ನಿಮ್ಮ ಬರಹಕ್ಕೆ ನಮ್ಮ ಸೇತುವೆ ವಿಶೇಷ ಸಂಚಿಕೆ
ಇಂದಿನ ಸುಪ್ರಸಿದ್ಧ ಐತಿಹಾಸಿಕ ವಿಶ್ವಪರಂಪರೆ ತಾಣವಾದ ಹಂಪಿಯು ಅಂದಿನ ವಿಜಯನಗರ ಸಾಂಸ್ಕೃತಿಕ ಐತಿಹಾಸಿಕ ಗತವೈಭವವನ್ನು ಪ್ರತಿಬಿಂಬಿಸುವ ಪ್ರತಿಬಿಂಬಕವಾಗಿದೆ. ದಕ್ಷಿಣ ಕಾಶಿ ಎನಿಸಿಕೊಳ್ಳುವ ಹಂಪಿಯ ಶ್ರೀವಿರೂಪಾಕ್ಷೇಶ್ವರನ ದರ್ಶನದಿಂದ ತಮ್ಮ ಜೀವನವನ್ನು ಸಾರ್ಥಪಡಿಸಿ ಕೊಳ್ಳುವ ನಿಟ್ಟಿನಲ್ಲಿ ದೇಶ ವಿದೇಶದಿಂದ ಹಲ ವಾರು ಯಾತ್ರಿಕರು ಆಗಮಿಸಿ ತುಂಗಭದ್ರೆಯಲ್ಲಿ ನಿಂದು ವಿರೂಪಾಕ್ಷನ ದರ್ಶನದಿಂದ ಪುನೀತರಾಗುತ್ತಾರೆ.
ವಿಜಯನಗರವು ಸಂಗೀತಕ್ಕೆ ಪ್ರಾತಿನಿಧ್ಯ ನೀಡಿರುವುದಕ್ಕೆ ಇಂದು ಹಂಪಿಯಲ್ಲಿ 5ಕ್ಕಿಂತ ಅಧಿಕ ದೇವಾಲಯಗಳಲ್ಲಿ ಕಂಡುಬರುವ ಸಂಗೀತ ಸ್ಥಂಭಗಳಿಂದ ಹೊರಹೊಮ್ಮುವ ಸರಿಗಮಪದನಿಸ ಜೈಂಕಾರ , ಇಂದಿನ ಆಧುನಿಕ ಇಂಜಿನಿಯರ್ಗಳಿಗೂ ನಿಬ್ಬೆರಗಾಗಿಸುವ ವಾಸ್ತು ಶೈಲಿ, ವಿಜಯನಗರದ ವಾಸ್ತುಶಿಲ್ಪಗಳಲ್ಲಿ ಸಂಗೀತಗಾರರ, ಸಂಗೀತವಾದಕರ ಹಾಗೂ ಸಂಗೀತ ಪರಿಕರಗಳ ಕೆತ್ತನೆಗಳು ವಿಜಯನಗರ ಅರಸರ ಸಂಗೀತ ಆಸಕ್ತಿಯನ್ನು ಬಿಂಬಿಸುತ್ತದೆ.
ವಿಜಯನಗರ ಅರಸರು ಹಲವಾರು ಮಹತ್ತರ ಕೃತಿಗಳನ್ನು ರಚಿಸಿರುತ್ತಾರೆ. ಹೀಗೆ ವಿಜಯನಗರ ವೈಭವವು ಇಡೀ ವಿಶ್ವ ವಿಖ್ಯಾತಿಯಾಗಿ ವಿಜೃಂಭಿಸಿದೆ,
ಲೇಖನ : ಜ್ಯೋತಿ.ಎಂ.
ಆಂಗ್ಲ ಅಧ್ಯಾಪಕರು
ಸಂಗೀತ ಮತ್ತು ನೃತ್ಯ ವಿಭಾಗ, ಕನ್ನಡ ವಿಶ್ವವಿದ್ಯಾಲಯ ಹಂಪಿ
