ದರೋಜಿ ಪ್ರಕೃತಿ ನಿರೂಪಣಾ ಕೇಂದ್ರಕ್ಕೆ ಅರಣ್ಯ ಸಚಿವರ ಭೇಟಿ ಆನೆ, ವನ್ಯಜೀವಿ ಸಂಘರ್ಷ ತಡೆಗೆ ಅಗತ್ಯ ಕ್ರಮ ಉಳುಮೆ ಮಾಡುವ ಬುಡಕಟ್ಟು ಸಮುದಾಯಕ್ಕೆ ಹಕ್ಕುಪತ್ರ: ಸಚಿವ ಈಶ್ವರ ಖಂಡ್ರೆ

Loading

ಹೊಸಪೇಟೆ (ವಿಜಯನಗರ): 1978ರ ಪೂರ್ವದಲ್ಲಿ ಉಳುಮೆ ಮಾಡಿಕೊಂಡು ಬರುತ್ತಿರುವ 7-8 ಸಾವಿರದಷ್ಟು ಬುಡಕಟ್ಟು ಸಮುದಾಯವರಿಗೆ ಕಾನೂನು ಬದ್ಧವಾಗಿ ಹಕ್ಕುಪತ್ರ ನೀಡಲು ಸೂಚಿಸಲಾಗಿದ್ದು, 10 ಸಾವಿರ ಎಕರೆ ಭೂಮಿಯ ಹಕ್ಕನ್ನು ಮೂರು ತಿಂಗಳಲ್ಲಿ ಸಮುದಾಯಕ್ಕೆ ನೀಡಲಾಗುತ್ತದೆ ಎಂದು ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅವರು ತಿಳಿಸಿದರು.
ಹೊಸಪೇಟೆ ಸಮೀಪದ ಕಮಲಾಪುರ ಹೊರವಲಯದಲ್ಲಿರುವ ದರೋಜಿ ಕರಡಿ ಧಾಮದ ಪ್ರಕೃತಿ ನಿರೂಪಣಾ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿದ ಅವರು ಮಾತನಾಡಿದರು.
ಮಾನವನ ಜೊತೆ ಆನೆ ಮತ್ತು ವನ್ಯಜೀವಿಗಳ ಸಂಘರ್ಷಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ 6395 ಆನೆಗಳಿದ್ದು, ದೇಶದಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಅವುಗಳ ದಾಳಿ ತಡೆಗಟ್ಟಲು 641 ಕಿಮೀ.ನಲ್ಲಿ 310 ಕಿಮೀನಷ್ಟು ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಬ್ಯಾರಿಕೇಡ್ ನಿರ್ಮಾಣಕ್ಕೆ ಅಗತ್ಯ ಅನುದಾನವನ್ನು ನೀಡುವ ಕುರಿತು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಜೊತೆಗೆ ಆನೆ ಕಂದಕ, ಸೋಲಾರ್ ಬೇಲಿ ವ್ಯವಸ್ಥೆ ಹಾಗೂ ಕಾರ್ಯಪಡೆಗೆ ಹೆಚ್ಚುವರಿ ಎರಡು ತಂಡವನ್ನು ಒದಗಿಸಿರುವೆ. ಸಂಘರ್ಷದಲ್ಲಿ ಯಾವುದೇ ರೀತಿಯ ಹಾನಿಯಾಗದಂತೆ ತಡೆಗಟ್ಟಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪ್ರಾಣಿಗಳಿಗೆ ಅಗತ್ಯ ಆಹಾರ, ನೀರನ್ನು ಅವುಗಳ ಜಾಗದಲ್ಲಿಯೇ ಒದಗಿಸುವ ಮೂಲಕ ಪ್ರಾಣಿಗಳು ಜನವಸತಿ ಪ್ರದೇಶಕ್ಕೆ ದಾಳಿ ಮಾಡುವುದನ್ನು ತಡೆಗಟ್ಟಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜೊತೆಗೆ ಚಿರತೆ, ಹುಲಿ ಮತ್ತು ಕರಡಿ ದಾಳಿ ತಪ್ಪಿಸಲು ಜನಜಾಗೃತಿ ಮಾಡುವ ಕಾರ್ಯಕ್ರಮ ಸಹ ರೂಪಿಸಲಾಗುತ್ತದೆ ಎಂದರು.

ಐದು ಕೋಟಿ ಸಸಿ ಕಾರ್ಯಕ್ರಮ ತೃಪ್ತಿಕರ: ಐದುಕೋಟಿ ಸಸಿ ನೆಡುವ ಕಾರ್ಯಕ್ರಮ ಈ ಭಾಗದಲ್ಲಿ ಯಶಸ್ವಿಯಾಗಿದ್ದು, ತೃಪ್ತಿಕರವಾಗಿದೆ. ನೂತನ ವಿಜಯನಗರ ಜಿಲ್ಲೆ ಸಂಪತ್ಭರಿತವಾಗಿದ್ದು, ಶ್ರೀಮಂತವಾದ ಅರಣ್ಯ ಪ್ರದೇಶವಾಗಿದ್ದು, ಅರಣ್ಯಾಭಿವೃದ್ಧಿ ಸೇರಿದಂತೆ ಜೈವಿಕ ಉದ್ಯಾನವನದ ಅಭಿವೃದ್ಧಿಗೂ ಸ್ಥಳೀಯ ಶಾಸಕರು ಪ್ರಸ್ತಾವನೆ ನೀಡಿದ್ದಾರೆ. ಅರಣ್ಯ ಇಲಾಖೆ ವತಿಯಿಂದ ಅಗತ್ಯ ಸೌಲಭ್ಯ ಒದಗಿಸಲಾಗುವುದು ಎಂದರು.

ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಅರಣ್ಯ ಮತ್ತು ಪರಿಸರ ಇಲಾಖೆ ಇಲಾಖೆಗೆ ಸಂಬAಧಿಸಿದAತೆ ಸಭೆ ಕೈಗೊಂಡು ಈ ಭಾಗದಲ್ಲಿ ಅಕ್ರಮ ಗಣಿಗಾರಿಕೆ, ಮರ ಕಡಿತ ಹಾಗೂ ಅರಣ್ಯ ಒತ್ತುವರಿ ತೆರವಿಗೆ ಸಂಬAಧಿಸಿದAತೆ ಸೂಚನೆ ನೀಡಲಾಗುತ್ತದೆ ಎಂದರು.
ಸಭೆಯ ಆರಂಭಕ್ಕೂ ಮುನ್ನ ಪ್ರಕೃತಿ ನಿರೂಪಣಾ ಕೇಂದ್ರದ ಆವರಣದಲ್ಲಿ ಗಿಡ ನೆಟ್ಟು ನೀರೆರೆದರು. ನಂತರ ಕೇಂದ್ರದಲ್ಲಿರುವ ದರೋಜಿ ಕರಡಿ ಧಾಮಕ್ಕೆ ಸಂಬಂಧಿಸಿದ ಮಾಹಿತಿ ಕೇಂದ್ರಕ್ಕೆ ಭೇಟಿ ನೀಡಿ ಅತ್ಯಾಧುನಿಕ ಮಾಹಿತಿ ಸೌಲಭ್ಯವನ್ನು ಪರಿಶೀಲಿಸಿದರು. ನಂತರ ಅಧಿಕಾರಿಗಳ ಜೊತೆ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಶಾಸಕ ಎಚ್.ಆರ್.ಗವಿಯಪ್ಪ, ಬಳ್ಳಾರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್, ಬಳ್ಳಾರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಸೂರ್ಯವಂಶಿ, ವಿಜಯನಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅರ್ಸಲನ್ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *