ನಿಮ್ಮ ಬರಹಕ್ಕೆ ನಮ್ಮ ಸೇತುವೆ ವಿಶೇಷ ಸಂಚಿಕೆ
ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕು ಹಂಪಿ ಪರಿಸರದಲ್ಲಿ ನಿಸರ್ಗ ದೇವತೆಯ ತವರೂರಂತೆ ಕಂಗೊಳಿಸುತ್ತದೆ.ವಿಜಯನಗರದ ಕಮಲಾಪುರ್ ಕೆರೆ ಐತಿಹಾಸಿಕ ಪ್ರಸಿದ್ಧಿಯನ್ನು ಪಡೆದಿದೆ ಅಲ್ಲಿ ಜೀವಿಸುವ ವಿವಿಧ ರೀತಿಯ ಪಕ್ಷಿಗಳ ಸುಂದರ ವ ವಿಹಂಗಮ ನೋಟ ರೆಕ್ಕೆ ಬಿಚ್ಚಿ ಹಾರಾಡುವ ನೀರ ಹಕ್ಕಿಗಳು ವಿವಿಧ ಜಾತಿಯ ಹಕ್ಕಿಗಳನ್ನು ನಾವು ಕಾಣಬಹುದಾಗಿದೆ .ಸಂಜೆ ಹೊತ್ತ ಸೂರ್ಯಸ್ತ ನೋಡುವುದೇ ಅತಿ ಸುಂದರವಾಗಿದೆ ನಮ್ಮ ಬದುಕಿನಲ್ಲಿ ಅತ್ಯಂತ ಉತ್ಸಾಹ ಸಂಭ್ರಮಿಸುವುದು ಪ್ರಕೃತಿಯಿಂದ ಮಾತ್ರ ಸಾಧ್ಯ ಅತ್ಯಂತ ಪುರಾತನ ಕಾಲದಿಂದಲೂ ಪ್ರಕೃತಿ ಆರಾಧನೆ ಮಾಡುತ್ತಿದ್ದರು.
ಸೂರ್ಯದೇವನನ್ನು ಹಾಗೆಯೇ ವಿವಿಧ ಮರಗಳನ್ನೇ ದೇವರಾಗಿ ಕಾಡುವ ಮನೋಭಾವ ಉಳ್ಳವರು ನಾವಾಗಿದ್ದೇವೆ.ಕಮಲಾಪುರ ಕೆರೆ ವಿವಿಧ ಬೆಳೆಗಳಿಗೆ ಆಸರೆಯಾಗಿದೆ ಕಟ್ಟೆ ಬರಮಪ್ಪ ಮುಂಭಾಗದಿಂದ ವೀಕ್ಷಿಸಿದರೆ ಎಲ್ಲೆಲ್ಲೂ ಹಚ್ಚ ಹಸಿರು ಕಣ್ಗೊಳಿಸುತ್ತದೆ ನಮ್ಮ ಮನ ಮುದ ನೀಡುತ್ತದೆ ಹಾಗೆ ಮುಂದೆ ಸಾಗಿದರೆ ಹಂಪಿ ಬಯಲು ವಸ್ತು ಸಂಗ್ರಹಾಲಯ ಎಂದೇ ಪ್ರಸಿದ್ಧಿಯನ್ನು ಪಡೆದಿದೆ ಎಲ್ಲಿ ನೋಡಿದರಲ್ಲಿ ಸುಂದರ ಪರಿಸರದಲ್ಲಿ ತುಂಗಾ ತೀರದ ಮಡಿಲಲ್ಲಿ ವೈವಿಧ್ಯಮಯವಾದ ದೇವಾಲಯಗಳು ಕಂಡುಬರುತ್ತದೆ ಮನಸ್ಸಿಗೆ ಮುದ ಸಂಭ್ರಮಿಸುತ್ತದೆ.
