ಹೊಸಪೇಟೆ (ವಿಜಯನಗರ) ಜೂನ್ 07 : ಕಮಲಾಪುರ ಪುರಸಭೆ ವ್ಯಾಪ್ತಿಯಲ್ಲಿ ಬರುವ ಬಡತನ ರೇಖೆಗಿಂತ ಕೆಳಗಿನ ಅರ್ಹ ಫಲಾನುಭವಿಗಳಿಂದ ಸಾಲ ಸೌಲಭ್ಯಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
2024-25ನೇ ಸಾಲಿನಲ್ಲಿ ಸ್ವಯಂ ಉದ್ಯೋಗ ವ್ಯಕ್ತಿಗತ ಸಾಲ ಪಡೆಯಲು ಭೌತಿಕ ಗುರಿಯ ಪ್ರಮಾಣವು 8 ನಿಗದಿಪಡಿಸಲಾಗಿದೆ. ಕಮಲಾಪುರ ಪುರಸಭೆಗೆ ಸಾಮಾಜಿಕ ಕ್ರೋಢೀಕರಣ, ಸಾಂಸ್ಥಿಕ ಕಾರ್ಯಕ್ರಮ (ಎಸ್.ಎಂ.ಐ.ಡಿ) ದಡಿಯಲ್ಲಿ ಉಳಿತಾಯ ಗುಂಪುಗಳ ರಚನೆ ಮಾಡಲು, ಗುಂಪು ಸಾಲ ಹಾಗೂ ಕ್ರೆಡಿಟ್ ಲಿಂಕೇಜ್ಗಾಗಿ ಭೌತಿಕ ಗುರಿ ಪ್ರಮಾಣವು 1 ನಗದಿಪಡಿಸಲಾಗಿದೆ. ವೈಯಕ್ತಿಕ ಉದ್ಯಮಶೀಲತೆ (ಸಾಲ ಮತ್ತು ಸಹಾಯಧನ) ಮತ್ತು ಆರ್ಥಿಕ ಸೌಲಭ್ಯ ಪಡೆದ ಫಲಾನುಭವಿಗಳಿಗೆ ಶೇ.7ರ ಮೇಲ್ಪಟ್ಟು ಶೇಕಡವಾರು ಬಡ್ಡಿ ಮೊತ್ತವು (ಬಡ್ಡಿ ಸಹಾಯಧನ) ಈ ಯೋಜನೆಯಿಂದ ಭರಿಸಲಾಗುವುದು.
ಅರ್ಜಿಗಳನ್ನು ಜೂ.6ರಿಂದಲೇ ಈ ಕಚೇರಿಯಲ್ಲಿ ನೀಡುತ್ತಿದ್ದು ಅರ್ಜಿ ಪಡೆದು ಭರ್ತಿ ಮಾಡಿ ಜೂ.19ರೊಳಗೆ ಕಚೆೆÃರಿ ಸಮಯದಲ್ಲಿ ಸಲ್ಲಿಸಬಹುದಾಗಿದೆ. ಪೂರ್ಣವಾಗಿ ಭರ್ತಿ ಮಾಡದೇ ಇರುವ ಅರ್ಜಿಗಳನ್ನು ಯಾವುದೇ ಮುನ್ಸೂಚನೆ ನೀಡದೆ ತಿಸ್ಕರಿಸಲಾಗುವುದು.
ಅರ್ಜಿಯೊಂದಿಗೆ ಪಡಿತರ ಚೀಟಿ, ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ, ಇತ್ತೀಚಿನ 2 ಪಾಸ್ ಪೋರ್ಟ್ ಕಲರ್ ಭಾವಚಿತ್ರ, 20 ರೂ. ಛಾಪಾ ಕಾಗದದ ಪ್ರಮಾಣ ಪತ್ರ, ವರ್ಗಾವಣೆ ಪ್ರಮಾಣ ಪತ್ರ (ವಿದ್ಯಾರ್ಹತೆ ಹೊಂದಿದ್ದಲ್ಲಿ), ಅನುಭವ ಪ್ರಮಾಣ ಪತ್ರ, ಇತ್ತೀಚೆಗೆ ನಡೆಸುತ್ತಿರುವ ಉದ್ದಿಮೆಯ ಭಾವಚಿತ್ರ, ಉದ್ದಿಮೆಗೆ ಸಂಬಂಧಿಸಿದಂತೆ ಉದ್ದಿಮೆಯ ಪರವಾನಿಗೆ ಪತ್ರ ಮತ್ತು ಯೋಜನಾ ವರದಿ, ವಿಕಲಚೇತನರ ಪ್ರಮಾಣ ಪತ್ರಗಳ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬೇಕು ಎಂದು ಕಮಲಾಪುರದ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.