ಕರ್ನಾಟಕ ರಾಜ್ಯದ ಸುಧೀರ್ಘ ಅವಧಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಪಡೆದಿದ್ದ ದೇವರಾಜ ಅರಸರು ಮೈಸೂರು ಜಿಲ್ಲೆಯ ಹುಣಸೂರು ತಾಲೂಕು ಕಲ್ಲಹಳ್ಳಿಯ ಜಮೀನ್ದಾರ ವಂಶದ ದೇವಿಯರಸ ಮತ್ತು ದೇವಿರಮ್ಮಣ್ಣಿದಂಪತಿಗಳ ಪುತ್ರರಾಗಿ 20ಆಗಸ್ಟ್1915ರಲ್ಲಿ ಜನಿಸಿದರು.
ಅರಸು ಸಮುದಾಯದ ಇವರ ಕುಟುಂಬ ಮೈಸೂರು ಒಡೆಯರಿಗೆ ದೂರದ ಸಂಬಂಧ ಹೊಂದಿತ್ತು ಸಾಕಷ್ಟು ಸ್ಥಿತಿವಂತರಾಗಿದ್ದರಿಂದ ಬಿಎಸ್ ಸಿ ವರೆಗೆ ಉನ್ನತ ವ್ಯಾಸಂಗ ದೊರೆಯಿತು 1952 ರಲ್ಲಿ ಹುಣಸೂರು ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿ ಜಯಸಾಧಿಸಿದರು 1969ರಲ್ಲಿ ಕಾಂಗ್ರೆಸ್ ಇಬ್ಭಾಗವಾದಾಗ ಇಂದ್ರಾಜಿ ಪರ ನಿಂತರು 1971ರ ಲೋಕಸಭಾ ಚುನಾವಣೆಯಲ್ಲಿ 27 ಸ್ಥಾನಗಳನ್ನು ಅರಸು ಗಳಿಸುವಲ್ಲಿ ಯಶಸ್ವಿಯಾದರು 28 ಫೆಬ್ರವರಿ 1972 ರಲ್ಲಿ ಜರುಗಿದ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಸಾಧಿಸಿ ಅರಸು ಮುಖ್ಯಮಂತ್ರಿಯಾದರು 1 ನವೆಂಬರ್1973 ರಂದು ರಾಜ್ಯಕ್ಕೆ ಕರ್ನಾಟಕವೆಂದು ಮರುನಾಮಕರಣ ಮಾಡಿದರು ಮತ್ತೆ 78 ರಿಂದ 80ರ ವರೆಗೆ ಮುಖ್ಯಮಂತ್ರಿಯಾದರು ಹಿಂದುಳಿದ ವರ್ಗದ ಆಯೋಗ ರಚನೆ, ಮಾಲಿನ್ಯ ನಿಯಂತ್ರಣ ಮಂಡಳಿ, ಭಾಗ್ಯಜ್ಯೋತಿ, ಜೀತ ಪದ್ಧತಿ ವಿರೋಧ, ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಇಲಾಖೆ, ಅಂಗವಿಕಲರಿಗೆ ಮಾಶಾಸನ, ಭೂ ಅಭಿವೃದ್ಧಿ ಬ್ಯಾಂಕ್ ಸ್ಥಾಪನೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಉಳುವವನೇ ಭೂ ಒಡೆಯ, ಸಾರಿಗೆ ಬಸ್ ರಾಷ್ಟ್ರೀಕರಣಮುಂತಾದ ಜನಪರ ಯೋಜನೆಗಳಿಂದ ಅರಸು ಕನ್ನಡಿಗರ ಜನಮನ ಗೆದ್ದು 6ಜೂನ್ 1982ರಂದು ನಿಧನರಾದರು.