ಹಾಗೆಯೇ ನಾವು ಹಂಪಿ ಕನ್ನಡ ವಿಶ್ವವಿದ್ಯಾನಿಲಯ ದೇವಸ್ಥಾನ.ಹಂಪಿ ಜೂ.ಕಣ್ತುಂಬಿಕೊಳ್ಳಲು ಅತೀವ ಸಂತಸ ಅನಿಸುತ್ತದೆ. ಕಮಲಾಪುರದ ಹಳ್ಳಿಕೆರೆ ಮಡಿಲಲ್ಲಿ ಅದ್ಭುತ ರಮ್ಯ ನಿಸರ್ಗಧಾಮವೇ ಆವರಿಸಿಕೊಂಡಿದೆ ಈ ನಿಸರ್ಗ ಮಡಿಲಲ್ಲಿ ನಮ್ಮ ನಾಡು ನುಡಿ ಸಂಸ್ಕೃತಿ ಪ್ರತೀಕವಾಗಿ ನಮ್ಮ ಭಾಷೆಯ ಅಸ್ಮಿತೆಯ ಸಂಕೇತವಾಗಿ ಕನ್ನಡ ವಿಶ್ವವಿದ್ಯಾನಿಲಯ ಕಂಗೊಳಿಸುತ್ತದೆ ಡಾ.ಚಂದ್ರಶೇಖರ್ ಕಂಬಾರ್ ಮೊದಲ ಕುಲಪತಿ ಕಂಡ ಕನಸು ನನಸಾಗಿದೆ ಎಲ್ಲೆಲ್ಲಿಯೂ ಅದ್ಭುತವಾದ ದೇಶಿ ಶೈಲಿಯ ಕಟ್ಟಡಗಳು ಕಂಗೊಳಿಸುತ್ತವೆ ಕನ್ನಡ ನಾಡು ನುಡಿ ಸಂಸ್ಕೃತಿಗೆ ಅದ್ಭುತವಾದ ಕೊಡುಗೆ ನೀಡುತ್ತಿದೆ.
ಅದರ ಜೊತೆಗೂಡಿ ಶಿಲ್ಪವನ ತಿಳಿಯ ವ್ಯಕ್ತಿಗಳಿಂದ ಶಿಲ್ಪವನಗಳಲ್ಲಿ ನಿಸರ್ಗವನ ದೇವತೆ ರಾರಾಜಿಸುತ್ತದೆ ನಮ್ಮ ಕಣ್ಣಿಗೆ ಶಿವ ಸಂಭ್ರಮ ಮನೆ ಮಾಡಿಕೊಳ್ಳುತ್ತದೆ ಹಲವು ಪಕ್ಷಿಗಳಿಗೆ ಪ್ರಾಣಿಗಳಿಗೆ ಆಶ್ರಯದಾತವಾಗಿದೆ
ಜಾನಪದ ಸಾಂಸ್ಕೃತಿಕ ಶಿಲ್ಪ ಮೂರ್ತಿಗಳು ಪಟ್ಟ ಕನ್ನಡತನವನ್ನು ಮೈ ರೋಮಾಂಚನಗೊಳಿಸುತ್ತದೆ
ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ ಕನ್ನಡಕ್ಕೆ ಕೈ ಎತ್ತು ಬಾರದು ನಿನಗೆ ಆಪತ್ತು
ಎನ್ನುವಂತೆ ಸಾಕಾರಗೊಳ್ಳುತ್ತಿದೆ ವಿವಿಧ ಜಾತಿಯ ಮರಗಳ ವನ ರಾಶಿ ನಮ್ಮನ್ನು ಕೈಬೀಸಿ ಕರೆಯುತ್ತದೆ .ಇದಕ್ಕೆ ಶ್ರಮಿಸಿದ ಕನ್ನಡ ವಿಶ್ವವಿದ್ಯಾನಿಲಯದ ಸರ್ವ ಅಧಿಕಾರಿಗಳಿಗೆ ಅದರ ಕೀರ್ತಿ ಸಲ್ಲುತ್ತದೆ ದಾರಿಗುಂಟ ಅದ್ಭುತವಾಗಿ ಅರಳಿಕೊಂಡಿರುವ ಗಿಡಗಳ ರಾಶಿಯಲ್ಲಿ ತಂಪಾದ ಗಾಳಿ ಅತ್ಯಂತ ಸಂತೋಷವೆನಿಸುತ್ತದೆ ಒಮ್ಮೆ ನೀವು ಭೇಟಿ ನೀಡಿ ಅದರ ಅನುಭವವನ್ನು ಪಡೆಯಬಹುದಾಗಿದೆ ಅಚ್ಚ ಹಸಿರು ಎಲೆಗಳು ತುಂತುರು ಮಳೆಗೆ ನವಿಲುಗರಿಯಂತೆ ಕೈಬೀಸುತ್ತ ಸಂಭ್ರಮದಿಂದ ಸ್ವಾಗತ ಕೋರುತ್ತವೆ .ಎತ್ತ ಕತ್ತೆತ್ತಿದರು ನಿಸರ್ಗ ಕಣ್ ಚುಂಬಿಸುತ್ತದೆ .
ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕು ಸುತ್ತಮುತ್ತ .ಬಾಳೆ ಗಿಡಗಳಲಿ ಕೆಂಪಗೆ ಅರಳುತ್ತಿರುವ ಚಿಗುರು ಬಾಳಿ ಕಬ್ಬಿನ ಗದ್ದೆಗಳು ಬತ್ತದ ತೆನೆ ಹೊಡೆದ ಹಸಿರು ಹಾಲಗಲ್ಲಾ ತುಂಬಿದ ಭತ್ತದ ತೆನೆ ತೆನೆಗಳು.ನೀಲಗಿರಿ ಮರಗಳು ಮಾವು ತೆಂಗು ಬೇವಿನ ಮರಗಳು .ಎಲ್ಲೋ ಹುಡುಕಿದೆ ಇಲ್ಲದ ಪರಿಸರ ಇಲ್ಲೇ ಇರುವ ನಿಸರ್ಗದೇವತೆ ತಿಳಿಯದಾದವು ನಮ್ಮೊಳಗ ನೋಡ ಬನ್ನಿ ಪ್ರಕೃತಿ ಒಡಲ ಒಮ್ಮೆ ಸುತ್ತೋಣ ಕೋಶ ಓದಿ ದೇಶ ಸುತ್ತಿ
ಸುಂದರ ಪರಿಸರಗಳನ್ನು ನೋಡುವುದರ ಮೂಲಕ ನಮ್ಮಲ್ಲಿ ಲವಲವಿಕೆ ಸಂಭ್ರಮಿಸುತ್ತದೆ ಬದುಕನ್ನು ಅತ್ಯಂತ ಪ್ರೀತಿಪೂರ್ವಾಗಿ ಸ್ವೀಕರಿಸೋಣ
.
ಅದಮ್ಯ ಚೈತನ್ಯ ನಮ್ಮ ಮನಸ್ಸು ಮುದ ನೀಡುವ ನಮ್ಮ ಬದುಕಿನಲ್ಲಿ ಹೊಸ ಭರವಸೆಗಳನ್ನು ಹೊಸ ಭಾವಗಳನ್ನು ಹುಟ್ಟು ಹಾಕುತ್ತದೆ ದೌರ್ಬಲ್ಯದಲ್ಲಿ ಜೀವನವಿಲ್ಲ ದೌರ್ಬಲ್ಯ ಮೆಟ್ಟಿ ನಿಲ್ಲೋಣ
ಬದುಕನ್ನು ಅತ್ಯಂತ ಸಂಭ್ರಮದಿಂದ ಸಂಭ್ರಮಿಸೋಣ
ಲೇಖನ : ಶ್ರೀ ವೆಂಕಟೇಶ ಬಡಿಗೇರ್ ಕಮಲಾಪುರ
ಕವಿ ಮತ್ತು ಸಾಹಿತಿಗಳು ವಿಜಯನಗರ ಜಿಲ್ಲೆ
