ಸಂಪೂರ್ಣ ಶಿಥಿಲಾ ವಸ್ಥೆಯಲ್ಲಿರುವ ಶಾಲಾ ಕೊಠಡಿ ಗಳಿಗೆ ಭೇಟಿ ನೀಡಿದ ಶಾಸಕ ನೇಮಿರಾಜ್ ನಾಯ್ಕ್

Loading

(ವಿಜಯನಗರ ಜಿಲ್ಲೆ)ಹಗರಿಬೊಮ್ಮನ ಹಳ್ಳಿ:  ತಾಲೂಕಿನ ಬಾಚಿಗೊಂಡನಹಳ್ಳಿಯ ಸ.ಹಿ.ಪ್ರಾ ಶಾಲೆಗೆ ಭೇಟಿ ನೀಡಿದರು. ಶಾಲೆಯ ಎಸ್. ಡಿ.ಎಂ.ಸಿ. ಅಧ್ಯಕ್ಷರು ಮಾತನಾಡಿ ಸುಮಾರು 75ವರ್ಷಗಳ ಹಳೆಯದಾದ ಶಾಲಾ ಕಟ್ಟಡ ಈ ಕಟ್ಟಡಗಳಲ್ಲಿ ಶಾಲಾ ಮಕ್ಕಳು ನೆ ತರಗತಿ ಯಿಂದ, 7ನೇಯ ತರಗತಿ ರವರಿಗೆ ಇದ್ದು ಇಲ್ಲಿ 13 ಕೂಠ ಡಿ ಗಳಿದ್ದು ಅದರಲ್ಲಿ 3 ಕೊಠಡಿ ಗಳು ಮಾತ್ರ ಸ್ವಲ್ಪಮಟ್ಟಿಗೆ ಸುದರಿಸಿವೆ. ಇನ್ನುಹತ್ತು ಕೊಠಡಿ ಗಳು ಮಳೆಗೆ ನೆನೆದು ಪೂರಾ ಶಿಥಿಲಾವಸ್ಥೆ ಈಗಗಲೆ ಕುಸಿದು ಬಿದ್ದಿವೆ. ವಿದ್ಯಾರ್ಥಿಗಳು ಒಂದೇ ಕೊಠಡಿಯಲ್ಲಿ ಕುಳಿತು ಪಾಠ ಕೆಳಲು ತೊಂದರೆ ಆಗುತ್ತಿದೆ. ಈ ಹಳೆಯದಾದ ಕಟ್ಟಡವನ್ನು ತೆರವುಗೊಳಿಸಿ ಹೊಸದಾಗಿ ಶಾಲೆ ಕೊಠಡಿಗಳ ನಿರ್ಮಿಸಲು ಬಹಳ ವರ್ಷಗಳಿಂದ ಇದಕ್ಕೆ ಸಂಭಂದ ಪಟ್ಟಂತ ಅಧಿಕಾರಿಗಳಿಗೆ ಹಾಗೂ ಈ ಹಿಂದೆ ಶಾಸಕರಲ್ಲಿ ಮಾಡಿದ್ದೇವೆ.

ಆದರೂ ಇದುವರೆಗೂ ಯಾವುದೇ ತರಹದ ಪ್ರತಿಕ್ರಿಯೆ ಇಲ್ಲ. ಈ ಶಾಲೆಯು ಅಭಿವುದ್ದಿ ಕೆಲಸ ಮರೀಚಿಕೆಯಾಗಿಯೇ ಉಳಿದಿದೆ. ಈಗ ಬಂದಿರುವತಕ್ಕಂತ ಹಾಲಿ ಶಾಸಕರಿಗೆ ಮನವಿ ಕೊಟ್ಟಿದ್ದೇವೆ. ಶಾಸಕರು ಕೂಡಲೇ ಈ ದಿವಸ ಬೀಟಿನೀಡಿ, ಬೀಳುವ ಹಂತದಲ್ಲಿರುವ ಕೊಠಡಿ ಗಳನ್ನು ವೀಕ್ಷಿಸಿ. ನಂತರ ಮಾತನಾಡಿ, ಈ ಗ್ರಾಮದ ಶಾಲೆಯ ಹಳೆಯ ಕಟ್ಟಡವು ಈಗಾಗಲೇ ಶಿಥಿಲಾವಸ್ಥೆಯಲ್ಲಿರುವುದನ್ನು ನಾವು ನೋಡಿದಾಗ ಅದರಲ್ಲಿ ಇವತ್ತು ಶಾಲಾ ಮಕ್ಕಳು ಪ್ರಾರ್ಥನೆ ಮುಗಿಸಿಕೊಂಡು ಹೋಗುವಷ್ಟರಲ್ಲಿ ಸ್ವಲ್ಪ ಶಾಲೆಯ ಪಿಲ್ಲರ್ ಚಾವಣಿಬಿದ್ದಿದೆ.

