ಜಿಲ್ಲಾ ಮಟ್ಟದ ಎಪಿಎಂಸಿ ಟಾಸ್ಕ್‌ಫೋರ್ಸ್ ಸಮಿತಿ ಸಭೆರೈತರ ಖಾತೆಗೆ ನೇರವಾಗಿ ಹಣ ಜಮೆಯಾಗಲಿ; ಡಿಸಿ ದಿವಾಕರ ಎಂ.ಎಸ್

Loading

ಹೊಸಪೇಟೆ(ವಿಜಯನಗರ): 2023-24ನೇ ಸಾಲಿಗೆ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ ಉತ್ಪನ್ನ ಖರೀದಿಗಾಗಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸುವ ಕುರಿತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿಯಲ್ಲಿ ಎಕರೆಗೆ 3 ಕ್ವಿಂಟಾಲ್‌ನಂತೆ ರೈತರಿಂದ ಗರಿಷ್ಟ 15 ಕ್ವಿಂಟಲ್‌ರAತೆ ಜಿಲ್ಲೆಯಲ್ಲಿ ಕೇಂದ್ರಗಳನ್ನು ಪ್ರಾರಂಭಿಸಲು ತಿರ್ಮಾನಿಸಲಾಯಿತು.
ಹೂವಿನಹಡಗಲಿಯ ಇಟ್ಟಿಗಿ, ಹರಪನಹಳ್ಳಿಯ ನಂದಿಬೇವೂರು, ಹಗರಿಬೊಮ್ಮನಹಳ್ಳಿ ಉಪನಾಯಕನಹಳ್ಳಿ, ಬಾಚಿಗೊಂಡನಹಳ್ಳಿ, ತಂಬ್ರಹಳ್ಳಿ, ಕೂಡ್ಲಿಗಿಯ ಹುರುಳಿಹಾಳು, ಕೊಟ್ಟೂರು ಕೋಗಳಿ ಕೇಂದ್ರಗಳಿಗೆ ಎಪಿಎಂಸಿ ಮೂಲಕ ಮೂಲಭೂತ ಸೌಕರ್ಯ ಒದಗಿಸಲು ಸೂಚಿಸಿದರು. ರೈತರ ಖಾತೆಗೆ ನೇರ ವರ್ಗಾವಣೆ ಆಗದಿದ್ದಲ್ಲಿ ಕ್ರಿಮಿನಲ್ ಕೇಸ್ ದಾಖಸಿಲಾಗುತ್ತದೆ. ಫ್ರೂಟ್ಸ್ ಐಡಿ ನೋಂದಣಿ ಆಗಿರಲು ಪರಿಶೀಲಿಸಬೇಕು. ಕಂದಾಯ ಹಣ ಹಾಗೂ ವಿಳಾಸ, ದಾಖಲೆ ಸರಿಯಾಗಿ ಇರಬೇಕು. 54 ಲಕ್ಷ ಫ್ರೂಟ್ಸ್ ಲಿಂಕ್ ಖಾತೆಗೆ ಹಾಕಬೇಕು. ಈಗಿದ್ದಾಗ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಕೆಓಎಫ್ ಸಂಸ್ಥೆಗೆ ಸೂಚಿಸಿದರು.
ಖರೀದಿ ಕೇಂದ್ರಗಳ ನೋಡೆಲ್ ಅಧಿಕಾರಿಗಳ ಹೆಸರು, ಹುದ್ದೆ, ಮೊಬೈಲ್ ಸಂಖ್ಯೆ
ಹೂವಿನಹಡಗಲಿ ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ತಿಮ್ಮಪ್ಪನಾಯಕ ಮೊ.9606820100, ಹರಪನಹಳ್ಳಿ ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಶಿಲ್ಪಾ ಮೊ.9513356133, ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಎನ್.ಶೈಲಾ ಮೊ.8867156847, ಕೂಡ್ಲಿಗಿ ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಭಾರ ಕಾರ್ಯದರ್ಶಿ ಬಸವರಾಜ ಮೊ.7259494547, ಕೊಟ್ಟೂರು ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಮೊ.9845781537.
ಪ್ರತಿ ಎಕರೆಗೆ ಗರಿಷ್ಟ 3 ಕ್ವಿಂಟಾಲ್‌ರAತೆ ಪ್ರತಿ ರೈತರಿಂದ ಗರಿಷ್ಟ 15 ಕ್ವಿಂಟಾಲ್ ಸೂರ್ಯಕಾಂತಿ ಉತ್ಪನ್ನವನ್ನು ಖರೀದಿಸಲಾಗುತ್ತದೆ. ಎಫ್.ಎ.ಕ್ಯೂ. ಗುಣಮಟ್ಟದ ಸೂರ್ಯಕಾಂತಿಯನ್ನು ಮಾತ್ರ ಖರೀದಿಸಲಾಗುತ್ತದೆ. ಕರ್ನಾಟಕ ರಾಜ್ಯ ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ ಚಿತ್ರದುರ್ಗ ವೀಭಾಗೀಯ ಕಚೇರಿ ಹೊಸಪೇಟೆ ಮೊ.8073797774 ಗೆ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.

Leave a Reply

Your email address will not be published. Required fields are marked *