ರಾಜ್ಯ ರೈತ ಸಂಘದಿಂದ 43 ನೇ ರೈತ ಹುತಾತ್ಮ ದಿನಾಚರಣೆ

Loading

ಹಾಸನ : ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಗಾಂಧಿ ವೃತ್ತದ ಬಳಿ ಬಯಲು ಜಾಗದಲ್ಲಿ ಈ ಸಭೆ ಸಮಾರಂಭವನ್ನು ಆಯೋಜಿನೆ ಮಾಡಲಾಗಿತ್ತು. ರೈತರ ಹಕ್ಕು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಸಮಿತಿಯ ಆಶ್ರಯದಲ್ಲಿ 43 ನೇ ರೈತ ಹುತಾತ್ಮ ದಿನಾಚರಣೆಯ ಸಭೆ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಜಿ.ಎನ್.ಬಾಬಣ್ಣ. ಶಿಟ್ಲಘಟ್ಟ ಇವರು ಮಾತನಾಡಿ ನರಗುಂದ ಹಾಗೂ ನವಲಗುಂದ ಚಳುವಳಿಯ ನೇತೃತ್ವದಲ್ಲಿ. ರೈತ ಭಂಡಾಯದ ವೇಳೆಯಲ್ಲಿ ಹಲವಾರು ರೈತರು ಗುಂಡೇಟಿಗೆ ಬಲಿಯಾದರು.ಇವರ ಸ್ಮರಣಾರ್ಥ ರೈತ ಹುತಾತ್ಮ ದಿನಾಚರಣೆ ಹಮ್ಮಿಕೊಂಡಿದ್ದು. ಈ ಸಭೆಯ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ರೈತ ವಿರೋಧಿ ಕಾಯ್ದೆ ಗಳನ್ನು ವಾಪಸ್ಸು ಪಡೆಯಬೇಕು.ಸಂಕಷ್ಟದಲ್ಲಿ ಇರುವ ರೈತರನ್ನು ರಕ್ಷಿಸಬೇಕು.

ರಾಜ್ಯದ ರೈತರು ಮೆಳೆ ಆಗದೇ ಕಂಗಾಲಾಗಿದ್ದು ರಾಜ್ಯ ಸರ್ಕಾರ ರೈತರಿಗೆ ಶೀಘ್ರದಲ್ಲಿ ಬರ ಘೋಷಣೆ ಮಾಡಿ ಪರಿಹಾರವನ್ನು ಹಾಕಲು ಅಲ್ಲದೆ ರೈತ ಸಂಘದಿಂದ ಕುಕನೂರು ತಾಲ್ಲೂಕಿನ ತಹಶೀಲ್ದಾರ ಮೂಲಕ ರಾಜ್ಯ ಸರ್ಕಾರಕ್ಕೆ ಹಲವಾರು ಭಾರಿ ಮನವಿ ಸಲ್ಲಿಸಿದರೂ ಕೂಡ ರಾಜ್ಯ ಸರ್ಕಾರ ರೈತರಿಗೆ ಏನು ಮಾಡಲಿಲ್ಲ.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರಿಗೆ ಅನ್ಯಾಯ ಧೋರಣೆ ಮಾಡುತ್ತಿದ್ದೇವೆ ಹಾಗಾಗಿ ಹಳ್ಳಿಯಲ್ಲಿ ರೈತ ಸಂಘಟನೆ ಮಾಡುವುದು ಅವಶ್ಯಕತೆ ಇದೆ ಎಂದರು.

ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ರುದ್ರಪ್ಪ ಕೋಳೂರ. ರಾಜ್ಯ ಕಾರ್ಯಾಧ್ಯಕ್ಷ ನಾಗರಾಜ ಗೋನಾಳ. ಕೊಪ್ಪಳ ಜಿಲ್ಲಾಧ್ಯಕ್ಷ ಬಸವರಾಜ ಹೂಗಾರ.ಹಾಸನ ಜಿಲ್ಲಾಧ್ಯಕ್ಷ ತಾಂಡವೇಶ್ವರ. ಹಾ‌ಸನ ಮಹಿಳಾ ಜಿಲ್ಲಾಧ್ಯಕ್ಷರಾದ ಪ್ರೇಮಾ ಚನ್ನರಾಯಪಟ್ಟಣ. ಕುಕನೂರು ತಾಲೂಕ ಘಟಕದ ಮಹಿಳಾ ಪ್ರಧಾನ ಕಾರ್ಯದರ್ಶಿ ಸುಜಾತಾ ಗೂಳರಡ್ಡಿ. ಯರೇಹಂಚಿನಾಳ ಗ್ರಾಮ ಘಟಕದ ಅಧ್ಯಕ್ಷ ಬಸಪ್ಪ ಕಮತರ. ರಾಜ್ಯ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು,

Leave a Reply

Your email address will not be published. Required fields are marked *