ಕೊಪ್ಪಳ : ಹಲವಾರು ಜಿಲ್ಲೆಗಳಲ್ಲಿ ಇಲ್ಲಿವರೆಗೂ ಮುಂಗಾರು ಮಳೆ ಇಲ್ಲದೇ ರೈತರು ಈಗಾಗಲೇ ಕಂಗಾಲಾಗಿದ್ದಾರೆ
ಸರ್ಕಾರ ಶೀಘ್ರದಲ್ಲಿ ಬರಪೀಡಿತ ಜಿಲ್ಲೆಗಳನ್ನಾಗಿ ಘೋಷಣೆ: ಮಾಡಬೇಕು.

ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಳೆ ನೋಡಿಕೊಂಡು ಬರ ಘೋಷಣೆ ಮಾಡುತ್ತೇವೆ ಎಂದು ಭರವಸೆ ನೀಡುತ್ತಾ ಮೂರು ತಿಂಗಳ ಕಳೆದರೂ ಸಹ ಇಲ್ಲಿವರೆಗೂ ಉತ್ತರ ಕರ್ನಾಟಕದಲ್ಲಿ ಬರ ಘೋಷಣೆ ಮಾಡಲಿಲ್ಲ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಜುಲೈ 10ರ ನಂತರ ಬರ ಘೋಷಣೆ ಮಾಡುತ್ತೇವೆ ಅಂತ ವಿಧಾನ ಸೌಧದಲ್ಲಿ ಭರವಸೆ ನೀಡಿದರು ಪುನಃ ಜುಲೈ 15ರ ನಂತರ ಬರ ಘೋಷಣೆ ಮಾಡುತ್ತೇವೆ ಅಂತ ಭರವಸೆ ಸುಳ್ಳು ಭರವಸೆ ಹೇಳುತ್ತಾ ಕಾಲಹರಣ ಮಾಡುತ್ತಾಬರುತ್ತಾರೆ ರಾಜ್ಯದ ರೈತರು ಸಾಲ ಸೂಲ ಮಾಡಿ ಬೆಳೆ ಕಳೆದುಕೊಂಡು ರೈತರಿಗೆ ಇಗ ಆತ್ಮಕ್ಕೆ ಮಾಡಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ ಸರ್ಕಾರ 5 ಗ್ಯಾರಂಟಿ ಯೋಜನೆಯಲ್ಲಿ ತೊಡಗಿದ್ದಾರೆ ರಾಜ್ಯದಲ್ಲಿ ರೈತ ಮಹಿಳೆಯರು ಬಸ್ ಉಚಿತ ಮಾಡಿದ ಮೇಲೆ ಹೊಲದ ಕೆಲಸವನ್ನು ಬಿಟ್ಟು ಆಧಾರ್ ಕಾರ್ಡ್ ಹಿಡಿದುಕೊಂಡು ಬಸಿನಲ್ಲಿ ಓಡಾಡುತ್ತಿದ್ದಾರೆ ಇಲ್ಲಿರುವ ಗಂಡ ಮಕ್ಕಳಿಗೆ ಊಟ ಇಲ್ಲದೇ ಹೊಲದ ಕೆಲಸವನ್ನು ಬಿಟ್ಟು ಮಕ್ಕಳನ್ನು ಊಟ ತಿಂಡಿ ಮಾಡಿಸಿ ಶಾಲೆಗೆ ಕಳಿಸುವಂತೆ ಪರಿಸ್ಥಿತಿ ಗಂಡಂದಿರಿಗೆ ಎದುರಾಗಿದೆ ಸರ್ಕಾರ ಕೂಡಲೇ ಆಧಾರ್ ಕಾರ್ಡ್ ಹಿಡಿದುಕೊಂಡು ಹೊಗುವಂತ ಮಹಿಳೆಯರಿಗೆ ಬಸ್ ಉಚಿತ ಪ್ರಯಾಣವನ್ನು ರದ್ದು ಮಾಡಿ ಸಾರಿಗೆ ಸಂಸ್ಥೆ ಬಸಿಗೆ ಹಣವನ್ನು ಕಟ್ಟುವಂತ ಹಣವನ್ನು ರಾಜ್ಯದ ರೈತರಿಗೆ ಬರ ಪರಿಹಾರಕ್ಕಾಗಿ ಜೋತೆಗೆ ರೈತರ ಸಾಲ ಮನ್ನಾ ಮಾಡುವುದಕ್ಕಾಗಿ ಮಾಡಿದರೆ ರಾಜ್ಯದ ರೈತರಿಗೆ ಇನ್ನಷ್ಟು ಅನುಕೂಲ ಆಗುತ್ತದೆ ಈಗ ರಾಜ್ಯದಲ್ಲಿ ರೈತರಿಗೆ ಬರದ ಛಾಯಾ ಎದುರಾಗಿದೆ ಈಗಾಗಲೇ ರೈತರು ಬರ ಪರಿಹಾರ ಹಾಕುವ ಸಲುವಾಗಿ ರೈತರು ವಿವಿಧ ಜಿಲ್ಲೆಗಳಲ್ಲಿ ಹೋರಾಟವನ್ನು