
ಹಗರಿಬೊಮ್ಮನಹಳ್ಳಿ : ನ -5 ಗದಗ ನಗರದ ಕಡೆಯಿಂದ ಆಗಮಿಸಿದ ಸುವರ್ಣ ಸಂಭ್ರಮ ಕನ್ನಡ ಜ್ಯೋತಿ ರಥಯಾತ್ರೆಯನ್ನು ತಾಲೂಕಿನ ಗಡಿಯ ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿ ಕೆಂಚಟನಹಳ್ಳಿ ಗ್ರಾಮದ ಬಳಿ ತಹಶಿಲ್ದಾರ ಚಂದ್ರಶೇಖರ ಶಂಬಣ್ಣ ಗಾಳಿ ಅವರು ತಾಲೂಡಾಳಿತ ಮತ್ತು ತಾಲೂಕಿನ ಜನತೆಯ ಪರವಾಗಿ ಭವ್ಯವಾಗಿ ಕನ್ನಡನಾಡು,ನುಡಿಯನ್ನು ಬಿಂಬಿಸುವ ಭವ್ಯವಾದ ರಥವನ್ನು ಸ್ವಾಗತಿಸಿದರು.
ಕರ್ನಾಟಕ ಸುವರ್ಣ ಸಂಭ್ರಮದ ರಥಯಾತ್ರೆಯನ್ನು ಸ್ವಾಗತಿಸುವ ಅವಕಾಶ ಸಿಕ್ಕಿದ್ದು ನಮ್ಮ ಪುಣ್ಯ. ಇಂತಹ ಐತಿಹಾಸಿಕ ಕ್ಷಣಗಳಲ್ಲಿ ಭಾಗಿಯಾಗುತ್ತೀರುವುದು ನನಗೆ ಅತೀವ ಸಂತಸವಾಗುತ್ತಿದೆ. ಕನ್ನಡ ನಾಡು,ನುಡಿ,ಜಲ, ನೆಲದ ಪರವಾಗಿ ಕರ್ತವ್ಯ ನಿರ್ವಹಿಸಲು ಸಿಕ್ಕಿರುವ ಅವಕಾಶವನ್ನು ಕನ್ನಡನಾಡಿನ ಸರ್ವೋತೋಮುಖವಾದ ಅಭಿವೃದ್ಧಿಗಾಗಿ ಶ್ರಮಿಸಲು ಪಣವಾಗಿಡುವುದಾಗಿ ತಹಶಿಲ್ದಾರ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ರವರ ಆಯೋಜಕತ್ವದಲ್ಲಿ, ಕರ್ನಾಟಕ ನಾಮಕರಣದ 50ನೇ ವರ್ಷದ ಸುವರ್ಣ ಸಂಭ್ರಮದ ಅಂಗವಾಗಿ ಕನ್ನಡ ಜ್ಯೋತಿ ರಥಯಾತ್ರೆ ವಾಹನಕ್ಕೆ ಪೂಜೆ ನಮನ, ಪುಷ್ಪಾರ್ಚನೆ ಮೂಲಕ ತಂಬ್ರಹಳ್ಳಿ ಗ್ರಾಮಕ್ಕೆ ಗ್ರಾಮಸ್ಥರು ರಥಯಾತ್ರೆಯನ್ನು , ಅದ್ದೂರಿಯಾಗಿಯೇ ಸ್ವಾಗತ ಮಾಡಲಾಯಿತು. ರಥಯಾತ್ರೆ ಜೊತೆಗೆ ಆಗಮಿಸಿರುವ ಕಲಾತಂಡದಿಂದ ಕನ್ನಡ ಹಾಡುಗಳಿಗೆ ನೃತ್ಯಗಳು ಮಾಡುವ ಮೂಲಕ ರಥ ಸಾಗಿಬಂದ ದಾರಿಯುದ್ಧಕ್ಕೂ ಕನ್ನಡದ ಕಂಪನ್ನು ಪಸರಿಸಿದರು.

ಈ ಸಂದರ್ಭದಲ್ಲಿ . ಅಕ್ಕಿ ತೋಟೇಶ್ ತಹಸಿಲ್ದಾರ್ ಚಂದ್ರಶೇಖರ ಶಂಬಣ್ಣ ಗಾಳಿ. ಇ ಓ ಪರಮೇಶ್ವರಪ್ಪ ಮತ್ತು ಪಿಎಸ್ಐ ಸುವರ್ಥ್ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಸೇರಿದಂತೆ ಹಲವರು ರಥಯಾತ್ರೆ ಸ್ವಾಗತದಲ್ಲಿ ಭಾಗಿಯಾಗಿದ್ದರು.