
ಕೂಡ್ಲಿಗಿ: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ , ಕರ್ನಾಟಕ ಮತ್ತು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ( ನಿ) ಇವರ ಸಹಯೋಗದಲ್ಲಿ ದಿ. ೨೬-೯-೨೩ ರಂದು ” ಕಾಲುಬಾಯಿ ರೋಗ ಲಸಿಕಾ ಅಭಿಯಾನ ಕಾರ್ಯಕ್ರಮವನ್ನು ಶಾಸಕರಾದ ಡಾ. ಶ್ರೀನಿವಾಸ್ ಎನ್. ಟಿ. ಅವರು ಕೂಡ್ಲಿಗಿ ತಾಲೂಕಿನ ನರಸಿಂಹಗಿರಿ ಗ್ರಾಮದ ಪಶುಪಾಲನೆ ಆಸ್ಪತ್ರೆ ಆವರಣದಲ್ಲಿ ಉದ್ಘಾಟಿಸಿ ಮಾತನಾಡಿದರು.
ಶಾಸಕರು ಆಕಳುಗಳಿಗೆ ಪೂಜೆ ಮಾಡಿ ನಂತರ ತಾಲೂಕಿನಾಧ್ಯಂತ ಪಶುಪಾಲನೆ ಆರೋಗ್ಯಕ್ಕೆ ಒತ್ತು ನೀಡಲು ತಿಳಿಸಿದರು. ಪಶುಪಾಲನೆ ಭಾಗವಾದ ಆಕಳು ಎತ್ತು, ಎಮ್ಮೆ, ಕುರಿ, ಮೇಕೆ, ಆರೋಗ್ಯದ ಸಮಸ್ಯೆ ಕಂಡುಬಂದ ವೇಳೆ ತಾಲೂಕಿನ ರೈತರು ಪೋನ್ ಮಾಡಿದಾಗ ವೈದ್ಯಕೀಯ ತಂಡ ತಕ್ಷಣ ಭೇಟಿ ನೀಡಿ ಆರೋಗ್ಯ ಕಡೆ ಗಮನ ಕೊಡುವ ಮೂಲಕ ಶ್ರಮಿಸಬೇಕು ಎಂದರು.

ಕೂಡ್ಲಿಗಿ ತಾಲೂಕಿನ ವೈದ್ಯರ ಸಿಬ್ಬಂದಿ, ಔಷಧಿ ಗುಣಮಟ್ಟ, ವೈದ್ಯಕೀಯ ಸೇವೆ, ಲಸಿಕೆ ವಿಧಾನ, ಆಸ್ಪತ್ರೆ ಕಟ್ಟಡಗಳ ಸ್ಥಿತಿ ಹಾಗೂ ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನ ಕಾರ್ಯ ನಿರ್ವಹಣೆ ಇತ್ಯಾದಿ ಮಾಹಿತಿ ಪಡೆದುಕೊಂಡರು. ಕುರುಚಲು ಕಾಡಿನ ಪಶುಪಾಲನೆ ಸಂರಕ್ಷಣೆಗೆ ಒತ್ತು ನೀಡಲು ಶಾಸಕರು ಸೂಚಿಸಿದರು. ಡಾ ಮಂಜುಶ್ರೀ ಪಶುವೈದ್ಯಾಧಿಕಾರಿಗಳು ಹಿರಿಗುಂಬಳಗುಂಟೆ
ಡಾ ಇಸ್ಮಾಯಿಲ್ ಜಬೀಉಲ್ಲ ಎಪಶುವೈದ್ಯಾಧಿಕಾರಿಗಳು ಚಿರತಗುಂಡು ಡಾ. ಲೋಹಿತ್ ಸಹಾಯಕ ನಿರ್ದೇಶಕರು ಪಶು ಆಸ್ಪತ್ರೆ ಕೂಡ್ಲಿಗಿಹಾಜರಿದ್ದರು.
ಪೋಟೋ ಕ್ಯಾಪಷ್ಯನ್
೨೬ಕೆಡಿಎಲ್:೧ ತಾಲೂಕಿನ ನರಸಿಂಹಗಿರಿ ಗ್ರಾಮದ ಪಶುಪಾಲನೆ ಆಸ್ಪತ್ರೆ ಆವರಣದಲ್ಲಿ ಕಾಲುಬಾಯಿ ರೋಗ ಲಸಿಕಾ ಅಭಿಯಾನ ಕಾರ್ಯಕ್ರಮವನ್ನು ಶಾಸಕರಾದ ಡಾ. ಶ್ರೀನಿವಾಸ್ ಎನ್. ಟಿ. ಉದ್ಘಾಟಿಸಿ ಮಾತನಾಡಿದರು.