
ಹಂಪಿ : ಹಂಪಿ ಕಮಲ ಮಹಲ್ ಆವರಣದಲ್ಲಿ ಗಂಧದ ಮರ ಕಡಿದು ಕದ್ದು ಪರಾರಿಯಾಗಿದ್ದ ಕಳ್ಳತನ ಪ್ರಕರಣದಲ್ಲಿ ಹಂಪಿ ಪ್ರವಾಸಿ ಠಾಣೆ ಪೋಲೀಸರು ನಾಲ್ವರನ್ನು ಆರೋಪಿಗಳನ್ನು ಬಂಧಿಸಿ 2ಕೆಜಿ ಶ್ರೀಗಂಧದ ಮರದ ಕಟ್ಟಿಗೆ ಸಹಿತ ಬೆಲೆ ಬಾಳುವ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ನವಂಬರ್ 24. 2023 ರಂದು ಕಮಲ್ ಮಹಲ್ ಆವರಣದ ಟ್ರಿಜರಿ ಕಟ್ಟಡದ ಮುಂಭಾಗದಲ್ಲಿ, ಶ್ರೀಗಂಧದ ಮರವನ್ನು ಕಡಿದು ಕಳ್ಳತನ ಮಾಡಿದ್ದರ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದರು. ಒಂದೂವರೆ ತಿಂಗಳಲ್ಲಿ ಆರೋಪಿತ ಕಳ್ಳರನ್ನು ಪತ್ತೆ ಮಾಡಿ, ಅವರಿಂದ ನಗದು ಹಣ 6000/- ರೂ. ಅಂದಾಜು ರೂ. 3.00,000/- ಬೆಲೆ ಬಾಳುವ 01 ಬೊಲೆರೋ ಜೀಪ್, ಅಂದಾಜು ರೂ. 62,000/- ಬೆಲೆ ಬಾಳುವ 02 ಮೋಟಾರ್ ಸೈಕಲ್ ಗಳನ್ನು ಮತ್ತು 03 ಆಂಡ್ರಾಯ್ಡ್ ಮೊಬೈಲ್ ಪೋನ್ಗಳು ಮತ್ತು 2 ಕೆಜಿ ತೂಕವಿರುವ ಶ್ರೀಗಂಧ ಮರದ ಕಟ್ಟಿಗೆ ತುಂಡನ್ನು ವಶಪಡಿಸಿಪಡಿಸಿಕೊಂಡಿದ್ದಾರೆ. ಹೊಸಪೇಟೆ ಆಶ್ರಯ ಕಾಲೋನಿ ಗಾಳೆಪ, ಈಶ್ವರ ನಗರದ ಕೆ.ಲೋಕೇಶ, ಜಂಬುನಾಥ ರಸ್ತೆ ದೋಳಪೇಟೆಯ ಲಕ್ಷಣ ಹಾಗೂ ಸಿರಸನಕಲ್ಲು ಪ್ರದೇಶದ ಹುಲುಗಪ್ಪ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ವಿಜಯನಗರ ಜಿಲ್ಲಾ ಎಸಿ ಶ್ರೀಹರಿಬಾಬು, ಹೆಚ್ಚುವರಿ ಎಸ್ಪಿ ಸಲೀಂ ಪಾಷ, ಡಿವೈಎಸ್ಪಿ ಡಾ.ಟಿ.ಮಂಜುನಾಥ ಮತ್ತು ಹಂಪಿ ವೃತ್ತ ಸಿಪಿಐ ಶಿವರಾಜ್ ಎಸ್ ಇಂಗಳೆ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಪೊಲೀಸರು ಹಂಪಿ ನಡೆಸಿದ್ದರು. ಪೊಲೀಸ್ ಠಾಣೆ ಪಿಎಸ್ಐ ಶಿವಕುಮಾರ್ ನಾಯ್ಕ ನೇತೃತ್ವದಲ್ಲಿ ಪೊಲೀಸರಾದ ಸಂಜೀವ್ಸಿಂಗ್, ಶರಣಪ್ಪ, ಸಿ.ಡಿ.ಆರ್. ಘಟಕದ సిబ్బంది ಕುಮಾರ್ ನಾಯ್ಕರನ್ನೊಳಗೊಂಡ ತಂಡ ಆರೋಪಿಗಳನ್ನು ಪತ್ತೆ ಹಚ್ಚಿಸಿದ್ದಾರೆ. ಪೊಲೀಸರ ಕಾರ್ಯಾಕ್ಕೆ ಮೇಲಾಧಿಕಾರಿಗಳು ಶ್ಲಾಘಿಸಿದ್ದಾರೆ.