ಇದನ್ನು ನೋಡಿದರೆ ಸ್ವಲ್ಪದರಲ್ಲಿಯೇ ದೇವರು ದೊಡ್ಡವನು ಚಾವಣಿ ಕೂಸಿತದಿಂದ ಪಾರಾಗಿದ್ದಾರೆ ಅಂತ ಯಾವುದೇ ದುರ್ಘಟನೆ ನಡೆದಿಲ್ಲ, ಹಾಗಾಗಿ ಈ ಗ್ರಾಮದಲ್ಲಿ ಇನ್ನೂ ಅರು ಕೊಠಡಿಗಳನ್ನು ನಿರ್ಮಿಸುವಂತಹ ಕೆಲಸ ಮಾಡಲು ಆದೇಶಿಸುತ್ತೇನೆ. ಈ ಗ್ರಾಮದವರಾದ ಶಾಸಕರಾದಂತಹ ಶ್ರೀ ಚನ್ನಬಸವನ ಗೌಡ್ರು ಗಾಂಧೀಜಿಯವರ ಯಾವ ರೀತಿ ಇದ್ದು, ಆ ರೀತಿಯಲ್ಲಿ ಚನ್ನಬಸನಗೌಡರು.: ಶಾಸಕರಾಗಿ ಸಂಸತ್‌ ಸದಸ್ಯರಾಗಿ, ಅಪಾರ ಸೇವೆಯನ್ನು ಸಲ್ಲಿಸಿರುವ ಅಂತ ಗ್ರಾಮ ಇದು ಇಡೀ ರಾಜ್ಯವೇ ಇವರ ಹೆಸರನ್ನು ಕೊಂಡಾಡುವನ್ನು ಹೆಸರು ಮಾಡಿದವರು.

ಈ ಗ್ರಾಮದಲ್ಲಿ 10 ವರ್ಷಗಳಿಂದ ಅಭಿವೃದ್ಧಿ ಮತ್ತು ಶಾಲ ಕಟ್ಟಡವಾಗಿರಬಹುದು, ಅಥವಾ ಯಾವುದೇ ಕಾಮಗಾರಿ ಯಾಗಿರಬಹುದು, ಅಭಿವೃದ್ಧಿಯಿಂದ ತುಂಬಾ ನಿರ್ಲಕ್ಷವಾಗಿದೆ. ಇಲ್ಲಿ ಸುಮಾರು ಶಾಲಾ ಕೊಠಡಿಗಳಿವೆ ಆದರೆ ಮಕ್ಕಳಿಗೆ ಕುಳ್ಳರಿಸಿಕೊಂಡು ಬೋಧನೆ ಮಾಡುವುದಕ್ಕೆ ಯೋಗ್ಯವಾದು ದಲ್ಲ ಹಾಗಾಗಿ ಎಲ್ಲಾ ಕೊಠಡಿಗಳನ್ನು ನೆಲಸಮಗೊಳಿಸಿ, ಹೊಸದಾಗಿ

ಕೊಠಡಿಗಳನ್ನು ನಿರ್ಮಾಣ ಮಾಡಲು ವ್ಯವಸ್ಥೆಗೆ ಹೊಸ ಕಲ್ಪಿಸಲಾಗುವುದು, ಈಗಾಗಲೇ ಟೆಂಡರ ಪ್ರಕ್ರಿಯೆ ಹಂತದಲ್ಲಿದೆ. ಮುಗಿದ ನಂತರ ಅದನ್ನು ಆದಷ್ಟು ಬೇಗ ಕಾಮಗಾರಿ ಯನ್ನು ಪ್ರಾರಂಭಿಸಲಾಗುತ್ತದೆ ಎಂದರು .

ಮಾಜಿ ಎಸ್ಟಿ ಎಂ ಸಿ.ಅಧ್ಯಕ್ಷರಾದ ಕೊಪ್ಪಳದ ರೋಹಿತ್, ಹೊಸೂರು ಭರಮಲಿಂಗಪ್ಪ, ಅಧ್ಯಕ್ಷರು ಹಾರುಕಡ್ಡಿ ಭರತೇಶ | ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ. ಸಿ. ಆನಂದ .. ಗ್ರಾಮ.ಪಂ. ಅಭಿವೃದ್ಧಿ ಅಧಿಕಾರಿಗಳಾದ, ಮಾಗಳದ ನಿಂಗಪ್ಪ, ಪಕ್ಷದ ತಾಲೂಕು ಅಧ್ಯಕ್ಷರಾದ ವೈ.ಮಲ್ಲಿಕಾರ್ಜುನ, ಪುರಸಭೆಯ ಸದ್ಯಸಾರಾದ, ಬಾದಾಮಿ ಮೃತ್ಯುಂಜಯ, ಸರ್ದಾರ ಯಮನೂರಪ್ಪ, ಎಂ.ಪೀ.ಕೊಟ್ರೇಶ್, ಶೇಖರಪ್ಪ, ಗ್ರಾಮದ ವೈದ್ಯಧಿಕಾರಿಗಳಾದ, ಈ ಡಾ.ಶಿವರಾಜ್‌, ಹಾಗೂ ಹಿರಿಯ ಮುಖಂಡರು, ಹಾಗೂ ಶಾಲಾ ವಿದ್ಯಾರ್ಥಿಗಳ ಪೋಷಕರು, ಶಾಲಾ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *