
ಕಾರಟಗಿ :-ಭಾ.ಜ.ಪ ಕಾರ್ಯಾಲಯದಲ್ಲಿ ದಿನಾಂಕ 08-09-2023 ರಂದು ರೈತ ವಿರೋಧಿಯಾದ ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ಧ ರಾಜ್ಯಾಂದಂತ ನಡೆಯುವ ಬೃಹತ್ ಪ್ರತಿಭಟನೆ ಕುರಿತು ಪೂರ್ವಭಾವಿ ಸಭೆ ನಡೆಸಲಾಯಿತು. ಈ ಪ್ರತಿಭಟನೆಯ ಕುರಿತು ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರಾದ ಲಂಕೇಶ್ ಗುಳದಾಳ ರವರು ಮಾತನಾಡಿದರು ಹಾಗೂ ಕಾರಟಗಿ ನಗರದಲ್ಲಿ ಪ್ರತಿಭಟನೆ ಮಾಡಲು ತಿಳಿಸಿದರು. ಈ ಸಂದರ್ಭದಲ್ಲಿ
*ಕಾರಟಗಿ ಮಂಡಲ ಅಧ್ಯಕ್ಷರಾದ ಚಂದ್ರಶೇಖರ್ ಮುಸಾಲಿ, ಮಂಡಲ ಪ್ರಧಾನ ಕಾರ್ಯಧರ್ಶಿ ಮಂಜುನಾಥ್ ಮಸ್ಕಿ, ಜಿಲ್ಲಾ ರೈತ ಮೋರ್ಚ ಪ್ರಧಾನ ಕಾರ್ಯಧರ್ಶಿ ಮಲ್ಲನಗೌಡ ಸಿದ್ದಾಪುರ, ಜಿಲ್ಲಾ ಯುವ ಮೋರ್ಚ ಉಪಾಧ್ಯಕ್ಷರಾದ ಮೌನೇಶ ಧಡೇಸುಗೂರು, ಕಾರಟಗಿ ಮಂಡಲ ರೈತ ಮೋರ್ಚ ಪ್ರಧಾನ ಕಾರ್ಯಧರ್ಶಿ ಶರಣಪ್ಪ ಶಿವಪೂಜಿ, ಶಕ್ತಿಕೇಂದ್ರ ಅಧ್ಯಕ್ಷರಾ ವೀರಭದ್ರಪ್ಪ ಕೂಡ್ಲೂರು & ಪಿ.ಪಿ. ಬಸಣ್ಣ, ವಿರುಪಾಕ್ಷಿ ತಿಮ್ಮಾಪುರು, ಸೋಮನಾಥ ಉಡಮಕಲ್, ಹನುಮಂತ ಹಗೇದಾಳ, ಹಾಗೂ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.