
ಕಮಲಾಪುರ : ಪಟ್ಟಣದ ಜಿಲ್ಲಾ ಮದಕರಿ ನಾಯಕ ವಿದ್ಯಾಸಂಸ್ಥೆ (ರಿ ) ಚಿತ್ರದುರ್ಗ ಶ್ರೀ ಹಂಪಿ ವಿರುಪಾಕ್ಷೇಶ್ವರ ಸ್ವಾಮಿ ಪದವಿ ಮಹಾವಿದ್ಯಾಲಯ. ವಿದ್ಯಾರಣ್ಯ ಹಂಪಿ. ಕಮಲಾಪುರ ಕಾಲೇಜಿನಲ್ಲಿ ದಿನಾಂಕ 08/09/2023 ರಂದು ನಡೆದ ಗುರುವಂದನಾ ಮತ್ತು ಪ್ರಥಮ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.
ಉದ್ಘಾಟನೆ ಯನ್ನು ಶ್ರೀ ಮತಿ ಕಮಲಾ ಗುಮಸ್ತೆ ಅಧ್ಯಕ್ಷರು ಕಿರ್ಲೋಸ್ಕರ್ ಲೇಡಿಸ್ ಕ್ಲಬ್ ಹಾಗೂ ಮಾಜಿ ಅಧ್ಯಕ್ಷರು ರೋಟರಿ ಕ್ಲಬ್ ಹೊಸಪೇಟೆ ಇವರು ನೆರವೇರಿಸಿದರು ಪರಿಸರ ಸಂರಕ್ಷಣಾ ಬಗ್ಗೆ ಮಾತನಾಡಿ ಎಲ್ಲರೂ ಪರಿಸರ ಸಂರಕ್ಷಣೆ ಮಾಡಬೇಕು.ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕಾದರೆ ಮೊದಲು ವಿಷಯವನ್ನು ಗ್ರಹಿಸಬೇಕು ಮತ್ತು ಶ್ರದ್ಧೆ ಸಮಯ ಪಾಲನೆ ಹಾಗೂ ಬೇರೆಯವರಿಗೆ ನೀಡುವ ಗೌರವ ಇವುಗಳು ನಮ್ಮ ಜ್ಞಾನವನ್ನು ತೋರುತ್ತದೆ. ಜೀವನದಲ್ಲಿ ಒಂದು ಗುರಿ ಮುಖ್ಯ ಆ ಗುರಿ ತಲುಪಬೇಕಾದರೆ ಒಬ್ಬ ಗುರುವಿನ ಸನ್ಮಾರ್ಗದಲ್ಲಿ ತಲುಪಬೇಕು.

ಈ ಕಾರ್ಯಕ್ರಮ ದ ಅಧ್ಯಕ್ಷತೆ ಯನ್ನು ಮಾನ್ಯ ಶ್ರೀ ಯುತ ಬಸವರಾಜ್ ಎಮ್ಮಿಗನೂರು. ಪ್ರಾಂಶುಪಾಲರು ಶ್ರೀ ಹಂಪಿ ವಿರುಪಾಕ್ಷೇಶ್ವರ ಸ್ವಾಮಿ ಪದವಿ ಮಹಾವಿದ್ಯಾಲಯ. ವಿದ್ಯಾರಣ್ಯ ಹಂಪಿ.ಅವರು ವಹಿಸಿಕೊಂಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಮತಿ ಎಂ. ಜ್ಯೋತಿ ಉಪನ್ಯಾಸಕರು ಸಂಗೀತ ಮತ್ತು ನೃತ್ಯ ಕಲಾ ವಿಭಾಗ ಹಂಪಿ ಕನ್ನಡ ವಿಶ್ವವಿದ್ಯಾಲಯ ಹಂಪಿ ಇವರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಸಹನೆ ಬಹಳ ಮುಖ್ಯವಾಗಿದೆ ಪ್ರಸ್ತುತ ವಿದ್ಯಾರ್ಥಿಗಳಲ್ಲಿ ಇದರ ಕೊರತೆ ಇದ್ದು ಎಲ್ಲರೂ ಇದರ ಕಡೆ ಗಮನ ವಹಿಸಬೇಕು ಮತ್ತು ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಸನ್ಮಾರ್ಗದಲ್ಲಿ ಅವರಂತೆ ಜ್ಞಾನಪಡೆಯಬೇಕು ಹಾಗೂ ಉತ್ತಮ ಜೀವನಶೈಲವನ್ನು ವೃದ್ಧಿಸಿಕೊಳ್ಳಬೇಕೆಂದು ತಮ್ಮದೇ ಆದ ಶೈಲಿಯಲ್ಲಿ ತಿಳಿ ಪಡಿಸಿದರು .
ಹಾಗೂ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೆ ಬಾಬು ರಾಜೇಂದ್ರ ಪ್ರಸಾದ್ ಪ್ರಧ್ಯಾಪಕರು ಶಂಕರ ಆನಂದ್ ಸಿಂಗ್ ಕಾಲೇಜ್ ಹೊಸಪೇಟೆ. ಶ್ರೀ ಯುತ ದೇವೇಂದ್ರಪ್ಪ ರೆಡ್ ಕ್ರಾಸ್ ಜಿಲ್ಲಾ ಸಂಯೋಜಕರು ಕೊಪ್ಪಳ ಮತ್ತು ಕಾಲೇಜಿನ ಡಾ. ಸುರೇಂದ್ರ ಮಾನೇಮಿ ಸಂಯೋಜನಾಧಿಕಾರಿ ಸಾಂಸ್ಕೃತಿಕ ವಿಭಾಗ ಮುಖ್ಯಸ್ಥರು ಅರ್ಥಶಾಸ್ತ್ರ ವಿಭಾಗ ಭಾಗವಹಿಸಿದ್ದರು

ಉಪಸ್ಥಿತಿ ಶ್ರೀ ಮತಿ ಕೆ ವೀಣಾ ಇಂಗ್ಲಿಷ್ ಪ್ರಾಧ್ಯಾಪಕರು. ಕರಿಬಸವ ಗೌಡ್ರು ವಿಶ್ವನಾಥ್ ಗಂಗಮ್ಮ ಶಶಿಧರ್ ಹನುಮಂತರಾಯ ವೆಂಕಟೇಶ್ ಮುರುಗೇಶ್ ವಿಶ್ವನಾಥ್ ಕಾಲೇಜಿನ ಬೋಧಕರು ಬೋಧಕೇತರರು ಉಪಸ್ಥಿತರಿದ್ದರು ಹಾಗೂ ಕಾರ್ಯಕ್ರಮದ ಪ್ರಾರ್ಥನೆ ಯನ್ನು ರೂಪ ನೆರವೇರಿಸಿ ಕೊಟ್ಟರು ನಿರೂಪಣೆಯನ್ನು ಅಂಜಲಿ . ಮಂಜುನಾಥ್ ವಂದನಾರ್ಪಣೆ ಗೀತಾಂಜಲಿ .ವಿದ್ಯಾರ್ಥಿನಿ ಮಾಡಿದರು ಮತ್ತು ವಿದ್ಯಾರ್ಥಿ ಬಳಗ ಉಪಸ್ಥಿತರಿದ್ದರು
