಲ್ಲಾ ಖಜಾನೆಗೆ ಜಿಲ್ಲಾ ಹಂತದಲ್ಲಿ ಜಿಲ್ಲಾಧಿಕಾರಿಗಳ ಪ್ರತಿನಿಧಿ, ಜಿಲ್ಲಾ ಖಜಾನಾಧಿಕಾರಿ ಮತ್ತು ಉಪನಿರ್ದೇಶಕರು (ಆಡಳಿತ) ಶಾಲಾ ಶಿಕ್ಷಣ ಇಲಾಖೆ ಪ್ರತಿನಿಧಿ ಇವರನ್ನೊಳಗೊಂಡAತೆ ಜಿಲ್ಲಾಧಿಕಾರಿಗಳು ತ್ರಿಸದಸ್ಯ ಸಮಿತಿಯನ್ನು ರಚಿಸಿರುತ್ತಾರೆ.

ನಿಯೋಜನೆ ಮಾಡಿದ ಅಧಿಕಾರಿಗಳು: ಶ್ರೀ ಭೀಮಪ್ಪ, ಎಲ್ ಉಪ ಕಾರ್ಯದರ್ಶಿಗಳು, ಜಿಲ್ಲಾ ಪಂಚಾಯತ್, ವಿಜಯನಗರ ಜಿಲ್ಲೆ, ಹೊಸಪೇಟೆ ಮೋ.9986834008, ಶ್ರೀ ರಾಮಪ್ರಸಾದ್, ಉಪನಿರ್ದೇಶಕರು, ಜಿಲ್ಲಾ ಖಜಾನೆ, ಖಜಾನೆ ಇಲಾಖೆ, ವಿಜಯನಗರ ಜಿಲ್ಲೆ, ಹೊಸಪೇಟೆ. ಮೋ. 9845425828, ಶ್ರೀಮತಿ ಎ. ಹನುಮಕ್ಕ ಉಪ ನಿರ್ದೇಶಕರು (ಆಡಳಿತ), ಪ್ರಭಾರ ಶಾಲಾ ಶಿಕ್ಷಣ ಇಲಾಖೆ, ವಿಜಯನಗರ ಜಿಲ್ಲೆ, ಹೊಸಪೇಟೆ ಮೋ. 9448999412 ಗೆ ಸಂಪರ್ಕಿಸಲು ತಿಳಿಸಿದೆ.

ನೇಮಕಗೊಂಡ ಸಮಿತಿ ಸದಸ್ಯರು ಮೊಹರು ಮಾಡಿರುವ ಪರೀಕ್ಷಾ ಗೌಪ್ಯ ಸಾಮಗ್ರಿಗಳ ಬಾಕ್ಸ್ಗಳನ್ನು ಪರೀಕ್ಷಾ ದಿನಾಂಕಗಳAದು ನಿಗದಿತ ಸಮಯಕ್ಕೆ ಜಿಲ್ಲಾ ಖಜಾನೆಯಿಂದ ನಿಯಮಾನುಸಾರ ಜಿಲ್ಲಾ ಮಾರ್ಗಾಧಿಕಾರಿಗಳ ಸುಪರ್ದಿಗೆ ವಹಿಸಿ ಈ ಬಗ್ಗೆ ದೃಢೀಕರಣ ಪಡೆಯುವುದು. ಪರೀಕ್ಷೆ ಪ್ರಾರಂಭವಾಗುವ ಅವಧಿಗಿಂತ ಮುಂಚಿತವಾಗಿ ಪರೀಕ್ಷಾ ಗೌಪ್ಯ ಸಾಮಗ್ರಿಗಳ ಬಂಡಲ್‌ಗಳನ್ನು ಪರೀಕ್ಷಾ ಕೇಂದ್ರಕ್ಕೆ ತಲುಪುವಂತೆ ಜಾಗೃತೆ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

Leave a Reply

Your email address will not be published. Required fields are marked *