ನೀ ಬರೆದೆ ಪ್ರೀತಿಯ ಓಲೆ
ಓದಿದೆ ನಾ ಪ್ರೇಮದ ಸಾಲೆ
ಮೈಮೈರೆತು ಮಂಕಾದೆನು
ಮನಸೋತು ಹುಚ್ಚಾದೆನು
ಅರಳುವ ಗುಲಾಬಿ ಹೂವೆ
ನಗುತ ನೀ ಏಕೆ ನಲಿವೆ
ಅಪ್ಸರೆ ರೂಪದ ಚೆಲುವೆ
ಮನಕೆ ನೋವ ಕೊಡುವೆ
ಕಂಗಳ ಕಾಂತಿಯ ಒಲವೆ
ಕಣ್ಣೀರನು ಏಕೆ ಸುರಿಸುವೆ
ಮರೆಯಲಾರೆನು ಚಿನ್ನ
ಬಿಡಲಾರೆನು ನಿನ್ನ
ನನ್ನ ಬಾಳಿನ ಕಣ್ಣಾ
ನನ್ನ ಜೀವದ ಹೆಣ್ಣಾ
ಹೃದಯಕೆ ಹಾಕಿದೆ ಕನ್ನ
ಮನ ಸೆಳೆದಿದೆ ಮೈ ಬಣ್ಣಾ
ಪ್ರೇಮದ ಮಡವಿನಲಿ
ಪ್ರೀತಿಯ ಸೆಳೆವಿನಲಿ
ಸಹನೆಯ ಕಡಲಿನಲಿ
ಕರುಣೆಯ ಒಡಲಿನಲಿ
ಮಮತೆಯ ಮಡಿಲಿನಲಿ
ಏಕೆ ಬೆಂದು ಹೋಗಿರುವೆ
ಮೃದು ಕೋಮಲ ಹೂವೆ
ನನ್ನ ಜೀವಕೆ ಉಸಿರಾಗಿರುವೆ
ನನ್ನ ಭಾವಕೆ ಕನಸಾಗಿರುವೆ
ಮಂಗಳೂರಿನ ಚೆಲುವೆ
ತಿಂಗಳೂರಿಗೆ ನಾ ಬರುವೆ
ಏಕೆ ನೊಂದು ಹೋಗಿರುವೆ

ಬರಹ : ಕ್ಯಾದಿಗೆಹಾಳ್ ಉದೇದಪ್ಪ ಶಿಕ್ಷಕರು
ಪಿ.ವಿ.ಎಸ್.ಬಿ.ಸಿ.ಪ್ರೌಢ ಶಾಲೆ
ಹೊಸಪೇಟೆ
ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು
ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಅಧ್ಯಕ್ಷರು.