ಮಾಡುತ್ತಿದ್ದಾರೆ ಕೆಲವು ರೈತರು ಹತ್ತಿರದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ ಹಲವು ರೀತಿಯಲ್ಲಿ ಜನಪ್ರತಿನಿಧಿಗಳು ಪತ್ರಿಕೆ ಟಿವಿ ಮಾಧ್ಯಮದಲ್ಲಿ ನೊಡುತ್ತಿದ್ದಿರಿ ನೋಡಿದರು ಕೂಡ ತಾವುಗಳು ಜಾಣ ಕುರುಡರಂತೆ ಕುಳಿತರೆ ಹಳ್ಳಿಯ ರೈತರು ಆತ್ಮಹತ್ಯೆಗೆ ಒಳಗಾಗುತ್ತಾರೆ ಸರ್ಕಾರದ ಮುಖ್ಯಮಂತ್ರಿಗಳು ಜನಪ್ರತಿನಿಧಿಗಳು ಅಧಿಕಾರಿಗಳು ಶೀಘ್ರದಲ್ಲಿ ಬರ ಘೋಷಣೆ ಮಾಡಿರಿ ರೈತರಿಗೆ ಬರ ಪರಿಹಾರವನ್ನು ಹಾಕುವಂತ ಕೆಲಸವನ್ನು ಈ ಸರ್ಕಾರ ಮಾಡಬೇಕು ಎಂದು ರೈತರ ಹಕ್ಕು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ರುದ್ರಪ್ಪ ಕೋಳೂರ ಇವರು ಆಗ್ರಸಿದರು.
ಈ ವೇಳೆಯಲ್ಲಿ ರಾಜ್ಯದ ರೈತರು ಲಕ್ಷಾಂತರ ಹಣ ಖರ್ಚು ಮಾಡಿ ಈರಳಿ ಮೆಕ್ಕೆಜೋಳ ಇತರೇ ಬೆಳೆಗಳನ್ನು ಬಿತ್ತನೆ ಮಾಡಿದ್ದು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ರೈತರು ಬಿತ್ತನೆ ಮಾಡಿದ ಬೆಳೆಗಳನ್ನು ತಮ್ಮ ಕೈಯಾರೆ ಹರಗಿ ಹಾಳುಮಾಡಿದ್ದಾರೆ.
ಕೆಲವು ರೈತರು ಸಾಲ ಮಾಡಿ ಬಿತ್ತನೆ ಮಾಡಿದ ಬೆಳೆಗಳು ನಾಟಿ ಆಗದೇ ಕಂಗಾಲಾಗಿದ್ದಾರೆ
ಅದಕ್ಕಾಗಿ ಸರ್ಕಾರ ಬರ ಘೋಷಣೆ ಮಾಡಿರಿ ರೈತರಿಗೆ ಒಂದು ಎಕರೆಗೆ 25ರಿಂದ30ಸಾವಿರ ರೂಪಾಯಿ
ಬರ ಪರಿಹಾರ ಕೊಡಬೇಕೆಂದು ರೈತರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಪದಾಧಿಕಾರಿಗಳಾದ ರಾಜ್ಯ ಕಾರ್ಯಧ್ಯಕ್ಷ ನಾಗರಾಜ ಗೋನಾಳ.ಕೊಪ್ಪಳ ಜಿಲ್ಲಾಧ್ಯಕ್ಷ ಬಸವರಾಜ ಹೂಗಾರ.ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್ ಬಾಬರಿ.ಗ್ರಾಮಘಕದ ಅಧ್ಯಕ್ಷ ಬಸಪ್ಪ ಕಮತರ. ರವಿ ಹೊಸಮನಿ.ದೇವರಾಜ ಮಡಿವಾಳ.ರವಿ ಕಮತರ.ಚನ್ನಪ್ಪ ನಾಲವಾಡ.ದೇವರಡ್ಡೆಪ್ಪ ಮುಂಡರಗಿ.ಶರಣಪ್ಪ ಹಿರೇವಳಿ.ಸಿದ್ನಕೊಪ್ಪ ಗ್ರಾಮಘಟಕದ ಅಧ್ಯಕ್ಷ ಶಿವನಂದಯ್ಯ ಕೋಡಿಕೊಪ್ಪ.ಮಾರುತಿ ನೆರಗಲ್ಲ್. ಶರಣಪ್ಪ ಜೋಗಿನ್. ಗಿರೀಶ ಗುಡ್ಲಾನೂರ್.ಮಾರುತಿ ಪೂಜಾರ.ಸಣ್ಣಯಲ್ಪಪ್ಪ ಜೋಗಿನ. ವೆಂಕಟೇಶ ಇತರರು ಆಗ್ರಹಿಸಿದರು.
