ಹೊಸಪೇಟೆ (ವಿಜಯನಗರ) : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹೊಸಪೇಟೆ ಘಟಕದಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಜೂ.18ರಿಂದ ಟಿ.ಬಿ.ಡ್ಯಾಮ್ನಿಂದ ಹಂಪಿ ಸಂಪರ್ಕಿಸಲು ಅನುಸೂಚಿ ಸಂ: 301/1ರಲ್ಲಿ ಹೊಸಪೇಟೆ ಕೇಂದ್ರ ಬಸ್ ನಿಲ್ದಾಣದಿಂದ ನಗರ ಸಾರಿಗೆ ವ್ಯವಸ್ಥೆಯನ್ನು ಪ್ರಾರಂಭಿಸಲಾಗುತ್ತಿದ್ದು, ವಾಹನ ಬಿಡುವ ಮತ್ತು ತಲುಪುವ ಸಮಯವನ್ನು ಬಿಡುಗಡೆಮಾಡಲಾಗಿದೆ.
ವಾಹನವು ಹಂಪಿಯಿಂದ ಬೆಳಿಗ್ಗೆ 7.45ಕ್ಕೆ ಹೊರಟು 8.40ಕ್ಕೆ ಟಿ.ಬಿ.ಡ್ಯಾಮ್ ತಲುಪುತ್ತದೆ. ನಂತರ 11.45ಕ್ಕೆ ಹೊರಟು 12.40ಕ್ಕೆ ತಲುಪುತ್ತದೆ. ನಂತರ 3.45ಕ್ಕೆ ಹೊರಟು ಸಂಜೆ 4.40ಕ್ಕೆ ಟಿ.ಬಿ.ಡ್ಯಾಮ್ ತಲುಪುತ್ತದೆ.
ಟಿ.ಬಿ.ಡ್ಯಾಮ್ನಿಂದ ಬೆಳಿಗ್ಗೆ 8.55ಕ್ಕೆ ಹೊರಟು ಬೆಳಿಗ್ಗೆ 10 ಗಂಟೆಗೆ ಹಂಪಿಗೆ ತಲುಪುತ್ತದೆ, ನಂತರ ಮದ್ಯಾಹ್ನ 12.55ಕ್ಕೆ ಹೊರಟು 1.50ಕ್ಕೆ ತಲುಪುತ್ತದೆ. ನಂತರ ಸಂಜೆ 4.55ಕ್ಕೆ ಹೊರಟು 5.50ಕ್ಕೆ ಹಂಪಿಗೆ ತಲುಪುತ್ತದೆ. ಆದ್ದರಿಂದ ಸಾರ್ವಜನಿಕರು ಈ ಸಾರಿಗೆ ಸೌಕರ್ಯದ ಸದುಪಯೋಗ ಪಡೆದುಕೊಳ್ಳಬೇಕೆಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹೊಸಪೇಟೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.