
ಹಗರಿಬೊಮ್ಮನಹಳ್ಳಿ : ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೂರನೇ ಬಾರಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆಯೇ ಇತ್ತ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷಗಳ ಮುಖಂಡರು ಕಾರ್ಯಕರ್ತರು ಪಟ್ಟಣದ ಬಸವೇಶ್ವರ ವೃತ್ತದ ಬಳಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಈ ವೇಳೆ ಜೆಡಿಎಸ್ ಪಕ್ಷದ ಅಧ್ಯಕ್ಷ ವೈ ಮಲ್ಲಿಕಾರ್ಜುನ ಬಿಜೆಪಿ ಪಕ್ಷದ ಅಧ್ಯಕ್ಷ ಬೆಣಕಲ್ಲು ಪ್ರಕಾಶ್ ಪುರಸಭೆ ಸದಸ್ಯರಾದ ಜೋಗಿ.ಹನುಮಂತಪ್ಪ ದೀಪಕ್ ಕಠಾರೆ ನಾಗರಾಜ್ ಜನ್ನು, ನವೀನ್ ಕುಮಾರ್ ಮುಖಂಡರಾದ ಬಲ್ಲಹುಣಿಸಿ ರಾಮಣ್ಣ, ಕೃಷ್ಣಮೂರ್ತಿ ಶೆಟ್ರು. ಮುಟುಗನಹಳ್ಳಿ ಕೊಟೇಶ್, ಬುಡ್ಡಿ ಬಸವರಾಜ, ಹಂಪಾಪಟ್ಟಣದ ಮಹೇಂದ್ರ, ಸರ್ದಾರ್ ಯಮನೂರಪ್ಪ, ಎಸ್. ಅಂಬಣ್ಣ, ಬಿಜಿ ಬಡಿಗೇರ್, ಹೋಟೆಲ್ ಸಿದ್ದರಾಜು, ಬಸವರಾಜ ಬಡಿಗೇರ್, ಕನಕಪ್ಪ ಮರಿಯಪ್ಪ ನಾಗರಾಜ ಗೋಟೂರ್ ಬಸವರಾಜ ಸೇರಿದಂತೆ ಇತರರು ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.