ವಿಜಯನಗರ (ಹೊಸಪೇಟೆ) : ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ (ರಿ), ವಿಜಯನಗರ ಜಿಲ್ಲಾ ಘಟಕದ ವತಿಯಿಂದ ನಗರದ ಪಿ ಡಿ ಐ ಟಿ, ಬಿ.ಎಡ್ ಕಾಲೇಜ್ ನಲ್ಲಿ ಹಮ್ಮಿಕೊಳ್ಳಲಾದ 24ನೇ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದ ಅಂಗವಾಗಿ ಬೈಕ್ ರ್ಯಾಲಿ ಮತ್ತು ಪರಮವೀರ ಚಕ್ರ ಯೋಧರಿಗೆ ಗೌರವಪೂರ್ವ ನಮನವನ್ನು ಸಲ್ಲಿಸಲಾಯಿತು. ಈ ಕಾರ್ಯಕ್ರಮದಲ್ಲಿ ವಿಜಯನಗರದ ಜನಪ್ರಿಯ ಶಾಸಕರಾದ ಹೆಚ್ ಆರ್ ಗವಿಯಪ್ಪನವರು ಪಾಲ್ಗೊಂಡು ವೀರಯೋದರಿಗೆ ಮೌನ ನಮನಗಳನ್ನು ಸಲ್ಲಿಸಿ ಸೈನಿಕರಿಗೆ ಸ್ಪೂರ್ತಿದಾಯಕ ನುಡಿಗಳನ್ನು ಮಾಡಿ ಮುಂಬರುವ ದಿನಗಳಲ್ಲಿ ದೇಶಕ್ಕೆ ಒಳಿತಾಗುವಂತಹ ಯೋಜನೆಯನ್ನು ನೀಡುವುದಾಗಿ ತಿಳಿಸಿದರು,
ಈ ಸಂದರ್ಭದಲ್ಲಿ ಕಾರ್ಗಿಲ್ ಹೀರೋ ಎಂದು ಗುರುತಿಸಲ್ಪಟ್ಟ ರಂಗಪ್ಪ ಹುಲಿಯಪ್ಪ ಹಾಗೂ ಇತರೆ ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು. ಕಾಲೇಜಿನ ಆಡಳಿತ ಮಂಡಳಿ ವಿದ್ಯಾರ್ಥಿಗಳು ಮಾಜಿ ಸೈನಿಕರು ಸಮಾಜದ ಮುಖಂಡರು ಉಪಸ್ಥಿತರಿದ್ದರು.

